Mysore
28
overcast clouds

Social Media

ಶನಿವಾರ, 08 ಆಗಸ್ಟ್ 2026
Light
Dark

ಒಳಮೀಸಲಾತಿ ಸಮೀಕ್ಷೆ | ವಾರದೊಳಗೆ ಪೂರ್ಣ : ಎಂಎಲ್‌ಸಿ ತಿಮ್ಮಯ್ಯ

Thimmaiah

ಮೈಸೂರು : ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ನಡೆಯುತ್ತಿರುವ ಸಮಗ್ರ ಸಮೀಕ್ಷೆಯು ಒಂದು ವಾರದೊಳಗೆ ಪೂರ್ಣಗೊಳ್ಳಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಡಾ.ತಿಮ್ಮಯ್ಯ ತಿಳಿಸಿದರು.

ಶನಿವಾರ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಗಾಗಿ ಮಾದಿಗ ಸಮುದಾಯ 30 ವರ್ಷದಿಂದ ಹೋರಾಟ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ಚುನಾವಣೆ ವೇಳೆ ಹೇಳಿದಂತೆ ಒಳ ಮೀಸಲಾತಿ ಜಾರಿಗೆ ಮುಂದಾಗಿದ್ದಾರೆ. ಅಂಕಿ ಅಂಶದ ಕೊರತೆ ಇರುವ ಕಾರಣ ನಾಗಮೋಹನ್ ನೇತೃತ್ವದ ಸಮೀಕ್ಷೆ ನಡೆಯುತ್ತಿದೆ. ಇದು ಬಹುತೇಕ ಪೂರ್ಣಗೊಂಡಿದ್ದು, ಒಂದು ವಾರದೊಳಗೆ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಸ್ವಯಂ ಘೋಷಿತ ಹೋರಾಟ ಸಮಿತಿಗಳು ಮಾದಿಗ ಸಮುದಾಯದ ಜನರನ್ನ ದಿಕ್ಕು ತಪ್ಪಿಸಿ, ಒಳ ಮೀಸಲಾತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿವೆ. ಇವಾಗ ಕಿರುಚಾಡುತ್ತಿರುವ ಇವರ್ಯಾರು ಒಳ ಮೀಸಲಾತಿ ಹೋರಾಟದಲ್ಲಿ ಭಾಗಿಯೇ ಆಗಿಲ್ಲ ಎಂದು ಹೇಳಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಒಳ ಮೀಸಲಾತಿ ಜಾರಿ ಮಾಡಲಿಲ್ಲ. ಕೆಲ ನಾಯಕರು ಸಿಎಂ ಸಿದ್ದರಾಮಯ್ಯ, ಸಚಿವರಾದ ಮಹದೇವಪ್ಪ, ಆಜನೇಯ, ಮುನಿಯಪ್ಪ ಅವರ ವಿರುದ್ಧ ಅಪಪ್ರಚಾರ ಮಾಡಲು ಮುಂದಾಗಿದ್ದಾರೆ. ಸಮಾಜದ ಶಾಂತಿ ಕದಡುವ ಕೆಲಸವನ್ನೂ ಸಹ ಮಾಡುತ್ತಿದ್ದಾರೆ ಎಂದು ದೂರಿದರು.

ಇದನ್ನೂ ಓದಿ:- ಆರ್‌ಸಿಬಿ ವಿಜಯೋತ್ಸವ | ಸರ್ಕಾರದ ಮೇಲೆ ಒತ್ತಡ ಇತ್ತು : ಶಾಸಕ ಹರೀಶ್‌ ಗೌಡ

ಭಾಸ್ಕರ್ ಪ್ರಸಾದ್ ಅನ್ನುವ ವ್ಯಕ್ತಿ ಯಾರೆಂಬುದೇ ಗೊತ್ತಿಲ್ಲ. ಅವರ ಹೋರಾಟಕ್ಕೆ ವಿಪಕ್ಷ ನಾಯಕರ ಕುಮ್ಮಕ್ಕು ಇದೆ. ಇದೇ ತಿಂಗಳ 9ನೇ ತಾರೀಖು ನಡೆಯುವ ಅವರ ಹೋರಾಟಕ್ಕೆ ನಮ್ಮ ಸಮುದಾಯದ ಜನ ಯಾರು ಹೋಗಬಾರದು ಎಂದು ಮನವಿ ಮಾಡಿದರು.

Tags:
error: Content is protected !!