Mysore
23
scattered clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಕಾಲ್ತುಳಿತ ಪ್ರಕರಣ ನಡೆಯಲು ಸರ್ಕಾರವೇ ಕಾರಣ: ಬಿ.ವೈ.ವಿಜಯೇಂದ್ರ

by vijayendra

ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ ನಡೆಯಲು ಸರ್ಕಾರವೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 11 ಜನರ ಸಾವಿಗೆ ಸರ್ಕಾರವೇ ನೇರ ಹೊಣೆ. ಸರ್ಕಾರ ಕಾರ್ಯಕ್ರಮವನ್ನು ಸರಿಯಾಗಿ ನಿಭಾಯಿಸಬೇಕಿತ್ತು. ಸರ್ಕಾರ ಆತುರವಾಗಿ ಕಾರ್ಯಕ್ರಮ ನಡೆಸಿದೆ. ವಿಧಾನಸೌಧದದಲ್ಲಿ ಕಾರ್ಯಕ್ರಮ ನಡೆಸೋದು ಬೇಕಿತ್ತಾ? ವಿಧಾನಸೌಧದ ಕಾರ್ಯಕ್ರಮ ಯಾರ ಪ್ಲಾನ್?‌ ಸಂಜೆ ಕಾಲ್ತುಳಿತವಾದರೂ ಸಂಭ್ರಮಾಚರಣೆ ಮಾಡಿದ್ಯಾಕೆ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:- ಸಾವಿನಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ: ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿ

 

Tags:
error: Content is protected !!