Mysore
31
scattered clouds

Social Media

ಬುಧವಾರ, 20 ಮೇ 2026
Light
Dark

ರಸ್ತೆ ಗುಂಡಿಗೆ ಗರ್ಭಿಣಿ ಮಹಿಳೆ ಬಲಿ

ಶ್ರೀರಂಗಪಟ್ಟಣ: ತಾಲ್ಲೂಕಿನ ತರೀಪುರ ಬಳಿ ಸೋಮವಾರ ರಸ್ತೆ ಗುಂಡಿಗೆ ಬೈಕ್‌ ಬಿದ್ದು ಗಂಭೀರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ, ಮಹದೇವಪುರದ ಕಾರ್ತಿಕ್ ಅವರ ಪತ್ನಿ ಛಾಯಾದೇವಿ (22) ಮಂಗಳವಾರ ಸಂಜೆ ಮೃತಪಟ್ಟರು.

ಬೈಕ್‌ ಚಲಾಯಿಸುತ್ತಿದ್ದ ಕಾರ್ತಿಕ್‌ ಕೂಡ ಗಾಯಗೊಂಡಿದ್ದು, ಚಿಕಿತ್ಸೆ ಪಡೆದಿದ್ದಾರೆ. ದಂಪತಿ ಮೈಸೂರಿನಿಂದ ಸ್ವಗ್ರಾಮಕ್ಕೆ ಬರುವ ವೇಳೆ ಅಪಘಾತ ನಡೆದಿತ್ತು. ಈ ಸಂಬಂಧ ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!