Mysore
28
scattered clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಜಾರ್ಖಂಡ್‌: ಬುಡಕಟ್ಟು ಸಮುದಾಯದ ಯುವ ಕ್ರಿಕೆಟಿಗನಿಗೆ ಅಪಘಾತ

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌ ಧೋನಿ ತವರಿನಿಂದ ಐಪಿಎಲ್‌-24ಕ್ಕೆ ಆಯ್ಕೆಯಾಗಿದ್ದ ಬುಡಕಟ್ಟು ಸಮುದಾಯದ ಯುವ ಕ್ರಿಕೆಟಿಗ ರಾಬಿನ್‌ ಮಿನ್ಜ್‌ ಅವರಿಗೆ ಭಾನುವಾರ ಅಪಘಾತವಾಗಿದೆ.

ಈ ಕುರಿತು ಯುವ ಕ್ರಿಕೆಟಿಗ ಮಿನ್ಜ್‌ ಅವರ ತಂದೆ ಪ್ರಾನ್ಸಿಸ್‌ ಮಿನ್ಜ್‌ ಅವರು ಮಾಹಿತಿ ನೀಡಿದ್ದಾರೆ. ಮಿನ್ಜ್‌ ತನ್ನ ಕವಾಸಕಿ ಸೂಪರ್‌ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದಾಗ ಎದುರಿಗೆ ಮತ್ತೊಂದು ಬೈಕ್‌ ಬಂದಿದ್ದು, ರಾಬಿನ್‌ ಎದುರಿಗೆ ಬಂದ ಬೈಕ್‌ ಡಿಕ್ಕಿ ಹೊಡೆದಿದೆ. ಪರಿಣಾಮ ನಿಯಂತ್ರಣ ಕಳೆದುಕೊಂಡು ಬದ್ದಿದ್ದಾರೆ. ಆದರೆ ರಾಬಿನ್‌ಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಯುವ ಕ್ರಿಕೆಟಿಗನ ತಂದೆ ಪ್ರಾನ್ಸಿಸ್‌ ಹೇಳಿದ್ದಾರೆ.

ಮೂಲತಃ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯವರಾದ ಮಿನ್ಜ್, ಪ್ರಸ್ತುತ ಜಾರ್ಖಂಡ್ ರಾಜಧಾನಿ ರಾಂಚಿಯ ನಾಮ್ಕುಮ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ರಣಜಿ ಟ್ರೋಫಿಯಲ್ಲಿ ಇನ್ನೂ ರಾಜ್ಯವನ್ನು ಪ್ರತಿನಿಧಿಸದಿದ್ದರೂ, ಜಾರ್ಖಂಡ್‌ನ ಅಂಡರ್ 19 ಮತ್ತು ಅಂಡರ್ 25 ತಂಡಗಳ ಭಾಗವಾಗಿದ್ದಾರೆ.

ಅವರ ತಂದೆ ನಿವೃತ್ತ ಸೇನಾ ಸಿಬ್ಬಂದಿಯಾಗಿದ್ದು, ಈಗ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರಾಬಿನ್‌ ಮಿನ್ಜ್‌ಗೆ ಇಬ್ಬರು ಸಹೋದರಿಯರು ಇದ್ದಾರೆ.

ಅಚ್ಚರಿಯಂಬಂತೆ ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ 21 ವರ್ಷದ ರಾಬಿನ್‌ ಮಿನ್ಜ್‌ ಅವರು ಗುಜರಾತ್‌ ಟೈಟನ್ಸ್‌ ತಂಡಕ್ಕೆ ಬರೋಬ್ಬರಿ 3.60 ಕೋಟಿ ರೂಗೆ ಮಾರಾಟವಾಗಿದ್ದಾರೆ.

ಎಂ.ಎಸ್ ಧೋನಿಯ ಅಪ್ಪಟ ಅಭಿಮಾನಿಯಾಗಿರುವ ಇವರು, ಭಾರತದ ಮಾಜಿ ನಾಯಕ ಧೋನಿಗೆ ಕೋಚಿಂಗ್ ನೀಡಿದ್ದ ತರಬೇತುದಾರ ಚಂಚಲ್ ಭಟ್ಟಾಚಾರ್ಯ ಅವರಲ್ಲಿ ರಾಬಿನ್‌ ಅವರು ತರಬೇತಿ ಪಡೆದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!