Mysore
23
overcast clouds

Social Media

ಸೋಮವಾರ, 24 ಆಗಸ್ಟ್ 2026
Light
Dark

ಧೋನಿ, ಕಪಿಲ್‌ ದೇವ್‌ಗೆ ಕ್ಷಮೆ ಕೇಳಿದ ಯುವರಾಜ್‌ ಸಿಂಗ್‌

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ ಭಾರತದ ವಿಶ್ವಕಪ್‌ ವಿಜೇತ ನಾಯಕರುಗಳಾದ ಮಹೇಂದ್ರ ಸಿಂಗ್‌ ಧೋನಿ ಹಾಗೂ ಕಪಿಲ್‌ ದೇವ್‌ ಅವರಿಗೆ ಕ್ಷಮೆಯಾಚಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಯುವರಾಜ್‌ ಸಿಂಗ್‌ ಅವರು, ತಮ್ಮ ತಂದೆಯ ಹೇಳಿಕೆಗಳಿಗೆ ಸಂಬಂಧಿಸಿದಂತೆ ಧೋನಿ ಹಾಗೂ ಕಪಿಲ್‌ ದೇವ್‌ಗೆ ಕ್ಷಮೆ ಕೇಳಿದ್ದಾರೆ. ನನ್ನ ತಂದೆ ಮಾತುಗಳಿಗಾಗಿ ನಾನು ಇಬ್ಬರಲ್ಲೂ ಪ್ರಾಮಾಣಿಕವಾಗಿ ಕ್ಷಮೇ ಕೇಳುತ್ತೇನೆ. ಆ ಮಾತುಗಳು ನನ್ನದಲ್ಲ. ಇದು ನಿಮ್ಮಬ್ಬರಿಗೂ ತಿಳಿದಿದೆ. ನೀವಿಬ್ಬರು ದೇಶಕ್ಕೆ ನೀಡಿದ ಕೊಡುಗೆ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಯುವರಾಜ್‌ ಸಿಂಗ್‌ ತಂದೆ ಯೋಗರಾಜ್‌ ಸಿಂಗ್‌ ಅವರು ಹಲವು ಬಾರಿ ಧೋನಿ ಹಾಗೂ ಕಪಿಲ್‌ ದೇವ್‌ ವಿರುದ್ಧ ತೀಕ್ಷ್ಣ ಮಾತುಗಳಿಂದ ಟೀಕೆ ವ್ಯಕ್ತಪಡಿಸಿದ್ದರು. ಯುವರಾಜ್‌ ಸಿಂಗ್‌ ವೃತ್ತಿ ಜೀವನ ಸಂಕಷ್ಟದಲ್ಲಿದ್ದ ಸಮಯದಲ್ಲಿ ಕೆಲ ಆಟಗಾರರು ಬೆಂಬಲ ನೀಡಿರಲಿಲ್ಲ. ಯುವರಾಜ್‌ ಸಿಂಗ್‌ ಬೆನ್ನಿಗೆ ಸಾಕಷ್ಟು ಮಂದಿ ಚೂರು ಹಾಕಿದ್ದಾರೆ. ಅದರಲ್ಲಿ ಧೋನಿ ಕೂಡ ಇದ್ದಾರೆ ಎಂದು ಹೇಳಿದ್ದರು.

Tags:
error: Content is protected !!