Mysore
22
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

17ಬಾರಿ ಬಜೆಟ್‌ ಮಂಡಿಸಿ ಮೈಸೂರಿಗೆ ಏನು ಮಾಡಿದ್ದೀರಿ? ; ಸಿಎಂಗೆ ಪ್ರತಾಪ್‌ ಸಿಂಹ ಪ್ರಶ್ನೆ

prathap simha

ಮೈಸೂರು : 17 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಏನು ಮಾಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.

ರಾಜ್ಯ ಬಜೆಟ್ ವಿಚಾರ ಕುರಿತು ನಗರದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಅಧಿಕಾರಿಗಳು 17 ಬಾರಿ ಬರೆದು ಕೊಟ್ಟ ಬಜೆಟ್ ಓದಿದ್ದಾರೆ ಅಷ್ಟೆ. 17 ಬಜೆಟ್ ನಲ್ಲಿ ಸಿದ್ದರಾಮಯ್ಯನವರು ಇಡೀ ಮೈಸೂರಿನ ಜನ ನೆನಪಿಕೊಟ್ಟುಕೊಳ್ಳುವಂತಹ ಒಂದು ಕೆಲಸ ಮಾಡಿದ್ದಾರಾ? ಎಂದು ಕೇಳಿದರು.

ಮೂರೇ ಮೂರು ವರ್ಷಗಳಲ್ಲಿ ಶಿವಮೊಗ್ಗವನ್ನು ದೊಡ್ಡ ಮಟ್ಟದಲ್ಲಿ ಯಡಿಯೂರಪ್ಪ ಅಭಿವೃದ್ಧಿ ಮಾಡಿದ್ದಾರೆ. ಶಿವಮೊಗ್ಗದ ಜನ ತಲೆ ತಲಾಂತರ ನೆನಪಿಟ್ಟುಕೊಳ್ಳುವಂತೆ ಯಡಿಯೂರಪ್ಪ ಶಿವಮೊಗ್ಗ ಅಭಿವೃದ್ಧಿ ಮಾಡಿದ್ದಾರೆ. 17 ಬಾರಿ ಬಜೆಟ್ ಮಾಡಿದ ಸಿದ್ದರಾಮಯ್ಯ ಮೈಸೂರಿಗೆ ಏನು ಮಾಡಿದ್ದಾರೆ ಹೇಳಲಿ ಎಂದು ಆಗ್ರಹಿಸಿದರು.

ಫಿಲಂಸಿಟಿ ಅನ್ನೋದು ಮೆಗಾ ಸೀರಿಯಲ್ ಕಥೆ ಆಗಿದೆ ಅಷ್ಟೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಇನ್ನೂ ಒಂದು ತಿಂಗಳು ಇರುತ್ತಾರೋ ಅಥವಾ ಗುದ್ದಾಡುತ್ತಾ ಅಧಿಕಾರ ಸಂಪೂರ್ಣ ಮಾಡುತ್ತಾರೋ ಗೊತ್ತಿಲ್ಲ. ಯಡಿಯೂರಪ್ಪರ ರೀತಿ ಸಿದ್ದರಾಮಯ್ಯ ಮೈಸೂರಿಗೆ ಮಾಡಿರುವ ಒಂದು ಘನ ಕಾರ್ಯ ಹೇಳಲಿ ಎಂದರು.

ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಮಾಡಿದ್ದು ಯಡಿಯೂರಪ್ಪ. ಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ಘೋಷಣೆ ಮಾಡಿದ್ದು ಯಡಿಯೂರಪ್ಪ. ಕಿದ್ವಾಯಿ ಕಟ್ಟಡಕ್ಕೆ ಹಣ ಕೊಟ್ಟಿದ್ದು ಬಸವರಾಜ ಬೊಮ್ಮಾಯಿ. ಮೈಸೂರಿನಲ್ಲಿ ಮುಂದಿನ ತಲೆ ಮಾರು ಸಿದ್ದರಾಮಯ್ಯ ಹೆಸರು ಹೇಳುವಂತ ಒಂದು ಕೆಲಸ ಇದ್ಯಾ ಹೇಳಿ ಎಂದು ಅವರು ಪ್ರಶ್ನಿಸಿದರು.

ಯಾಕಾಗಿ ಜನ ಸಿದ್ದರಾಮಯ್ಯರನ್ನು ನೆನಪಿಸಿಕೊಳ್ಳಬೇಕು? ಅಭಿವೃದ್ಧಿ ಕಲ್ಪನೆಯೆ ಸಿದ್ದರಾಮಯ್ಯಗೆ ಇಲ್ಲ. ಬೆಂಗಳೂರು-ಮೈಸೂರು ಹೈವೆ ರಸ್ತೆ ಸಿದ್ದರಾಮಯ್ಯ ಮಾಡಿದ್ದಾ? ಮೈಸೂರು ರಿಂಗ್ ರಸ್ತೆ ಮಾಡಿದ್ದು ಸಿದ್ದರಾಮಯ್ಯನಾ? ಮೈಸೂರಿಗೆ ಸಿದ್ದರಾಮಯ್ಯರ ಒಂದೇ ಒಂದು ಶಾಶ್ವತ ಕೊಡುಗೆ ಏನು ಹೇಳಿ ಎಂದರು.

ಬೃಹತ್ ಮಹಾ ನಗರ ಪಾಲಿಕೆ ಹೆಸರಿನಲ್ಲಿ ಸಿದ್ದರಾಮಯ್ಯ ತಮ್ಮ ತೋಟದ ಜಾಗಗಳ ಮೌಲ್ಯ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಜಾತಿ ಬಾಂಧವರ ಜಾಗವನ್ನು ಪಾಲಿಕೆ ವ್ಯಾಪ್ತಿಗೆ ತಂದು ಆಸ್ತಿ ಮೌಲ್ಯ ಹೆಚ್ಚಳ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಆಯುಕ್ತರ ಮನೆ ಮುಂದೆ ಹಾಕುತ್ತೇವೆ : ನಗರದಲ್ಲಿ ಫ್ಲೆಕ್ಸ್ ತೆಗೆಸದಿದ್ದರೆ ನಾವೇ ಫ್ಲೆಕ್ಸ್ ಗಳನ್ನು ಕಿತ್ತು ನಗರ ಪಾಲಿಕೆ ಆಯುಕ್ತರ ಮನೆ ಮುಂದೆ ಹಾಕುತ್ತೇವೆ ಎಂದು ಎಚ್ಚರಿಸಿದರು.

 

Tags:
error: Content is protected !!