Mysore
25
overcast clouds

Social Media

ಸೋಮವಾರ, 03 ಆಗಸ್ಟ್ 2026
Light
Dark

ರಾಮೇಶ್ವರಂ ಕೆಫೆ ಸ್ಪೋಟ : ಆರೋಪಿಗಳ ಫೋಟೊ ಬಿಡುಗಡೆ !

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದಲ್ಲಿ ಭಾಗಿಯಾಗಿರುವ ಆರೋಪಿಗಳ ನಿಜವಾದ ಚಿತ್ರಣ ಈಗ ಬಹಿರಂಗವಾಗಿದೆ.

ಇಬ್ಬರೂ ಆರೋಪಿಗಳು ಶಿವಮೊಗ್ಗದ ಐಸಿಸ್ ಮಾಡ್ಯೂಲ್ನೊಂದಿಗೆ ಸಂಬಂಧ ಹೊಂದಿದ್ದು, ಈ ಹಿಂದೆಯೂ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಮುಸಾವೀರ್ ಹುಸೇನ್ ಶಜೀಬ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನು ಎನ್ನಲಾಗಿದೆ. ಇದಲ್ಲದೇ ಎರಡನೇ ಆರೋಪಿ ಅಬ್ದುಲ್ ಮಥೇರನ್ ತಾಹಾ ಕೂಡ ತೀರ್ಥಹಳ್ಳಿ ನಿವಾಸಿಯಾಗಿದ್ದಾನೆ. ಸ್ಫೋಟದ ಮೊದಲು ಅವರ ಚಲನವಲನಗಳನ್ನು ಪರಿಶೀಲಿಸಿದ ಎನ್‌ಐಎ ಮೂಲಗಳು, ಇವರಿಬ್ಬರು ಚೆನ್ನೈನ ಟ್ರಿಪ್ಲಿಕೇನ್ನ ಲಾಡ್ಜ್ನಲ್ಲಿ ಉಳಿದುಕೊಂಡಿದ್ದರು ಮತ್ತು ಸ್ಫೋಟದ ನಂತರ ಮತ್ತೆ ಚೆನ್ನೈಗೆ ಮರಳಿದ್ದರು ಎಂದು ತಿಳಿದುಬಂದಿದೆ.

ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿರುವ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಆರೋಪಿಗಳ ಕೊನೆಯ ಅಡಗುತಾಣ ಪತ್ತೆಯಾಗಿದೆ. ಎನ್‌ಐಎ ಈಗಾಗಲೇ ಪ್ರಮುಖ ಆರೋಪಿಗಳಿಗೆ ಬಹುಮಾನವನ್ನು ಘೋಷಿಸಿ

Tags:
error: Content is protected !!