ಮೈಸೂರು: ಚಿರತೆ ದಾಳಿಗೊಳಗಾದವರಿಗೆ ಸರ್ಕಾರ ೧೫ ಲಕ್ಷ ರೂ. ಪರಿಹಾರ ನೀಡುತ್ತಿದೆ. ಆದರೆ, ಚಿರತೆ ದಾಳಿಯಿಂದ ಸಾವನ್ನಪ್ಪಿದವರಿಗೆ ೧ ಕೋಟಿ ರೂ. ನೀಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.
ರಾಜ್ಯ ಸರ್ಕಾರಕ್ಕೆ ಚಿರತೆ ಹಿಡಿಯಲು ಆಗಲಿಲ್ಲ. ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಅರಣ್ಯ ಇಲಾಖೆಯ ಬಳಿ ಒಂದು ಚಿರತೆ ಬಂದರೆ, ಅವರು ಎದ್ದು ಬಿದ್ದು ಓಡಿ ಹೋಗುತ್ತಾರೆ. ಸಿಎಂ ಮನೆಯ ಮುಂದೆ ಚಿರತೆ ಬಂದರೆ ಸೆಕ್ಯೂರಿಟಿ ಬಿಟ್ಟು ಓಡುತ್ತಾರೆ. ಚಿರತೆಯನ್ನೇ ಹಿಡಿಯಲು ಆಗದಿದ್ದರೆ ಜನರಿಗೆ ಹೇಗೆ ರಕ್ಷಣೆ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಚಿರತೆ ದಾಳಿಗೆ ಸಿಲುಕಿ ಮೃತಪಟ್ಟರೆ 1 ಕೋಟಿ ರೂ. ಪರಿಹಾರ ನೀಡಲಿ : ವಾಟಾಳ್ ನಾಗರಾಜ್





