Mysore
30
clear sky

Social Media

ಶುಕ್ರವಾರ, 06 ಮಾರ್ಚ್ 2026
Light
Dark

ಶೇ.100ರಷ್ಟು ತೆರಿಗೆ ವಿನಾಯಿತಿ ನೀಡಿದ ಸರ್ಕಾರ; ಅರ್ಧ ಶತಕ ಬಾರಿಸಿದ ಅನ್ನ

ಮೈಸೂರು: ಮೈಸೂರಿನ ಗಗನ್ ಪಿಕ್ಚರ್ಸ್ ನಿರ್ಮಿಸಿರುವ ‘ಅನ್ನ’ ಕನ್ನಡ ಚಲನಚಿತ್ರ ೫೦ ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳೂ ಸೇರಿದಂತೆ ಇನ್ನು ಹೆಚ್ಚಿನ ಜನರನ್ನು ತಲುಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಚಿತ್ರಕ್ಕೆ ಶೇ. ೧೦೦ರಷ್ಟು ತೆರಿಗೆ ವಿನಾಯಿತಿ ನೀಡಿದೆ ಎಂದು ಚಿತ್ರದ ನಿರ್ದೇಶಕ ಎನ್. ಎಸ್. ಇಸ್ಲಾವುದ್ದೀನ್ ಹರ್ಷ ವ್ಯಕ್ತಪಡಿಸಿದರು.

ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಪ್ರೇಕ್ಷಕರಷ್ಟೇ ಅಲ್ಲದೆ, ನಗರ ಪ್ರದೇಶದ ಪ್ರೇಕ್ಷಕರೂ ಅನ್ನ ಚಲನಚಿತ್ರಕ್ಕೆ ಮನ ಸೋತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಮೈಸೂರು ಮತ್ತು ಚಾಮರಾಜನಗರದಲ್ಲಿ ಅ.

೨೫ರಂದು ಚಿತ್ರ ೫೦ ದಿನಗಳನ್ನು ಪೂರೈಸುತ್ತಿ ದ್ದು, ಚಿತ್ರಕ್ಕೆ ತೆರಿಗೆ ವಿನಾಯಿತಿ ದೊರೆತಿರುವುದರಿಂದ ಮತ್ತಷ್ಟು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲು ಅನುಕೂಲವಾಗಿದೆ. ಶುಕ್ರವಾರದಿಂದ ಮೈಸೂರಿನ ಪದ್ಮಾ ಹಾಗೂ ಹಾಸನದ ಪೃಥ್ವಿ ಚಿತ್ರಮಂದಿರಗಳಲ್ಲೂ ಅನ್ನ ಚಿತ್ರ ಪ್ರದರ್ಶನವಾಗಲಿದೆ. ರಾಜ್ಯದ ಬೇರೆ ಬೇರೆ ಕಡೆಗಳಿಂದ ಲೂ ಚಿತ್ರ ಪ್ರದರ್ಶನಕ್ಕೆ ಬೇಡಿಕೆ ಇರುವುದರಿಂದ ೫೦ ದಿನಗಳ ಬಳಿಕ ಇನ್ನೂ ೨೦ರಿಂದ ೨೫ ಚಿತ್ರಮಂದಿರಗಳಲ್ಲೂ ಅನ್ನ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುವುದು ಎಂದರು. ಚಿತ್ರ ಕಲಾವಿದರಾದ ಸಿ. ಆರ್. ಪದ್ಮಶ್ರೀ, ಭುವನ ಮೈಸೂರು, ಸಂಭಾಷಣಕಾರ ಸಿದ್ದು ಪ್ರಸನ್ನ, ಚಿತ್ರದ ನಿರ್ಮಾಪಕ ಎಸ್. ಬಸವರಾಜು, ಸಹಾಯಕ ನಿರ್ದೇಶಕ ಶಿಶಿರ್, ಮಹೇಶ್, ಮಹದೇವ್, ಕಾತ್ಯಾಯಿನಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

Tags:
error: Content is protected !!