Mysore
22
broken clouds

Social Media

ಸೋಮವಾರ, 29 ಜೂನ್ 2026
Light
Dark

ರಾಜ್ಯದಿಂದ ಹಣ ಕೊಡ್ತಿವಿ, ಯಡಿಯೂರಪ್ಪ ಹೋರಾಟ ಬಿಟ್ಟು ಅಕ್ಕಿ ಕೊಡಿಸಲಿ: ಸಿದ್ದರಾಮಯ್ಯ

ಹಾಸನ: ಕೇಂದ್ರ ಸರ್ಕಾರವು ಪುಕ್ಕಟ್ಟೆಯಾಗಿ ಅಕ್ಕಿ ಕೊಡಲ್ಲ. ರಾಜ್ಯ ಸರ್ಕಾರದಿಂದ ಹಣ ಕೊಡ್ತಿವಿ. ಆದರೂ, ಅಕ್ಕಿ ಕೊಡಲ್ಲ ಎನ್ನುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಹಾಸನದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದವರು ನಮ್ಮ ಮೇಲಿನ ಕೋಪಕ್ಕೆ ಬಡವರ ಮೇಲೆ ಗದಾಪ್ರಹಾರ ಮಾಡಲು ಹೊರಟಿದ್ದಾರೆ. ಬಿಜೆಪಿ ಎಂದರೆ ಬಡವರ ವಿರೋದಿ ಪಕ್ಷ. ಹೀಗಾಗಿ, ನಾವು ಬೇರೆ ಕಡೆಯಿಂದ ಅಕ್ಕಿ ತರಲು ಪ್ರಯತ್ನ ಮಾಡುತ್ತಿದ್ದೇವೆ. ಈ ಬಗ್ಗೆ ಬುಧವಾರ (ಜೂನ್‌ 28) ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.

ಅಕ್ಕಿ ತರಲು ಪ್ರಯತ್ನ ಮಾಡಿದರು ಅಗತ್ಯ ಪ್ರಮಾಣದ ದಾಸ್ತಾನು ಸಿಕ್ಕಿಲ್ಲ. ಅಕ್ಕಿ ಸಿಕ್ಕಿದ ಕೂಡಲೆ ನಾವು ಈ ಯೋಜನೆ ಜಾರಿ ಮಾಡ್ತೇವೆ. ಯಾವುದೇ ಕಾರಣಕ್ಕೂ ಯೋಜನೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಹೋರಾಟ ಬಿಟ್ಟು ಅಕ್ಕಿ ಕೊಡಿಸಲಿ

ಯಡಿಯೂರಪ್ಪ ಅನ್ನಭಾಗ್ಯ ಜಾರಿ ಮಾಡದಿದ್ದರೆ ಹೋರಾಟ ಮಾಡುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ” ಯಡಿಯೂರಪ್ಪ ಮಾತನಾಡಲಿ. ಅವರ ಅವಧಿಯಲ್ಲಿ ಏನು ಜನಪರ ಯೋಜನೆ ಮಾಡಿದ್ರು ಹೇಳಲಿ. ಯಡಿಯೂರಪ್ಪ ಹೋರಾಟ ಮಾಡೋದು ಬಿಟ್ಟು ಕೇಂದ್ರದಿಂದ ಅಕ್ಕಿ ಕೊಡಿಸಲಿ ಎಂದು ತಿರುಗೇಟು ನೀಡಿದರು.

ಜುಲೈ 1 ರಿಂದ ಗೃಹಜ್ಯೋತಿ

ನಮ್ಮ ಸರ್ಕಾರ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಾಗಿ ಮಾಡಲಾಗಿದೆ, ಜುಲೈ 1 ರಿಂದ ಗೃಹ ಜ್ಯೋತಿ ಜಾರಿಗೆ ತರಲಾಗುತ್ತಿದೆ. 1.28 ಕೋಟಿ‌ ಕುಟುಂಬಗಳ ಯಜಮಾನಿಯರಿಗೆ ತಿಂಗಳಿಗೆ ತಲಾ 2000 ರೂ ನೀಡುವ ಗೃಹಲಕ್ಷ್ಮಿ ಯೋಜನೆ ಲಾಭ ಕೂಡ ತಲುಪಲಿದೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!