Mysore
26
overcast clouds

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಸಹಜ ಸ್ಥಿತಿಗೆ ಮರಳಿದ ಜಮ್ಮು-ಕಾಶ್ಮೀರ: ಶಾಲೆಗಳು ಓಪನ್‌

ಶ್ರೀನಗರ: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕದನ ವಿರಾಮ ಘೋಷಣೆಯಾಗಿದ್ದು, ಜಮ್ಮು-ಕಾಶ್ಮೀರದಲ್ಲಿ ಜನಜೀವನ ಸಹಜ ಸ್ಥಿತಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ಮರಳಿ ಶಾಲೆಗೆ ತೆರಳಿದ ದೃಶ್ಯಗಳು ಕಂಡುಬಂದವು.

ಇನ್ನು ಸೋಮವಾರ ಪಾಕಿಸ್ತಾನದ ಶೆಲ್‌ ದಾಳಿಯಲ್ಲಿ ಸಂಭಾದ ಗಡಿ ಜಿಲ್ಲೆಯ ಮನೆ ಮೇಲ್ಛಾವಣಿ, ಅಡುಗೆ ಮನೆ ಹಾನಿಗೊಂಡಿದೆ. ಘಟನೆ ಕುರಿತು ಮಾತನಾಡಿರುವ ಸ್ಥಳೀಯರು ಇಲ್ಲಿ ಪಾಕಿಸ್ತಾನದ ಶೆಲ್‌ ದಾಳಿಯ ಭೀತಿ ಮುಂದುವರಿದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:- ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರ ಫೋಟೋ ರಿಲೀಸ್:‌ ಸುಳಿವು ಕೊಟ್ಟವರಿಗೆ 20 ಲಕ್ಷ ರೂ ಬಹುಮಾನ

ಸಾಂಬಾ ವಲಯದಲ್ಲಿ ಸಣ್ಣ ಪ್ರಮಾಣದಲ್ಲಿ ಡ್ರೋನ್‌ಗಳು ಬಂದಿದ್ದು, ಅವುಗಳನ್ನು ಸಮರ್ಥವಾಗಿ ಎದುರಿಸಲಾಗಿದೆ. ಹೆಚ್ಚಿನ ಅಪಾಯ ಆಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.

Tags:
error: Content is protected !!