ಆಂದೋಲನ ಪುರವಣಿ

ಖುಷಿಯೊಂದನು ಕಾಯುತ್ತಾ ಬರೆಯದೇ ಉಳಿದೆ

ಹೀಗೆ ಏನಾದರೊಂದನ್ನು ಬರೆಯುವುದು ಸುಲಭ. ಅಂತೆಯೇ ಹೀಗೆ ಏನಾದರೊಂದನ್ನು ಬರೆಯುವುದು ಕಷ್ಟ. ತಟ್ಟೆಯಲ್ಲಿರುವ ತಿನಿಸುಗಳಲ್ಲಿ ಬಹಳ ಇಷ್ಟವಾದ ಆ ಒಂದು ತಿನಿಸನ್ನು ಕಡೆಯಲ್ಲಿ ತಿನ್ನಲು ಉಳಿಸುವಂತೆ ಕೆಲವೊಮ್ಮೆ ಬರಹಕ್ಕೆ ಕೈಹಾಕುವ ಮುನ್ನ ಇತರೆ ಕೆಲಸಗಳನ್ನು ಮುಗಿಸಿಬಿಡಬೇಕೆಂದು ಮನಸಾಗುತ್ತದೆ. ಆ ವೇಳೆಗಾಗಲೆ ಸಂಗೀತದಷ್ಟು, ಬರಹದಷ್ಟು ಸೊಗಸಲ್ಲದ ನೂರಾರು ಸಂಗತಿಗಳು ನಾ ಮುಂದು, ತಾ ಮುಂದೆಂದು ನುಗ್ಗಿ ಬರುತ್ತವೆ.

ಸಣ್ಣವರಿರುವಾಗ ನಾವು ತಣ್ಣೀರುಬಾವಿ ಕಡಲ ಕಿನಾರೆಗೆ ಹೋಗಿ ಆಡತೊಡಗಿ, ಪಾಯವಿಲ್ಲದ, ಗೋಡೆಯಿಲ್ಲದ, ಕಂಬವಿಲ್ಲದ ಮರಳ ಮನೆಯೊಂದನ್ನು ಕಟ್ಟಿ, ಕತ್ತಲಾಗುವವರೆಗೂ ಅದನ್ನು ಕಾದು, ಮನೆಗೆ ತೆರಳುವ ಹೊತ್ತಿಗೆ ಅದನ್ನು ಬಿಟ್ಟು ತೆರಳುವಾಗ ಆಗುತ್ತಿದ್ದ ಸಂಕಟದಂಥಾ ಭಾವವೊಂದು ಆಗಾಗ ಕಾಡಿ, ಅದೇನೋ ಹೆದರಿಕೆಯಾದಂತಾಗಿ, ಸೊಗಸಲ್ಲದ ಸಂಗತಿಗಳನ್ನು ಬದಿಗೊತ್ತಿ ಒಂದಷ್ಟು ಹೊತ್ತು ಬರೆಯಲೇಬೇಕೆಂದು ಕೂತಾಗ ಅರಿವಾಗುತ್ತದೆ.
ಹೀಗೆ ಹೇಗೋ, ಎಲ್ಲಂದರಲ್ಲಿ ಗುನುಗಿಬಿಡುವ ಯಾವುದೋ ರಾಗದ ಛಾಯೆಯೊಂದು ಮರೆಯಾಗದೆ ಹಾಗೇ ಉಳಿದು ಮುಂದೊಂದು ದಿನ ಒಂದು ಹಾಡಾಗಿಬಿಡುವಂತೆ, ಯಾವುದೋ ಲಹರಿಯಲ್ಲಿ ಹೊಳೆದ ಸಾಲೊಂದು ಕಾದಂಬರಿಯೇ ಆಗಿಬಿಡಬಹುದು. ಆಗದೆಯೂ ಇರಬಹುದು. ಅಂತಹದೊಂದು ಲಹರಿಯ ನೆನಕೆಗೆ ಮುಂದಾಗಿ ಆ ಸಾಲೇ ನೆನಪಾಗದೆ ಹೋದಾಗ, ಶಾಲೆಯ ಪರೀಕ್ಷೆ ನೆನಪಾಗುತ್ತದೆ. ಪ್ರಶ್ನೆ ಪತ್ರಿಕೆಯೆದುರು ಕೂತು, ಇದನ್ನು ಓದಬೇಕಿತ್ತೆಂಬ ಅರಿವಾಗುತ್ತದೆ.

ಇತರೆ ತಿಂಡಿಗಳನ್ನೆಲ್ಲ ಹೇಗೋ ಗಬಗಬನೆ ಮುಗಿಸಿ, ಸವಿದು ತಿನ್ನಲು ತಟ್ಟೆಯ ಮೂಲೆಯಲ್ಲಿರಿಸಿದ್ದ ಆ ಇಷ್ಟದ ತಿನಿಸನ್ನು ತಿನ್ನುವ ಹೊತ್ತಿಗೆ ಹೊಟ್ಟೆ ತುಂಬಿದಂತಾಗಿ, ಹಳೆಯ ಉತ್ಕಟತೆ ಉಳಿದಿರುವುದಿಲ್ಲ. ನಿರಾಶೆಯಾಗುತ್ತದೆ.

ಕೆಲವೊಂದು ಕ್ರಿಯೆಗಳೇ ಹೀಗೆ. ಸಂಗೀತದ ಹಾಗೆ. ಬರಹದ ಹಾಗೆ. ಪ್ರೀತಿಯ ಹಾಗೆ. ಅದರಲ್ಲಿ ಮುಳುಗದೆ ಅದು ದಕ್ಕುವುದಿಲ್ಲ.
ಕಡಲ ನೀರಲ್ಲಿ ಆಡುವ ತವಕ ಆಗಲೂ ಇರಲಿಲ್ಲ. ಸುಖಾಸುಮ್ಮನೆ ಮರಳಲ್ಲಿ ಕೂತು ಕಡಲ ನೋಡುವ ಹಪಹಪಿಕೆ ಈಗಲೂ ಇದೆ. ಅಂತಹದೊಂದು ಮರಳ ದಂಡೆಯ ಮೇಲೆ ಕೂತು ಮತ್ತೊಂದು ರಾಗವ ಗುನುಗಿದಾಗಲೋ, ಸಾಲೊಂದು ಹೊಳೆದಾಗಲೋ ಮಿಂಚುವ ಖುಷಿಯನ್ನು ನಾನು ಎದುರು ನೋಡುತ್ತೇನೆ ಮತ್ತು ಅಂತಹ ತಹತಹದ ಹಾಡಾಗಲಿ, ಬರಹವಾಗಲಿ ದಕ್ಕುವವರೆಗು ನಾನು ಅವೆರಡನ್ನೂ ಮಾಡದೆ ಸುಮ್ಮನಿರಲು ಬುಂಸುತ್ತೇನೆ.

andolana

Recent Posts

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

12 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

13 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

13 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

13 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

13 hours ago

ಮಹಾಪಂಚ್ ಕಾರ್ಟೂನ್‌

ಮಹಾಪಂಚ್ ಕಾರ್ಟೂನ್‌ | ಸೆಪ್ಟಂಬರ್‌ 18 ಶುಕ್ರವಾರ

13 hours ago