Mysore
24
overcast clouds

Social Media

ಬುಧವಾರ, 19 ಆಗಸ್ಟ್ 2026
Light
Dark

ಸಾಲಭಾದೆಗೆ ಬೇಸತ್ತು ಯುವಕ ನೇಣಿಗೆ ಶರಣು..!

ಮೈಸೂರು : ಸಾಲಭಾದೆ ತಾಳಲಾರದೆ ಡೆತ್‌ ನೋಟ್‌ ಬರೆದಿಟ್ಟು ಯುವಕ ನೇಣಿಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.

ಸಿಡಿಲು ಮಲ್ಲಿಕಾರ್ಜುನ ಬೆಟ್ಟದಲ್ಲಿ ಕೆಆರ್‌ ತಾಲೂಕಿನ ಹೆಬ್ಬಾಲು ಕೊಪ್ಪಲು ಗ್ರಾಮದ  ಯತೀಕ್‌ (೨೫) ಎಂಬ ಯುವಕ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಂಗಳೂರಿನಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡ್ತಿದ್ದ ಯತೀಕ್‌ ಮನೆಯ ಸಮಸ್ಯೆ ಹಿನ್ನೆಲೆ ಕ್ರೆಡಿಟ್‌ ಕಾರ್ಡ್‌ ,ಪರ್ಸನಲ್‌ ಲೋನ್ ಪಡೆದಿದ್ದ. ಆದರೆ ಇಎಂಐ ಕಟ್ಟಲು ಸಾಧ್ಯವಾಗದ ಹಿನ್ನೆಲೆ ಸೂಸೈಡ್‌ ಮಾಡಿಕೊಂಡಿದ್ದಾನೆ. ಬೆಟ್ಟದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!