Mysore
25
heavy intensity rain

Social Media

ಶುಕ್ರವಾರ, 29 ಮೇ 2026
Light
Dark

ನಾನು ಸಹ ಹೊಸ ಸಚಿವ ಸಂಪುಟದಲ್ಲಿ ಸೇರುವ ಬಯಕೆ ಇದೆ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ನಾನು ಸಹ ಹೊಸ ಸಚಿವ ಸಂಪುಟದಲ್ಲಿ ಸೇರುವ ಬಯಕೆ ಇದೆ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರ ತೀರ್ಮಾನ ದಂತೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಹೊಸ ಸರ್ಕಾರ ನಾಯಕರನ್ನು ಆಯ್ಕೆ ಮಾಡಬೇಕಿದೆ. ಡಿಕೆ ಶಿವಕುಮಾರ್ ಬೆಂಬಲಕ್ಕೆ ವರಿಷ್ಠರು ಹಾಗೂ ಶಾಸಕರು ಇದ್ದಾರೆ ಎನ್ನುವ ನಂಬಿಕೆ ಇದೆ. ಹಾಲಿ ಸಚಿವರುಗಳು ತ್ಯಾಗ ಮಾಡಿದ್ದಲ್ಲಿ ಹೊಸಬರಿಗೆ ಅವಕಾಶ ಸಿಗಲಿದೆ. ಅನುಭವ ಇರುವವರು ಹಾಗೂ ಹೊಸತನದಲ್ಲಿ ಆಡಳಿತ ನಡೆಸುವವರಿಗೆ ಅವಕಾಶ ಸಿಗಬೇಕು. ಹೊಸ ನಾಯಕರನ್ನು ಆಯ್ಕೆ ಮಾಡಬೇಕು ಎನ್ನುವ ಅಪೇಕ್ಷೆ ನನ್ನಲ್ಲಿದೆ. ನಾನು ಸಹ ಹೊಸ ಸಚಿವ ಸಂಪುಟದಲ್ಲಿ ಸೇರುವ ಬಯಕೆ ಇದೆ. ಪಕ್ಷ ನನ್ನನ್ನು ಗುರುತಿಸಲಿದೆ ಎನ್ನುವ ನಂಬಿಕೆ ಇದೆ. ಈ ಬಗ್ಗೆ ವರಿಷ್ಠರ ಜೊತೆ ಮಾತುಕತೆ ನಡೆಸಿಲ್ಲ ಎಂದರು.

ಇನ್ನು ಕಳೆದ ಬಾರಿ ನಮ್ಮ ಜಿಲ್ಲೆಯವರೇ ಸಿಎಂ ಆಗಿದ್ದರಿಂದ ಈ ಜಿಲ್ಲೆಯಲ್ಲಿ ನನಗೆ ಅವಕಾಶ ಸಿಗಲಿಲ್ಲ. ಈ ಬಾರೀ ಅನ್ಯ ಜಿಲ್ಲೆಯವರು ಸಿಎಂ ಆಗುವುದರಿಂದ ನನಗೆ ಅವಕಾಶ ಸಿಗಲಿದೆ. ಎಲ್ಲವೂ ಸುಗಮವಾಗಿ ಆಗಬೇಕು. ನಾನು ಪಕ್ಷ ಹಾಗೂ ಪಕ್ಷದ ಸಿದ್ಧಾಂತ ನಂಬಿದ್ದೇನೆ. ಡಿಕೆ ಶಿವಕುಮಾರ್ ಅಥವಾ ಯಾರೇ ಮುಖ್ಯಮಂತ್ರಿ ಆದರೂ ನನ್ನನ್ನು ಗುರುತಿಸಲಿದ್ದಾರೆ ಎನ್ನುವ ನಂಬಿಕೆ ಇದೆ. ಹೊಸಬರಿಗೆ ಹೊಸ ನಾಯಕತ್ವ ಸೃಷ್ಟಿಸುವ ಜೊತೆಗೆ ಸಂಪುಟದಲ್ಲಿ ಅನುಭವ, ಹಿರಿತನ ಹಾಗೂ ಹೊಸಬರನ್ನು ಗುರುತಿಸಿ ಸರ್ಕಾರ ರಚಿಸಬೇಕಿದೆ. ಖಂಡಿತ ಈ ಬಾರೀ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವನಾಗುವ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Tags:
error: Content is protected !!