Mysore
30
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಗುಂಡ್ಲುಪೇಟೆ: ಹಾಡಹಗಲೇ ಹಸು ಕಳೆದುಕೊಂಡ ರೈತ ಕಂಗಾಲು

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದಲ್ಲಿ ಒಂದು ಹಸುವಿನ ಮೇಲೆ ಹಾಡುಹಗಲೇ ಹುಲಿ ದಾಳಿ ನಡೆಸಿದ್ದು, ಹಸು ಸಾವನ್ನಪ್ಪಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದಲ್ಲಿ ಓರ್ವ ರೈತ ತನ್ನ ಜಮೀನಿನಲ್ಲಿ ಹಸು ಮೇಯಲು ಬಿಟ್ಟಿದ್ದ. ಆ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಬಲಿ ಪಡೆದಿರುವ ಘಟನೆ ನಡೆದಿದೆ.

ಬಲಿಯಾಗಿರುವ ಹಸು ಮಹೇಶ್ ಎಂಬುವವರಿಗೆ ಸೇರಿದ್ದು, ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ವೇಳೆ ಹುಲಿ ದಾಳಿ ಮಾಡಿ ರಕ್ತ ಹೀರಿ ಕೊಂದುಹಾಕಿದೆ. ಕೆಲವು ದಿನಗಳಿಂದ ಹುಲಿ ಉಪಟಳ ಹೆಚ್ಚಾಗಿದ್ದು ರೈತರು ಜಮೀನಿಗಳಿಗೆ ತೆರಳಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮದ ಶಿವಕುಮಾರ್ ಸೇರಿ ಮುಖಂಡರು ಕಿಡಿಕಾರಿದ್ದಾರೆ.

Tags:
error: Content is protected !!