Mysore
21
overcast clouds

Social Media

ಮಂಗಳವಾರ, 23 ಜೂನ್ 2026
Light
Dark

ಸಿದ್ದರಾಮಯ್ಯ ಇದ್ದ ಹೆಲಿಕ್ಯಾಪ್ಟರ್‌ ಲ್ಯಾಂಡಿಂಗ್‌ ವೇಳೆ ಭಾರೀ ಗೊಂದಲ

ಗದಗ:  ಸಿಎಂ ಸಿದ್ದರಾಮಯ್ಯ ಅವರು ಇಂದು ಗದಗ ಪ್ರವಾಸ ಕೈಗೊಂಡಿದ್ದು, ಈ ವೇಳೆ ಹೆಲಿಕ್ಯಾಪ್ಟರ್‌ ಲ್ಯಾಂಡಿಂಗ್‌ ವೇಳೆ ಭಾರೀ ಗೊಂದಲವಾಗಿರುವ ಘಟನೆ ನಡೆದಿದೆ.

ಗದಗದ ಹೆಲಿಪ್ಯಾಡ್‌ ನಲ್ಲಿ ಸಿಎಂ ಸಿದ್ದರಾಮಯ್ಯ ಇದ್ದ ಹೆಲಿಕಾಪ್ಟರ್‌ ಪೈಲಟ್‌ ಅರ್ಧಕ್ಕೆ ಇಳಿಸಿ ಮತ್ತೆ ಹೆಲಿಕಾಪ್ಟರ್‌ ಹಾರಿಸಿದ್ದು, ಭಾರೀ ಗೊಂದಲಕ್ಕೆ ಕಾರಣವಾಗಿದ್ದು, ಸ್ಥಳದಲ್ಲಿದ್ದ ಪೊಲೀಸರು, ಜಿಲ್ಲಾಡಳಿತ, ಕಾಂಗ್ರೆಸ್‌ ಮುಖಂಡರು ಕಕ್ಕಾಬಿಕ್ಕಿಯಾಗಿದ್ದರು.

ಎರಡು ಕಡೆ ಹೆಲಿಪ್ಯಾಡ್‌ ಇದ್ದ ಹಿನ್ನೆಲೆಯಲ್ಲಿ ಗೊಂದಲಕ್ಕೀಡಾದ ಹೆಲಿಕಾಪ್ಟರ್‌ ಪೈಲಟ್‌ ಮೊದಲ ಹೆಲಿಪ್ಯಾಡ್‌ ನಲ್ಲಿ ಹೆಲಿಕಾಪ್ಟರ್‌ ಅರ್ಧಕ್ಕೆ ಇಳಿಸಿ ಮತ್ತೆ ಹಾರಿಸಿದ್ದಾರೆ. ಬಳಿಕ ಮತ್ತೊಂದು ಹೆಲಿಪ್ಯಾಡ್‌ ನಲ್ಲಿ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!