ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ.
ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ ಹೆಸರಿನ ಹಿಪ್ಪೋ ಹಾಗೂ ನಾಗ ಸೇರಿ ಹೊಸ ಮರಿಗೆ ಜನ್ಮ ನೀಡಿವೆ.
ಹಿಪ್ಪೋ ಮರಿ ಹೆಣ್ಣಾಗಿದ್ದರೆ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಕರ್ತವ್ಯದ ವೇಳೆ ಹಿಪ್ಪೋ ದಾಳಿಗೆ ಮೃತಪಟ್ಟಿದ್ದ ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಗೌರವಾರ್ಥವಾಗಿ ಸಮೀಕ್ಷಾ ಎಂದು ಹೆಸರಿಡಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.




