Mysore
31
overcast clouds

Social Media

ಶನಿವಾರ, 20 ಜೂನ್ 2026
Light
Dark

ವಿರೋಧ ಪಕ್ಷ ಇರೋದೆ ಪ್ರತಿಭಟನೆ ಮಾಡೋಕೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಮೈಸೂರು: ವಿರೋಧ ಪಕ್ಷ ಇರೋದೆ ಪ್ರತಿಭಟನೆ ಮಾಡೋಕೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಸರ್ಕಾರಿ ಆಹ್ವಾನ ಪತ್ರಿಕೆಯಲ್ಲಿ ಉರ್ದು ಬಳಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷ ಇರೋದೇ ಪ್ರತಿಭಟನೆ ಮಾಡೋಕೆ. ಅದೊಂದು ಚಾಳಿ. ನಾವು ಯಾರನ್ನು ಓಲೈಕೆ ಮಾಡಲ್ಲ. ನಿನ್ನೆ ಧಾರವಾಡದಲ್ಲಿ ಏನಾಗಿದೆ ಗೊತ್ತಾ? ವಿದ್ಯಾರ್ಥಿಗಳು ಯಾಕೆ ವಿಪಕ್ಷ ಬಿಟ್ಟು ಪ್ರತಿಭಟನೆ ಮಾಡಿದ್ರು. ನರೇಂದ್ರ ಮೋದಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರು. 10 ವರ್ಷಕ್ಕೆ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ರು? ಒಳ ಮೀಸಲಾತಿ ಸಮಸ್ಯೆಯಿಂದ ಸ್ವಲ್ಪ ವಿಳಂಬ ಆಗ್ತಿದೆ. ಆದ್ರೆ ನಾವು ಉದ್ಯೋಗ ಕೊಟ್ಟೆ ಕೊಡ್ತೀವಿ ಎಂದು ಹೇಳಿದರು.

 

Tags:
error: Content is protected !!