Mysore
24
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಸ್ವಚ್ಛತೆ ಅಧ್ಯಯನಕ್ಕೆ ಕರ್ಮಚಾರಿಗಳ ತಂಡ ಸಿಂಗಾಪುರಕ್ಕೆ 

ಮೈಸೂರು: ಸ್ಯಾನಿಟೇಷನ್ ವ್ಯವಸ್ಥೆ ಹಾಗೂ ಪೌರಕಾರ್ಮಿಕರ ಪ್ರಸ್ತುತ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸುವ ಸಲುವಾಗಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಒಳಗೊಂಡಂತೆ 17 ಮಂದಿ ಅಧಿಕಾರಿಗಳ ತಂಡ ನ. 23ರಿಂದ 27ರವರೆಗೆ ಸಿಂಗಾಪುರಕ್ಕೆ ಪ್ರವಾಸ ಕೈಗೊಂಡಿದ್ದಾರೆ.

ಸಫಾಯಿ ಕರ್ಮಚಾರಿಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸ್ಮಾರ್ಟ್ ಸಿಟಿ ಮತ್ತು ಸ್ವಚ್ಛ ನಗರವೆಂದು ಹೆಸರಾಗಿರುವ ಸಿಂಗಾಪುರ ದೇಶವನ್ನು 5 ದಿನಗಳ ಕಾಲ ವೀಕ್ಷಿಸಿ, ಅಧ್ಯಯನ ನಡೆಸಿ ಸರ್ಕಾರಕ್ಕೆ ಈ ತಂಡ ವರದಿ ಸಲ್ಲಿಸಲಿದೆ ಎಂದು ಆಯೋಗದ ಕಾರ್ಯದರ್ಶಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!