Mysore
23
overcast clouds

Social Media

ಸೋಮವಾರ, 24 ಆಗಸ್ಟ್ 2026
Light
Dark

ಭಾರತ ಸೇರಿ ಮಿತ್ರ ರಾಷ್ಟಗಳಿಗೆ ಹೊರ್ಮುಜ್‌ ಮುಕ್ತ : ಇರಾನ್‌

ಹೊಸದಿಲ್ಲಿ : ಭಾರತ ಸೇರಿದಂತೆ ಮಿತ್ರ ರಾಷ್ಟ್ರಗಳಿಗೆ ಹೊರ್ಮುಜ್‌ ಜಲಸಂಧಿಯನ್ನು ಮುಕ್ತಗೊಳಿಸಲಾಗಿದೆ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್‌ ಅರಘ್ಚಿ ಹೇಳಿದ್ದಾರೆ.

ಭಾರತ, ಚೀನಾ, ರಷ್ಯಾ, ಇರಾಕ್‌ ಮತ್ತು ಪಾಕಿಸ್ತಾನ ಸೇರಿದಂತೆ ಮಿತ್ರರಾಷ್ಟ್ರಗಳಿಗೆ ಹೊರ್ಮುಜ್‌ ಮೂಲಕ ಸಂಚಾರಕ್ಕೆ ಅನುಮತಿಸಿದ್ದೇವೆ ಎಂದು ಅರಾಘ್ಚಿ ಹೇಳಿರುವುದಾಗಿ ಮುಂಬೈನಲ್ಲಿರುವ ಇರಾನ್‌ ಕಾನ್ಸುಲೇಟ್‌ ಜನರಲ್‌ ಅವರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಸ್ನೇಹಪರ ರಾಷ್ಟ್ರಗಳ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ಹೀಗಾಗಿ, ನಾವು ಹೊರ್ಮುಜ್‌ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಿಲ್ಲ. ಆದರೆ ಶತ್ರುಗಳಿಗೆ ಮಾತ್ರ ಮುಚ್ಚಿದ್ದೇವೆ ಎಂದು ಅರಘ್ಚಿ ಹೇಳಿದ್ದಾರೆ

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್‌ ಅವರು ಜಾಗತಿಕ ಇಂಧನ ಪೂರೈಕೆ ಅಡಚಣೆಗಳ ನಡುವೆ ಹೊರ್ಮುಜ್‌ ಜಲಸಂಧಿಯನ್ನು ಮತ್ತೆ ಮುಕ್ತಗೊಳಿಸುವಂತೆ ಒತ್ತಾಯಿಸಿದ್ದರು. ಈ ಒತ್ತಾಯದ ಬೆನ್ನಲ್ಲೇ ಇರಾನ್‌ ಹೇಳಿಕೆ ನೀಡಿದೆ.

Tags:
error: Content is protected !!