Mysore
25
broken clouds

Social Media

ಶುಕ್ರವಾರ, 06 ಫೆಬ್ರವರಿ 2026
Light
Dark

ಸುಪ್ರೀಂನಲ್ಲಿ ನಟ ದರ್ಶನ್‌ಗೆ ಬಿಗ್‌ ಶಾಕ್:‌ ಮೈಸೂರಿನ ಫಾರಂಹೌಸ್‌ನಲ್ಲಿ ನೀರವ ಮೌನ

darshan farm house (1)

ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಜಾಮೀನನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ವಿನೀಶ್ ದರ್ಶನ್ ಫಾರಂಹೌಸ್‌ನಲ್ಲಿ ನೀರವ ಮೌನ ಆವರಿಸಿದೆ.

ಟಿ.ನರಸೀಪುರ ರಸ್ತೆಯ ಕೆಂಪಯ್ಯನ ಹುಂಡಿ ಬಳಿಯಿರುವ ವಿನೀಶ್ ದರ್ಶನ್ ಫಾರಂ ಹೌಸ್‌ನಲ್ಲಿ ನಟ ದರ್ಶನ್‌ ಅವರು, ಕುದುರೆ, ಹಸು, ಕೋಳಿ, ಬಾತುಕೋಳಿ ಸೇರಿದಂತೆ ಅನೇಕ ಸಾಕು ಪ್ರಾಣಿಗಳನ್ನು ಸಾಕಿದ್ದಾರೆ.

ನಿನ್ನೆ ತಾನೇ ಫಾರಂಹೌಸ್‌ನಿಂದ ಹೊರಟಿರುವ ನಟ ದರ್ಶನ್‌, ಇಂದು ಜಾಮೀನು ರದ್ದಾದ ಬೆನ್ನಲ್ಲೇ ತೀವ್ರ ಆತಂಕಗೊಂಡಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ದರ್ಶನ್‌ಗೆ ಬಿಗ್‌ ಶಾಕ್‌ ಎದುರಾಗುತ್ತಿದ್ದಂತೆ ಫಾರಂಹೌಸ್‌ನಲ್ಲಿ ನೀರವ ಮೌನ ಆವರಿಸಿದೆ. ದರ್ಶನ್‌ ಮೈಸೂರಿಗೆ ಬಂದಾಗಲೆಲ್ಲಾ ಫಾರಂಹೌಸ್‌ನಲ್ಲಿ ಉಳಿದುಕೊಂಡು ಸಾಕುಪ್ರಾಣಿಗಳ ಜೊತೆ ಕಾಲ ಕಳೆಯುತ್ತಿದ್ದರು. ಆದರೀಗ ದರ್ಶನ್‌ ಜೈಲು ಪಾಲಾಗಲಿದ್ದು, ಕುಟುಂಬಸ್ಥರಿಗೂ ತೀವ್ರ ಬೇಸರ ತಂದಿದೆ.

Tags:
error: Content is protected !!