Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ಮಗ ಶ್ರೀದತ್ತಾತ್ರೇಯನನ್ನು ತೋರದಂತೆ ಮಡಿಲಲ್ಲೇ ನಿಲ್ಲಿಸಿಕೊಂಡಿದ್ದ ಲಕ್ಷ್ಮಿ

ಮೈಸೂರು: ಮೈಸೂರು ದಸರೆಯಲ್ಲಿ ಭಾಗವಹಿಸಲು ಬಂದಿದ್ದ ಲಕ್ಷ್ಮಿ ಆನೆಯು ಗಂಡು ಮರಿಗೆ ಜನ್ಮ ನೀಡಿದ್ದು, ಇದಕ್ಕೆ ಶ್ರೀದತ್ತಾತ್ರೇಯ  ಎಂದು ಹೆಸರಿಡಲಾಗಿದೆ. ಅರಮನೆಯಲ್ಲಿ ಗಂಡು ಮಗುವಿಗೆ ಜನನ ನೀಡಿದ್ದ ತಾಯಿ ಲಕ್ಷ್ಮಿ   ,ಪುತ್ರ ಶ್ರೀದತ್ತಾತ್ರೇಯನನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವೀಕ್ಷಿಸಿ ಆರೋಗ್ಯ ವಿಚಾರಿಸಿದರು. ಅರಮನೆಯ ಆನೆ ಲಾಯದಲ್ಲಿ ಪ್ರತ್ಯೇಕವಾಗಿ ಇರಿಸಿರುವ ಲಕ್ಷ್ಮಿ,ಶ್ರೀದತ್ತಾತ್ರೇಯನನ್ನು ಕೆಲ ಹೊತ್ತು ನೋಡಿದರು.
ಬಳಿಕ ಡಿಸಿಎಫ್ ಡಾ.ವಿ.ಕರಿಕಾಳನ್ ಅವರಿಂದ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಆನೆಯ ಹತ್ತಿರಕ್ಕೆ ಹೋಗಲು ಸಾಧ್ಯವಾಗದ ಕಾರಣ ದೂರದಲ್ಲೇ ನಿಂತು ವೀಕ್ಷಿಸಿದರು. ಹತ್ತಕ್ಕೂ ಜನರು ದೂರದಲ್ಲಿ ತಮ್ಮನ್ನು ನೋಡುತ್ತಿದ್ದನ್ನು ಗಮನಿಸಿದ ಲಕ್ಷ್ಮಿ ತನ್ನ ಮಗುವನ್ನು ಮಡಿಲಲ್ಲೇ ನಿಲ್ಲಿಸಿಕೊಂಡಿತ್ತು.
ಬಳಿಕ ಮಾವುತ ತನ್ನ ಮಾತಿನಿಂದ ಮರಿಯನ್ನು ಹೊರಗೆ ಬರುವಂತೆ ಮಾಡಿ ಸಚಿವರಿಗೆ ದರ್ಶನ ಸಿಗುವಂತೆ ಮಾಡಿದರು. ಸಂಸದ ಪ್ರತಾಪ್ ಸಿಂಹ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಡಿಸಿ ಡಾ.ಬಗಾದಿಗೌತಮ್,ಎಡಿಸಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಇನ್ನಿತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!