Mysore
20
scattered clouds

Social Media

ಶನಿವಾರ, 22 ಆಗಸ್ಟ್ 2026
Light
Dark

ತೋಟದಿಂದ 4 ವನ್ಯ ಪಕ್ಷಿ ವಶ : ದರ್ಶನ್‌ ದಂಪತಿ ವಿರುದ್ಧ ಪ್ರಕರಣ ದಾಖಲು

ಅರಣ್ಯ ಸಂಚಾರಿ ಅಧಿಕಾರಿಗಳಿಂದ ದಾಳಿ

ಮೈಸೂರು : ತಿ.ನರಸೀಪುರತಾಲ್ಲೂಕು ವ್ಯಾಪ್ತಿಯ ಕೆಂಪಯ್ಯನ ಹುಂಡಿಯಲ್ಲಿರುವ ನಟ ದರ್ಶನ್ ಅವರ ಮಾಲೀಕತ್ವದ ತೂಗುದೀಪ ಫಾರ್ಮ್ ಹೌಸ್ ಮೇಲೆ ಶುಕ್ರವಾರ ತಡರಾತ್ರಿ ದಾಳಿ ನಡೆಸಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಮಂಗೋಲಿಯಾದ ೪ ವಲಸೆ ಹಕ್ಕಿ ‘ಬಾರ್ ಹೆಡೆಡ್ ಗೂಸ್’ಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ದರ್ಶನ್, ಪತ್ನಿ ವಿಜಯಲಕ್ಷ್ಮೀ ಹಾಗೂ ಫಾರ್ಮ್ ಹೌಸ್ ವ್ಯವಸ್ಥಾಪಕ ನಾಗರಾಜ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ರೇಡಿಯೋ ಜಾಕಿಯೊಬ್ಬರು ಮಾಡಿದ ವಿಡಿಯೋ ಒಂದರಿಂದ ಈಗ ದರ್ಶನ್ ಗೆ ಸಂಕಷ್ಟ ಎದುರಾಗಿದೆ.

ರೇಡಿಯೋ ಜಾಕಿಯೊಬ್ಬರು ಸಂಕ್ರಾಂತಿ ಹಬ್ಬಕ್ಕೆ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಮಾಡಿದ ವಿಡಿಯೋದಿಂದ ಬಾರ್ ಹೆಡೆಡ್ ಗೂಸ್ ಹಕ್ಕಿಗಳು ದರ್ಶನ್ ಫಾರ್ಮ್ ಹೌಸ್ ಪಂಜರದಲ್ಲಿ ಇರುವುದು ಕಂಡು ಬಂದಿತ್ತು. ಈ ಹಕ್ಕಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ ಷೆಡ್ಯೂಲ್-೨ ಅಡಿಯಲ್ಲಿ ಬರುತ್ತವೆ. ಇವು ವಿರಳವಾದ ಪಕ್ಷಿಗಳಾಗಿವೆ. ಈ ಹಕ್ಕಿಗಳು ಹೆಚ್ಚಾಗಿ ಮಧ್ಯ ಏಷ್ಯಾದ ಮಂಗೋಲಿಯಾ, ಕಜಕಿಸ್ತಾನ, ಟಿಬೆಟ್ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆ ಪ್ರದೇಶದಲ್ಲಿ ಶೀತ ಹೆಚ್ಚಾದಾಗ ರಕ್ಷಣೆಗೋಸ್ಕರ ಹಿಮಾಲಯ ದಾಟಿ ದಕ್ಷಿಣ ರಾಜ್ಯಗಳಿಗ ಆಗಮಿಸುತ್ತವೆ. ಇವುಗಳನ್ನು ಸೆರೆ ಹಿಡಿದು ಸಾಕುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಅಪರಾಧವಾಗಿರುವ ಹಿನ್ನೆಲೆಯಲ್ಲಿ ದರ್ಶನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದ್ದಾರೆ.

ದರ್ಶನ್ ಫಾರ್ಮ್ ಹೌಸ್ ವಲಸೆ ಹಕ್ಕಿಗಳು ಇರುವ ಖಚಿತ ಮಾಹಿತಿ ನಮಗೆ ದೊರೆತಿತ್ತು. ಅಲ್ಲದೆ, ಸಾಮಾಜಿಕ ಜಾಲತಾಣ ಮೂಲಕ ಸಹ ಈ ವಿಚಾರ ಗಮನಕ್ಕೆ ಬಂತು. ಹಾಗಾಗಿ, ಶುಕ್ರವಾರ ಸಂಜೆ ಸ್ಥಳಕ್ಕೆ ತೆರಳಿ ಹಕ್ಕಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಕ್ಕಿಗಳು ದರ್ಶನ್ ಫಾರ್ಮ್ ಹೌಸ್‌ಗೆ ಹೇಗೆ ಬಂತು? ಅವುಗಳನ್ನು ಅವರಿಗೆ ನೀಡಿದವರು ಯಾರು ಎಂಬ ಕುರಿತು ತನಿಖೆ ನಡೆಸಲಾಗುವುದು ಎಂದು ಆರ್‌ಎಫ್‌ಒ ವಿವೇಕ್ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!