Mysore
23
overcast clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಹೆದ್ದಾರಿಯಲ್ಲಿ ದರೋಡೆಗಿಳಿದು ಸಾರ್ವಜನಿಕರಿಂದ ಗೂಸಾ ತಿಂದ್ರೂ!

ಮಂಡ್ಯ :  ಪಾಂಡವಪುರ ತಾಲ್ಲೂಕಿನ ಬನಘಟ್ಟ ಗ್ರಾಮದಲ್ಲಿ ಹೆದ್ದಾರೆಯಲ್ಲಿ ದರೋಡೆ ನಡೆಸಲು ಸಂಚುರೂಪಿಸಿದ್ದ ಇಬ್ಬರು ಕಳ್ಳರಿಗೆ ಸಾರ್ವಜನಿಕರು ಥಳಿಸಿರುವ ಘಟನೆ ನಡೆದಿದೆ.

ಶ್ರೀರಂಗಪಟ್ಟಣ ಜೇವರ್ಗಿ ಮುಖ್ಯ ರಸ್ತೆಯಲ್ಲಿ ದರೋಡೆ ನಡೆಸಲು, ಪಾಂಡವಪುರ ತಾಲ್ಲೂಕಿನ ಬನಘಟ್ಟ ಗ್ರಾಮದ‌‌ ಸಮೀಪ ಕಾರು ನಿಲ್ಲಿಸಿಕೊಂಡು ದರೋಡೆ ನಡೆಸಲು ಸಂಚರೂಪಿಸಿದ್ದ ನಾಲ್ವರು ಕಳ್ಳರನ್ನು ಕಂಡು ಅನುಮಾನಗೊಂಡ ಸಾರ್ವಜನಿಕರು ಹಿಡಿಯಲು ಮುಂದಾದಾಗ ಇಬ್ಬರು ಪರಾರಿಯಾಗಿದ್ದಾರೆ.

ಇಬ್ಬರು ಸಿಕ್ಕಿಬಿದ್ದಿದ್ದಾರೆ.‌ ಸಿಕ್ಕ‌ಇಬ್ಬರನ್ನು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ದರೋಡೆಕೋರರ ಬಳಿ ಗನ್, ಮಾರಕಾಸ್ತ್ರಗಳು ದೊರೆತಿದ್ದು ,ಘಟನೆ ಸಂಬಂಧ‌ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!