ತಿ.ನರಸೀಪುರ : ಪಟ್ಟಣದ ಪುರಸಭಾ ವ್ಯಾಪ್ತಿಯ ಹಲವು ವಾರ್ಡ್ ಗಳಲ್ಲಿ ವರುಣಾ ಕ್ಷೇತ್ರದ ಶಾಸಕ ಡಾ .ಯತೀಂದ್ರ ಸಿದ್ದರಾಮಯ್ಯ ಸಾರ್ವಜನಿಕ ಸಭೆ ನಡೆಸಿ ಕುಂದುಕೊರತೆ ಆಲಿಸಿದರು.
ಪುರಸಭೆಯ ವರುಣಾ ಕ್ಷೇತ್ರ ವ್ಯಾಪ್ತಿಯ 3,5,11 ಮತ್ತು ಇತರೆ ವಾರ್ಡ್ ಗಳಲ್ಲಿ ಸಭೆ ನಡೆಸಿ ಸಾರ್ವಜನಿಕರಿಂದ ಹಲವು ಅಹವಾಲು ಸ್ವೀಕರಿಸಿದರು. ನಂತರ ಕಾರ್ಯಕ್ರಮ ಕುರಿತು ಮಾತನಾಡಿದ ಶಾಸಕರು,ಬಿಜೆಪಿ ಸರ್ಕಾರ ಗ್ರಾಮೀಣ ಜನರಿಗೆ ನೀಡುತ್ತಿದ್ದ ವಸತಿ ಯೋಜನೆಗಳನ್ನು ರದ್ದುಪಡಿಸಿದ್ದು,ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳಿಗೆ ವಸತಿ ಯೋಜನೆಯಡಿ ಮನೆಗಳು ಅವಶ್ಯಕತೆಯಿದ್ದು ,ತಕ್ಷಣ ಸರ್ಕಾರ ವಸತಿ ಯೋಜನೆಗಳನ್ನು ಪುನರ್ ಆರಂಭಿಸಬೇಕು ಎಂದರು.
ಶಾಸಕರು ,ಸಾಮಾಜಿಕ ಭದ್ರತಾ ಯೋಜನೆಯ ವಿಧವಾ ವೇತನ,ಅಂಗವಿಕಲ ವೇತನ ,ವೃದ್ದಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ ಹಲವು ಅರ್ಹ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿದರು.
ತಾ.ಪಂ.ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ಮಾತನಾಡಿ,ಸಿದ್ದರಾಮಯ್ಯ ನವರು ವರುಣಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವವನ್ನು ನಡೆಸಿದ್ದಾರೆ.ಹಾಗಾಗಿ ಸಿದ್ದರಾಮಯ್ಯ ನವರನ್ನು ವರುಣಾ ಕ್ಷೇತ್ರದಲ್ಲೇ ಸ್ಪರ್ಧಿಸುವಂತೆ ಮನವೊಲಿಸಲು ಸರ್ವ ಜನಾಂಗದ ನಿಯೋಗ ತೆರಳಬೇಕು ಎಂದರು.
ಅಲಗೂಡು ಶಿವಕುಮಾರ್ ಮಾತನಾಡಿ,ಅಲಗೂಡು ಗ್ರಾಮದಲ್ಲಿ ಒಂದೇ ಮನೆಗಳಲ್ಲಿ ಮೂರು ನಾಲ್ಕು ಕುಟುಂಬಗಳು ವಾಸಿಸುತ್ತಿವೆ.ಹಾಗಾಗಿ ಗ್ರಾಮದ ಜನರಿಗೆ ನಿವೇಶನಗಳನ್ನು ನೀಡಬೇಕು.ಮನೆಯಮ್ಮನ ದೇವಸ್ಥಾನವನ್ನು ನಿರ್ಮಾಣ ಮಾಡಿಕೊಡಲು ಶಾಸಕರಲ್ಲಿ ಮನವಿ ಸಲ್ಲಿಸಿದರು .
ಪುರಸಭೆ ಉಪಾಧ್ಯಕ್ಷೆ ನಾಗರತ್ನ ಮಾದೇಶ,ಮಾಜಿ ಅಧ್ಯಕ್ಷ ಸೋಮಣ್ಣ ,ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಯ್ಯದ ಅಹಮದ್ ,ಮಾಜಿ ಉಪಾಧ್ಯಕ್ಷೆ ಪ್ರೇಮಮರಯ್ಯ, ಪುರಸಭೆ ಸದಸ್ಯರಾದ ಟಿ .ಎಂ .ನಂಜುಂಡಸ್ವಾಮಿ ,ತುಂಬಲಾ ಪ್ರಕಾಶ್,ಬಾದಾಮಿ ಮಂಜು ,ಬೇಬಿ ಹೇಮಂತ್,ಶ್ರೀಕಂಠ ,ರಾಘವೇಂದ್ರ ,ವರುಣಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೇಗೌಡ,ಯುವ ಕಾಂಗ್ರೆಸ್ ಅಧ್ಯಕ್ಷ ಅಮಾಸೆಗೌಡ ಅಮ್ಜಾದ್ ಖಾನ್,ದಿವಾಕರ್ ,ಡಾ .ಪ್ರದೀಪ್ ,ಹೆಗ್ಗೂರು ನಿಂಗಯ್ಯ ಚಿನ್ನಪ್ಪ ,ತಹಶೀಲ್ದಾರ್ ಸಿ .ಜಿ .ಗೀತಾ,ಕಂದಾಯ ನಿರೀಕ್ಧಕ ಸರ್ವೇಶ್, ಪುಟ್ಟಸ್ವಾಮಿ ಇತರರು ಹಾಜರಿದ್ದರು.