Mysore
29
broken clouds

Social Media

ಗುರುವಾರ, 23 ಜುಲೈ 2026
Light
Dark

ಮುಂಬೈ ಮಹಾನಗರ ಪಾಲಿಕೆಯ ನೂತನ ಮೇಯರ್‌ ಆಗಿ ಬಿಜೆಪಿಯ ರಿತು ತಾವ್ಡೆ ಆಯ್ಕೆ

ಮುಂಬೈ: ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬೃಹತ್‌ ಮುಂಬೈ ಮಹಾನಗರ ಪಾಲಿಕೆಯಲ್ಲಿ ಐತಿಹಾಸಿಕ ಬದಲಾವಣೆ ಸಂಭವಿಸಿದೆ. ಕಳೆದ 25 ವರ್ಷಗಳಿಂದ ಪಾಲಿಕೆಯನ್ನು ಆಳುತ್ತಿದ್ದ ಶಿವಸೇನೆಯ ಕೈಯಿಂದ ಮೇಯರ್‌ ಪಟ್ಟ ಇದೀಗ ಬಿಜೆಪಿಯ ಪಾಲಾಗಿದೆ.

ಬಿಜೆಪಿ ರಿತುತಾವ್ಡೆ ಅವರು ಮುಂಬೈನ್‌ ನೂತನ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

1997ರಿಂದ ಸತತವಾಗಿ ಬಿಎಂಸಿಯಲ್ಲಿ ಅಧಿಕಾರ ಚಲಾಯಿಸುತ್ತಿದ್ದ ಶಿವಸೇನೆ ಕಾಲು ಶತಮಾನದ ನಂತರ ಮೊದಲ ಬಾರಿಗೆ ಮೇಯರ್‌ ಪಟ್ಟವನ್ನು ಕಳೆದುಕೊಂಡಿದೆ.

ಘಾಟ್ಕೋಪರ್‌ನ ಎರಡು ಬಾರಿಯ ಪಾರ್ಪೋರೇಟರ್‌ ಆಗಿರುವ ರಿತು ತಾವ್ಡೆ ಅವರು ಈ ಹಿಂದೆ ಬಿಎಂಸಿ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದೀಗ ರಿತು ತಾವ್ಡೆ ಅವರು ಮುಂಬೈನ ನೂತನ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

ಇನ್ನು ಶಿವಸೇನೆಯ(ಏಕನಾಥ್‌ ಶಿಂಧೆ ಬಣ) ಸಂಜಯ್‌ ಶಂಕರ್‌ ಅವರು ಉಪಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಅವರು 15 ತಿಂಗಳ ಕಾಲ ಈ ಹುದ್ದೆಯಲ್ಲಿ ಇರಲಿದ್ದು, ಶಿವಸೇನೆಯ ತನ್ನ ನಾಲ್ವರು ಕಾರ್ಪೋರೇಟರ್‌ಗಳಿಗೆ ಅವಕಾಶ ನೀಡಲು ಅಧಿಕಾರಾವಧಿಯನ್ನು ಹಂಚಿಕೆ ಮಾಡಿದೆ.

 

 

Tags:
error: Content is protected !!