Mysore
17
scattered clouds

Social Media

ಸೋಮವಾರ, 12 ಜನವರಿ 2026
Light
Dark

ವೀರಪ್ಪನ್ ಕಾಡಲ್ಲಿ ಗನ್ ಹಿಡಿದು ಓಡಾಟ; ಡಾಕ್ಟರ್ ಸೇರಿ ಮೂವರು ಅಂದರ್

ಹನೂರು: ನಾಡ ಬಂದೂಕು ಮತ್ತು ಹೈ ಫ್ರೆಶರ್ ಏರ್ ಗನ್ ಹಿಡಿದು ಕಾಡೊಳಗೆ ಓಡಾಡಿದ್ದ ಮೂವರನ್ನು ಬಂಧಿಸಿರುವ ಘಟನೆ ಹನೂರು ತಾಲೂಕಿನ ಗೋಪಿನಾಥಂ‌ ಸಮೀಪದ ಆಲಂಬಾಡಿ ಬಳಿ ನಡೆದಿದೆ.

ತಾಲೂಕಿನ ಹೊಗೆನಕಲ್ ಗ್ರಾಮದ ಮಾರಿಮುತ್ತು, ನಲ್ಲಾಂಪಟ್ಟಿ ಗ್ರಾಮದ ಕವಿನ್ ಕುಮಾರ್ , ವಿಘ್ನೇಶ್ ಎಂಬುವರು ಬಂಧಿತ ಆರೋಪಿಗಳು.

ಘಟನೆ ವಿವರ: ಗೋಪಿನಾಥಂ ಬಳಿಯ ಆಲಂಬಾಡಿ ಸಮೀಪದ ಅಕ್ರಮವಾಗಿ ಇವರು ಗನ್ ಗಳೊಟ್ಟಿಗೆ ಕಾಡು ಪ್ರವೇಶಿಸಿ ಓಡಾಡುತ್ತಿದ್ದ ಇವರನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದ್ದಾರೆ. ಬಂಧಿತರಲ್ಲಿ ಓರ್ವ ವೈದ್ಯನಿದ್ದಾನೆ ಎಂದು ಮೂಲಗಳು ತಿಳಿಸಿದ್ದು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಸದ್ಯ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!