ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಮುಖ್ಯಮಂತ್ರಿಯವರು ಯುವ ಶಕ್ತಿ ರಾಷ್ಟ್ರ ಶಕ್ತಿ ಎಂಬ ಶೀರ್ಷಿಕೆಯಡಿ ಭಾರತ್ ಜೋಡೋ ಯುವ ಸಂಘ ಸದಸ್ಯತ್ವ ನೋಂದಣಿಗೆ ಮುಂದಾಗಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಿದ್ದಾರ್ಥ ಲೇಔಟ್ ನಲ್ಲಿರುವ (ಕುರುಬರ ಹಳ್ಳಿ ಸರ್ಕಲ್ ಹತ್ತಿರ) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಎಂ.ಕೆ. ಸವಿತಾ ಅವರು ಚಾಲನೆ ನೀಡಿ ಮಾತನಾಡಿದರು.
ಇಂದಿನ ಯುವ ಸಮುದಾಯವು ಸ್ವಚ್ಛತೆ, ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಯೋಗಕ್ಷೇಮ, ಸಂಸ್ಕ ತಿ ಮತ್ತು ಸಾಮಾಜಿಕ ಸಾಮರಸ್ಯ, ಕೌಶಲ್ಯ ಮತ್ತು ಯುವಸಬಲೀಕರಣ ಕ್ಷೇತ್ರಗಳಲ್ಲಿ ಯುವ ಸಮುದಾಯವು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದನ್ನು ತಿಳಿಸಿಕೊಟ್ಟರು.
ಸಮುದಾಯದ ಯುವ ಸಮುದಾಯವು ಸರ್ಕಾರ ಮತ್ತು ಕಾರ್ಯಕ್ರಮದಡಿಯಲ್ಲಿ ಹೇಗೆ ಭಾಗವಹಿಸಬೇಕು ಸಮಾಜದಲ್ಲಿ ಸಂವಿಧಾನ ಆಶಯಗಳಿಗೆ ಹೇಗೆ ಅನುಗುಣವಾಗಿ ಕೆಲಸ ಮಾಡಬೇಕು. ಸಾರ್ವಜನಿಕರಲ್ಲಿ ಬಾಲ್ಯ ವಿವಾಹಗಳ ಬಗ್ಗೆ ಜಾಗೃತಿ ಮೂಡಿಸುವುದು, ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಕ್ರಮ ವಹಿಸುವುದು, ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವುದು ಹೀಗೆ ಸಮಾಜದಲ್ಲಿ ವಿಕಾಸಶೀಲ ಮತ್ತು ಸೌಹಾದಶೀಲವಾಗಿ ತೊಡಗಿಸಿಕೊಳ್ಳುವುದರ ಕುರಿತು ಯುವ ಸಮುದಾಯಕ್ಕೆ ತಿಳಿಹೇಳಿದರು.
ಸರ್ಕಾರದ ಮಾರ್ಗದರ್ಶನದಂತೆ ಬಿಜೆವೈಎಸ್ ಪೋರ್ಟಲ್ ಅಥವಾ ಮೊಬೈಲ್ ಆಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ೧೬ ವರ್ಷದಿಂದ ೩೫ ವರ್ಷದವರೆಗಿನ ವಯೋಮಿತಿಯ ಕನಿಷ್ಠ ೧೦೦ ಜನ ಸದಸ್ಯರಿರುವ ಯುವ ಸಂಘ ನಿರ್ಮಿಸಲು ಸಹಕರಿಸಬೇಕೆಂದು ಹಾಗೂ ಮೊಬೈಲ್ ಆಪ್ ಅನ್ನು ಯಾವ ರೀತಿ ಬಳಸಿ ಭಾರತ್ ಜೋಡೋ ಯುವಸಂಘದಲ್ಲಿ ಸೇರ್ಪಡೆಗೊಳ್ಳಬೇಕು ಎಂಬುದರ ಕುರಿತು ಅರಿವನ್ನು ಮೂಡಿಸಿ,ಭಾರತ್ ಜೋಡೋ ನೋಂದಣಿಯನ್ನು ಮಾಡಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಮಾಯಾದೇವಿ, ಪ್ರ್ರಾಧ್ಯಾಪಕರಾದ ಕುಮಾರ್, ಕೃಷ್ಣ್ಣೇಗೌಡ ಮತ್ತು ಕಿರಣ್ ರಾವತ್ ಹಾಗೂ ಸಿಬ್ಬಂದಿ ಕಂದಾಯಾಧಿಕಾರಿ ಜಾವೀದ್, ಕಂದಾಯ ಪರಿಶೀಲಕರಾದ ವರದರಾಜು, ಹನುಮಂತಪ್ಪ, ಪರಮೇಶ್ ಮತ್ತು ಉಮೇಶ್ ಹಾಜರಿದ್ದರು.




