Mysore
26
broken clouds

Social Media

ಮಂಗಳವಾರ, 11 ಆಗಸ್ಟ್ 2026
Light
Dark

ಮೊದಿ,ಅಮಿತ್‌ ಶಾ ಅಪ್ಪುಗೆಗಿಂತ ಅಚ್ಚೇ ದಿನ್ ಬೇಕಿಲ್ಲ : ಶಾಸಕ ಎಸ್.ಎ ರಾಮದಾಸ್

ಮೈಸೂರು‌ : ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಭೇಟಿ ನೀಡಿದ ವೇಳೆ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಗುದ್ದು ನೀಡಿದ್ದರು. ಇದೀಗ ಕೇಂದ್ರ ಗೃಹ ಸಚಿವ ಅಮಿತ್​ ಶಾ ಮೈಸೂರಿಗೆ ಭೇಟಿ ನೀಡಿದ್ದರು. ಸ್ವಾಗತಿಸಲು ಶಾಸಕ ರಾಮದಾಸ್ ಅವರು​ ತೆರಳಿದ್ದರು. ಈ ವೇಳೆ ಅಮಿತ್​ ಶಾ ಅವರು ರಾಮದಾಸ್​ ಅವರಿಗೆ ಆತ್ಮೀಯ ಅಪ್ಪುಗೆ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಮ್‌ ದಾಸ್‌ ನಮ್ಮದು ಕೌಟುಂಬಿಕ ಸಂಬಧ ಈ ಹಿಂದೆ ಕೂಡ ಮೊದಿಯವರು ಮೈಸೂರಿಗೆ ಬಂದಾಗ  ನನ್ನ ಕಿವಿ ಹಿಂಡಿ ಅಪ್ಪುಗೆ ಕೊಟ್ಟು ಒಂದು ಗುದ್ದನ್ನ ಗುದ್ದಿ ಪ್ರೀತಿಯನ್ನ ವ್ಯಕ್ತಪಡಿಸಿದ್ದರು.ನಾನು ಇಂದಿಗೂ ಅವರಿಗೆ ಆಭಾರಿಯಾಗಿದ್ದೇನೆ. ಇವತ್ತು ಅಮಿತ್‌ ಶಾ ಅವರನ್ನ ಬರಮಾಡಿಕೊಳ್ಳಲು ಹೋಗಿದ್ದಾಗ ಅವರು ರಾಮ್‌ ದಾಸ್‌ ಜಿ ಎಂದು ಪ್ರೀತಿಯಿಂದ ಅಪ್ಪುಗೆ ನೀಡಿದರು‌ ಒಂದಷ್ಟು ದೂರ ಅವರ ಜೊತೆಯಲ್ಲಿಯೇ ಹೆಜ್ಜೆ ಹಾಕಿದೆ. ನಂತರ ಅವರ ಜೊತೆಯಲ್ಲಿಯೇ ಕಾರಿನಲ್ಲಿ ಬಂದು ಚಾಮುಂಡಿ ತಾಯಿಯ ದರ್ಶನ ಪಡೆಯುವ ಭಾಗ್ಯವನ್ನ ತಾಯಿ ಕರುಣಿಸಿದ್ದಾಳೆ ಎಂದು ಸಂತೋಷ ವ್ಯಕ್ತಪಡಿಸಿದರು.

ಇದಕ್ಕಿಂತ ಅಚ್ಚೇ ದಿನ್‌ ಬೇಕಿಲ್ಲ : ಮೋದಿ ಜಿ ನನ್ನ ಕಿವಿ ಹಿಂಡಿದ ದಿನವೇ ನನಗೆ ಅಚ್ಚೇ ದಿನ್ ಇವತ್ತು ಅಮಿತ್‌ ಶಾ ಅವರು ನರೇಂದ್ರ ಮೋದಿಯವರ ರೀತಿಯೇ ಪ್ರೀತಿಯ ಅಪ್ಪುಗೆಯನ್ನ ಕೊಟ್ಟು ಜೊತೆಯಲ್ಲಿಯೇ ತಾಯಿಯ ದರ್ಶನಕ್ಕೆ ಕರೆದುಕೊಂಡು ಬಂದರಲ್ಲ ಇದೇ ನನಗೆ ಅಚ್ಚೇ ದಿನ್‌ ಇದಕ್ಕಿಂತ ದೊಡ್ಡ ಅಚ್ಚೇ ದಿನವನ್ನ ನಾನು ಬಯಸೋದಿಲ್ಲ ಎಂದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!