ಮೈಸೂರು : ನಗರದ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯದ ಪರವಾಗಿ ಬರ ಮಾಡಿಕೊಳ್ಳಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ಕೈಗಳಿಂದ ಮುಗಿದು ಸ್ವಾಗತಿಸಿದರು.

ಬಳಿಕ ಜಿಲ್ಲಾಡಳಿತ ಪರವಾಗಿ ಸ್ವಾಗತಿಸಲಾಯಿತು.ನಂತರ ರಸ್ತೆ ಮಾರ್ಗವಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ರಾಷ್ಟ್ರಪತಿ ಅವರನ್ನು ಆದಿವಾಸಿ ನೃತ್ಯಗಳ ಮೂಲಕ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಕೊಡವರ ನೃತ್ಯ, ಜೇನುಕುರುವ,ಕೊರಗ ಸಮುದಾಯದ ಕಲಾವಿದರು ಆಕರ್ಷಣೆಯ ಹೆಜ್ಜೆಗಳನ್ನು ಹಾಕಿ ಮೆರಗುತುಂಬಿದರು.





