ಮುಂಬೈ: ಕೋವಿಡ್ ಸೆಂಟರ್ ಆಸ್ಪತ್ರೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಮುಂಬೈನ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ಮಹಾ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಆಪ್ತ ಸಹಾಯಕ ಮತ್ತು ಅವರ ಪುತ್ರ ಆದಿತ್ಯ ಹಾಗೂ ಸಂಜಯ್ ರಾವತ್ ಅವರ ಸಹಚರರ ವಿರುದ್ಧ ದಾಳಿ ನಡೆಸಲಾಗಿದೆ.
ನಗರದ 15 ಕಡೆಗಳಲ್ಲಿ ಇಡಿ ದಾಳಿ ನಡೆಸಿದೆ. ಆದಿತ್ಯ ಠಾಕ್ರೆ ಅವರ ಸಹವರ್ತಿ ಸೂರಜ್ ಚವಾಣ್ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ರಾಜ್ಯಸಭಾ ಸಂಸದ ಮತ್ತು ಯುಬಿಟಿ ಸೇನಾ ವಕ್ತಾರ ಸಂಜಯ್ ರಾವುತ್ ಅವರ ನಿಕಟವರ್ತಿ ಸುಜಿತ್ ಪಾಟ್ಕರ್ ಸೇರಿದಂತೆ ಐಎಎಸ್ ಸಂಜೀವ್ ಜೈಸ್ವಾಲ್ ಮತ್ತು ಇತರ 14 ಮಂದಿಯ ಸ್ಥಳಗಳಲ್ಲಿಯೂ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ
Maharashtra | ED raids residence of Suraj Chavan, allegedly a close aide of Uddhav Thackeray faction leader Aaditya Thackeray, in Chembur. Raids underway since morning https://t.co/ENhSVNH4qP pic.twitter.com/vo8LN6wmC3
— ANI (@ANI) June 21, 2023
ಇದಕ್ಕೂ ಮುನ್ನ ಇ.ಡಿ ಸುಜಿತ್ ಪಾಟ್ಕರ್, ಸಂಸದ ಸಂಜಯ್ ರಾವತ್ ಸೇರಿದಂತೆ ಮತ್ತಿತರ ಮೇಲೆ ಅಕ್ರಮ ಹಣ ಪ್ರಕರಣವನ್ನು ದಾಖಲಿಸಿತ್ತು. ಆರೋಗ್ಯ ಕ್ಷೇತ್ರದಲ್ಲಿ ಅನುಭವವಿಲ್ಲದಿದ್ದರೂ ಕೋವಿಡ್ ಪ್ಯಾಂಡಮಿಕ್ ಸಮಯದಲ್ಲಿ ಮುಂಬೈ ಕೋವಿಡ್ ಫೀಲ್ಡ್ ಆಸ್ಪತ್ರೆಯ ಜೊತೆ ಒಪ್ಪಂದ ಮಾಡಿಕೊಂಡಿದ್ದರು.
ಏನಿದು ದೂರು?
ಬಿಜೆಪಿ ನಾಯಕ ಕಿರಿತ್ ಸೋಮಜ್ಯ ಅವರು ಲೈಫ್ಲೈನ್ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಸರ್ವಿಸ್ ಹಾಗೂ ಸಜಿತ್ ಪಾಟ್ಕರ್ ಹಾಗೂ ಅವರ ಸಹಚರರ ವಿರುದ್ಧ ನಕಲಿ ಸಹಿ ಪ್ರಕರಣವನ್ನು ದಾಖಲಿಸಿದ್ದರು. ಕೋವಿಡ್ ಪ್ಯಾಂಡಮಿಕ್ ಸಮಯದಲ್ಲಿ ಇವರು ಆರೋಗ್ಯ ಕ್ಷೇತ್ರದ ಬಗ್ಗೆ ಅನುಭವ ಇಲ್ಲದಿದ್ದರೂ ಕೋವಿಡ್ ಆಸ್ಪತ್ರೆಗಳನ್ನು ನಿರ್ವಹಿಸುವುದಾಗಿ ಬಿಎಂಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ, ಪೊಲೀಸರು ತನಿಖೆಗೆ ವರ್ಗಾಯಿಸಿದ್ದರು. ಜೊತೆಗೆ ಅಕ್ರಮ ಹಣ ವರ್ಗಾವಣೆ ಕೇಸನ್ನು ದಾಖಲಿಸಿತ್ತು. ಪಾಟ್ಕರ್ ಅವರ ಮನೆಯಲ್ಲಿ ಇಡಿ ನಡೆಸಿದ ದಾಳಿಯ ಸಮಯದಲ್ಲಿ, ಕೋವಿಡ್ ಕ್ಷೇತ್ರ ಆಸ್ಪತ್ರೆಗಳ ನಿರ್ವಹಣೆಗಾಗಿ ಪಾಟ್ಕರ್ ಬಿಎಂಸಿಯೊಂದಿಗೆ ಸಹಿ ಮಾಡಿದ ಒಪ್ಪಂದದ ದಾಖಲೆಯನ್ನು ಅಧಿಕಾರಿಗಳು ವಶಪಡಿಸಿಕೊಂಡರು. ಇದಕ್ಕಾಗಿ ಪಾಟ್ಕರ್ 38 ಕೋಟಿ ರೂಗಳನ್ನು ನೀಡಿದ್ದರು.





