Mysore
20
broken clouds

Social Media

ಶುಕ್ರವಾರ, 28 ಆಗಸ್ಟ್ 2026
Light
Dark

ಪಿರಿಯಾಪಟ್ಟಣ | ನಿಲ್ಲದ ಸರ್ವರ್‌ ಸಮಸ್ಯೆ ; ಪಡಿತರ ಪಡೆಯಲು ಪರದಾಟ

ಪಿರಿಯಾಪಟ್ಟಣ : ಪಿರಿಯಾಪಟ್ಟಣದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಜನರು ಪಡಿತರ ಪಡೆಯಲು ಪರದಾಟ ನಡೆಸುವ ಪರಿಸ್ಥಿತಿ ಎದುರಾಗಿದೆ.

ಜನಸಾಮಾನ್ಯರು ಎಂದಿನಂತೆ ಪ್ರತಿ ತಿಂಗಳ ಪಡಿತರ ಪಡೆಯಲು ಪಡಿತರ ವಿತರಣಾ ಮಗಳಿಗೆ ಗಳಿಗೆ ಮತ್ತು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿದ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಇದ್ದು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತರು ಪಡಿತರ ಸಿಗದೆ ವಾಪಸ್ ಆಗುವ ಪರಿಸ್ಥಿತಿ ಎಲ್ಲೆಡೆ ಕಾಣಸಿಗುತ್ತದೆ.

ಈ ಬಾರಿ ಪಡಿತರ ವಿತರಣೆಯಲ್ಲಿ ಎರಡೆರಡು ಬಾರಿ ಓಟಿಪಿ ನೀಡುವ ಮತ್ತು ಎರಡು ಬಾರಿ ಬೆರಳಚ್ಚು ನೀಡುವ ಕೆಲಸ ಮಾಡಲಾಗುತ್ತಿದ್ದು ಕೇಂದ್ರ ಪಡಿತರ ರಾಜ್ಯ ಪಡಿತರಕ್ಕೆ ಬೇರೆಬೇರೆ ಒಟಿಪಿ ಪಡೆಯಲಾಗುತ್ತಿದೆ. ಇದರಿಂಲೂ ಪಡಿತರ ವಿತರಣೆ ತಡವಾಗುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಕೊಡಲು ನ್ಯಾಯಬೆಲೆ ಅಂಗಡಿಗಳು ಸಾಧ್ಯವಾಗದೆ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಪಡಿತರ ವಿತರಣೆಗೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಇದ್ದು ಮೇ ತಿಂಗಳ ಪಡಿತರ ವಿತರಣೆಯನ್ನು ಒಂದೆರಡು ದಿನಗಳ ಕಾಲ ಮುಂದೂಡುವಂತೆ ಜನರು ಆ ಗ್ರಹ ಮಾಡಿದ್ದಾರೆ.

ಸರ್ವರ್ ಸಮಸ್ಯೆ ತಾಲೂಕಿನಾದ್ಯಂತ ಸಾಮಾನ್ಯವಾಗಿದ್ದು ಈ ಬಗ್ಗೆ ಸಚಿವರು ಗಮನಹರಿಸಿ, ಸಮಸ್ಯೆಯನ್ನು ಪರಿಹರಿಸಬೇಕು ಬರೀ ಪಡಿತರವನ್ನು ಪಡೆಯಲು ಒಂದೆರಡು ದಿನದ ಕೂಲಿಗೆ ಹೋಗುತ್ತಿದೆ ಇದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿದೆ ಕಾರ್ಮಿಕರು ಬಡವರು ಕೂಲಿ ಕಾರ್ಮಿಕರು ವ್ಯವಸಾಯ ಮಾಡುವವರು ದಿನಗಟ್ಟಲೆ ಪಡಿತರ ಅಂಗಡಿಗಳ ಮುಂದೆ ನಿಂತು ತೊಂದರೆ ಅನುಭವಿಸುವುದನ್ನು ತಪ್ಪಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

ಸರ್ವರ್ ಸಮಸ್ಯೆ ರಾಜ್ಯಾದ್ಯಂತ ಕಾಡುತ್ತಿದ್ದು ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಮೇಲ್ಮಟ್ಟದ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ಆಹಾರ ಶಿರಸ್ಥೆದಾರ್ ಸಣ್ಣ ಸ್ವಾಮಿ ತಿಳಿಸಿದ್ದಾರೆ

Tags:
error: Content is protected !!