Mysore
29
broken clouds

Social Media

ಗುರುವಾರ, 23 ಜುಲೈ 2026
Light
Dark

ಅರ್ಹತೆ ಇಲ್ಲದೇ ಬಿಪಿಎಲ್‌ ಕಾರ್ಡ್‌ ಪಡೆದವರಿಗೆ ದಂಡ: ಮುನಿಯಪ್ಪ

ಬೆಂಗಳೂರು: ಅರ್ಹತೆ ಇಲ್ಲದೇ ಬಿಪಿಎಲ್‌ ಕಾರ್ಡ್‌ ಬಳಕೆ ಮಾಡುತ್ತಿರುವವರು ದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಆಹಾರ ಸಚಿವ ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರ್ಹತೆ ಇಲ್ಲದವರು ಸಾಕಷ್ಟು ಜನ ಬಿಪಿಎಲ್‌ ಕಾರ್ಡ್‌ ಬಳಕೆ ಮಾಡುತ್ತಿದ್ದಾರೆ. ಕಾರ್ಡ್‌ ವಾಪಸ್‌ ಮಾಡಲು ಇನ್ನೊಂದು ವಾರದಲ್ಲಿ ಜಾಹಿರಾತು ಹೊರಡಿಸುತ್ತೇವೆ. ಮನವಿಯ ನಂತರವೂ ಕಾರ್ಡ್‌ ಬಳಕೆ ಮುಂದುವರಿದರೆ, ಕಾನೂನಿನಲ್ಲಿ ಅವಕಾಶವಿರುವ ದಂಡ ಪ್ರಯೋಗ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಡ್‌ ಪರಿಶೀಲನೆ ಮಾಡಲಾಗುತ್ತದೆ. ಈ ವೇಳೆ ಸಿಕ್ಕಿ ಹಾಕಿಕೊಂಡರೆ ದಂಡ ನೀಡಬೇಕಾಗುತ್ತದೆ ಎಂದಿದ್ದಾರೆ.

ಇದೇ ವೇಳೆ ಬಿಪಿಎಲ್‌ ಕಾರ್ಡ್‌ ಮಾನದಂಡಗಳನ್ನು ಪರಿಷ್ಕರಣೆ ಮಾಡೋ ಬಗ್ಗೆ ವಿಚಾರ ಮಾಡಿ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ನಿರ್ಧಾರ ಮಾಡೋದಾಗಿ ತಿಳಿಸಿದ್ದಾರೆ.

 

Tags:
error: Content is protected !!