ಕ್ರೀಡೆ

ಮೈಸೂರು ವಾರಿಯರ್ಸ್‌ಗೆ ರೋಚಕ ಜಯ

ಪವನ್ ದೇಶಪಾಂಡೆ ಆಕರ್ಷಕ, ಸಮಯೋಚಿತ ಅರ್ಧ ಶತಕ

ಬೆಂಗಳೂರು: ಪವನ್ ದೇಶಪಾಂಡೆ ಅವರ ಸಮಯೋಚಿತ ಬ್ಯಾಟಿಂಗ್ (57) ಹಾಗೂ ವಿದ್ಯಾಧರ ಪಾಟೀಲ್ ಅವರ ಮಾರಕ ಬೌಲಿಂಗ್ (24ಕ್ಕೆ 4) ನೆರವಿನಿಂದ ಮೈಸೂರು ವಾರಿಯರ್ಸ್ ತಂಡ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 2 ರನ್‌ಗಳ ರೋಚಕ ಜಯ ದಾಖಲಿಸಿದೆ.

146 ರನ್ ಜಯದ ಗುರಿ ಹೊತ್ತ ಹುಬ್ಬಳ್ಳಿ ಟೈಗರ್ಸ್ ಮೈಸೂರು ವಾರಿಯರ್ಸ್ ಬೌಲಿಂಗ್ ದಾಳಿಗೆ ಸಿಲುಕಿ 9 ವಿಕೆಟ್ ಕಳೆದುಕೊಂಡು 143ರನ್ ಗಳಿಸಿ ವೀರೋಚಿತ ಸೋಲನುಭವಿಸಿತು.

ನಾಯಕ ಅಭಿಮನ್ಯು ಮಿಥುನ್ (27), ಶರಣ್ ಗೌಡ (31) ಹಾಗೂ ಆನಂದ್ ದೊಡ್ಡಮನಿ (10) ಉತ್ತಮ ರೀತಿಯಲ್ಲಿ ಹೋರಾಟ ನೀಡಿದರೂ ಸೋಲಿನ ದವಡೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ.

ಮೈಸೂರು ವಾರಿಯರ್ಸ್ ಪರ ವಿದ್ಯಾಧರ ಪಾಟೀಲ್ ೩, ಶ್ರೇಯಸ್ ಗೋಪಾಲ್ ಹಾಗೂ ಆದಿತ್ಯ ಗೋಯಲ್ ತಲಾ ೨ ವಿಕೆಟ್ ಗಳಿಸಿ ಹುಬ್ಬಳ್ಳಿ ಟೈಗರ್ಸ್ ಪಡೆಯನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

ಮೈಸೂರಿಗೆ ಆಸರೆಯಾದ ದೇಶಪಾಂಡೆ: ಕುಸಿದ ಮೈಸೂರಿಗೆ ಪವನ್ ದೇಶಪಾಂಡೆ ಮತ್ತೆ ಆಸರೆಯಾದರು. ವಾಸುಕಿ ಕೌಶಿಕ್ ದಾಳಿಗೆ ತತ್ತರಿಸಿದ ಮೈಸೂರು ವಾರಿಯರ್ಸ್ 7ವಿಕೆಟ್ ನಷ್ಟಕ್ಕೆ ಕೇವಲ 145ರನ್ ಗಳಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಹುಬ್ಬಳ್ಳಿ ಟೈಗರ್ಸ್ ಅದ್ಭುತ ಯಶಸ್ಸು ಕಂಡಿತು. ನಾಯಕ ಕರುಣ್ ನಾಯರ್ ಹಾಗೂ ನಿತಿನ್ ಬಿಲ್ಲೆ ಖಾತೆ ತೆರೆಯದೆ ಪೆವಿಲಿಯನ್ ಸೇರಿದ್ದು, ಮೈಸೂರಿನ ರನ್ ಗಳಿಕೆಯ ಮೇಲೆ ತೀವ್ರ ಹೊಡೆತ ಬಿದ್ದಿತು. ನಿಹಾಲ್ ಉಳ್ಳಾಲ್ ಕೇವಲ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆಗ ತಂಡಕ್ಕೆ ಆಶ್ರಯ ನೀಡಿದ್ದು, ಪವನ್ ದೇಶಪಾಂಡೆ. 51 ಎಸೆತಗಳನ್ನೆದುರಿಸಿದ ದೇಶಪಾಂಡೆ 8 ಬೌಂಡರಿ ನೆರವಿನಿಂದ 57 ರನ್ ಗಳಿಸಿದರು. ಸತತ ನಾಲ್ಕು ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸಿದ ಕೀರ್ತಿ ಪವನ್ ದೇಶಪಾಂಡೆಗೆ ಸಲ್ಲುತ್ತದೆ. ಒಟ್ಟು 328ರನ್ ಗಳಿಸಿದ ಪವನ್ ದೇಶಪಾಂಡೆ ಈಗ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಶುಭಾಂಗ್ ಹೆಗ್ಡೆ (22) ಮತ್ತು ಶಿವರಾಜ್ (26) ಕೆಲ ಹೊತ್ತು ದೇಶಪಾಂಡೆ ಅವರಿಗೆ ಸಾಥ್ ನೀಡಿದರು. ಕೊನೆಯ ಕ್ಷಣದಲ್ಲಿ ಭರತ್ ಧುರಿ ಕೇವಲ 7 ಎಸೆತಗಳಲ್ಲಿ 2ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ ಮಿಂಚಿನ ವೇಗದಲ್ಲಿ 18 ರನ್ ಗಳಿಸಿ ತಂಡಕ್ಕೆ ನೆರವಾದರು.

ಸಂಕ್ಷಿಪ್ತ ಸ್ಕೋರ್:

ಮೈಸೂರು ವಾರಿಯರ್ಸ್: 20ಓವರ್‌ಗಳಲ್ಲಿ 8 ವಿಕೆಟ್‌ಗೆ 145 ರನ್ (ಪವನ್ ದೇಶಪಾಂಡೆ 57, ಶುಭಾಂಗ್ ಹೆಗ್ಡೆ 22, ಶಿವರಾಜ್ 26, ವಾಸುಕಿ ಕೌಶಿಕ್ 19ಕ್ಕೆ 3, ರೋಹನ್ ನವೀನ್ 37ಕ್ಕೆ 2)

ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 143(ಸಿಸೋಡಿಯಾ 22, ಶ್ರೀನಿವಾಸ್ ಶರತ್ 21, ಎ.ಮಿಥುನ್ 27, ಶರಣ್ ಗೌಡ್ 31, ಆನಂದ ದೊಡ್ಡ ಮನಿ 10*, ವಿದ್ಯಾಧರ 24ಕ್ಕೆ 4, ಅದಿತ್ಯ ಗೋಯಲ್ 26ಕ್ಕೆ 2, ಶ್ರೇಯಸ್ ಗೋಪಾಲ್ 27ಕ್ಕೆ 2)

andolana

Recent Posts

ದಸರಾ ಯಶಸ್ವಿಗೆ 17 ಉಪಸಮಿತಿಗಳ ರಚನೆ

ಮೈಸೂರು: ಮೈಸೂರು ದಸರಾ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ 17 ಉಪಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ…

1 hour ago

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…

15 hours ago

ಸಂಪುಟ ವಿಸ್ತರಣೆ ವಿಳಂಬ; ಡಿಕೆಶಿ ಅಸಮಾಧಾನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…

15 hours ago

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…

15 hours ago

ರಸ್ತೆ ಬದಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು

ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…

15 hours ago