Mysore
25
broken clouds

Social Media

ಬುಧವಾರ, 06 ಮೇ 2026
Light
Dark

ವಿದ್ಯುತ್ ಪ್ರವಹಿಸಿ ಶಿಕ್ಷಕ ನಿಧನ     

ಕುಶಾಲನಗರ: ಗ್ರಾಮದೇವತೆ ಹಬ್ಬದ ಸಂಭ್ರಮದಲ್ಲಿದ್ದ ಶಿಕ್ಷಕ್ಷರೊಬ್ಬರು ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಹೆಬ್ಬಾಲೆ ಗ್ರಾಮದ ಮೊಗಣ್ಣ ಎಂಬುವರ ಪುತ್ರ ಪ್ರಾಥಮಿಕ ಶಾಲಾ ಶಿಕ್ಷಕ ಹೆಚ್.ಎಂ. ಗಿರೀಶ್(42) ಮೃತ ದುರ್ದೈವಿ.

ಹೆಬ್ಬಾಲೆಯ ಗ್ರಾಮದೇವತೆ ಶ್ರೀ ಬನಶಂಕರಿ ಅಮ್ಮನ ಉತ್ಸವದ ಹಿನ್ನಲೆಯಲ್ಲಿ ಮನೆಯನ್ನು‌ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.‌ ಮನೆಯ ಮಹಡಿಗೆ ತೆರಳಿದ ಶಿಕ್ಷಕನಿಗೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಶಿಕ್ಷಕಿ ಹಾಗೂ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!