ಹಾಡು ಪಾಡು

ಕೆಂಡಗಣ್ಣಿನ ಮೇಷ್ಟರ ತಾಯಿ ಕರುಳು

ಭಾಗ್ಯಜ್ಯೋತಿ ಹಿರೇಮಠ್

ಕನ್ನಡದ ಅನನ್ಯ ಕಥೆಗಾರ ಮೊಗಳ್ಳಿ ಸರ್ ಇಲ್ಲದ ಈ ಸಂದರ್ಭದಲ್ಲಿ ಅನೇಕರು ಮೌನ ಮುರಿದಿದ್ದಾರೆ. ಕೆಲವರು ವ್ರತನಿಷ್ಠರಿದ್ದಾರೆ, ಮತ್ತೂ ಕೆಲವರು ಅಸಹಾಯಕರಾಗಿದ್ದಾರೆ. ಮೇಷ್ಟ್ರನ್ನು ಹತ್ತಿರದಿಂದ ಬಲ್ಲ ನನಗೆ ಅವರೊಳಗಿನ ಸಂಕಟ, ನೋವು, ವಿಷಾದ, ತಾಳ್ಮೆ, ಅವೆಲ್ಲವನ್ನೂ ನಲಿವು ಮಾಡಿಕೊಳ್ಳುವ ಹಾದಿ ಮತ್ತು ಅವರ ಕೆಂಡಗಣ್ಣಿನ ಪರಿಚಯವೂ ಇದೆ. ಯಾವುದೇ ವಿಷಯವಿರಲಿ, ಅದರ ಜೀವದ್ರವ್ಯ ಅರಗಿಸಿಕೊಂಡು ಅರಳುತ್ತಿದ್ದ ಅವರ ಬೆರಗುಗಣ್ಣಿನ ಪರಿಚಯವೂ ಇದೆ. ಸಾಹಿತ್ಯದ ಭಿನ್ನ ನೆಲೆ- ಕಲೆಗಳ ಕುರಿತು ಅವರ ವಿಚಾರಗಳು ವಿದ್ಯಾರ್ಥಿಗಳಾದ ನಮಗೆಲ್ಲ ಅದರ ಅರಿವಿನ ಹರಿವನ್ನು ಹೆಚ್ಚಿಸುವಂತೇ ಇದ್ದವು. ಅವರ ಲೇಖನಿಯ ಹರಿತ, ಮಾತಿನ ಮೃದುತ್ವ ಹಾಗೂ ತಾಯಿಯ ಅಂತಃಕರಣ ಅವರನ್ನು ಬಲ್ಲವರಿಗೆ ಅಪರಿಚಿತವೇನಲ್ಲ.

ಮೇಷ್ಟ್ರ ಬಗೆಗಿನ ಆಡುವ ಮಾತುಗಳು ಎದೆಯಲ್ಲಿ ಹೆಪ್ಪುಗಟ್ಟಿವೆ. ಅವರ ಎದೆಯ ದನಿಯೆ ಲ್ಲವೂ ಬಯಲು ಬಯಲನೇ ಬಿತ್ತಿದಂತೆ ಕಾಣುತ್ತದೆ. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣುವ ಮೇಷ್ಟ್ರು ಅವರವರ ಮಟ್ಟಕ್ಕೆ ನಿಲುಕುವಂತೆ ವಿಷಯವನ್ನು ಮನದಟ್ಟು ಮಾಡುತ್ತಿದ್ದರು. ಅಷ್ಟು ಸುಲಭವಲ್ಲ ಅವರ ಸಹವಾಸ ಆದರೆ ವಿಶ್ವಾಸ ಬಂದರೆ ವಿದ್ಯಾರ್ಥಿಗಳನ್ನು ದಡ ಸೇರಿಸುವ ತನಕ ತಾವೇ ಜವಾಬ್ದಾರಿ ತೆಗೆದುಕೊಂಡು ಯಾವ ನಿರೀಕ್ಷೆಯಿಲ್ಲದೆ ಆ ಕೆಲಸದಲ್ಲಿ ಮುಳುಗುತ್ತಿದ್ದರು. (ಉದಾಹರಣೆಗೆ ಸಂಶೋಧನೆ) ಎಷ್ಟೋ ಸಲ ಇವರೇ ಒತ್ತಡ ಮಾಡಿಕೊಳ್ಳುತ್ತಿದ್ದರು.

ನಾನು ಸಂಶೋಧನಾ ಅಭ್ಯಾಸ ಮಾಡಲು ಕನ್ನಡ ವಿಶ್ವವಿದ್ಯಾಲಯ ಸೇರಿದಾಗ ಕೋರ್ಸ್‌ವರ್ಕ್ ಅಂಥ ತರಗತಿಗಳು ಆರಂಭವಾದ ಸಂದರ್ಭದಲ್ಲಿ ಬೇರೆ ಬೇರೆ ವಿಭಾಗಗಳಿಂದ ಅಧ್ಯಾಪಕರು ಬಂದು ಪಾಠ ಮಾಡಿ ಹೋಗ್ತಿದ್ರು, ಆದರೆ ಮೊಗಳ್ಳಿ ಸರ್ ಕ್ಲಾಸ್ ಇರಲಿಲ್ಲ. ಅಷ್ಟೇ ಯಾಕೆ ಎಷ್ಟೋ ವಿದ್ಯಾರ್ಥಿಗಳಿಗೆ ಅವರು ಇಲ್ಲಿ ಇದ್ದಾರೆ ಎಂಬುದೇ ಗೊತ್ತಿರಲಿಲ್ಲ. ನಾನು ಮೇಷ್ಟ್ರನ್ನು ಒಮ್ಮೆ ಕೇಳಿದೆ, ‘ಸರ್, ನೀವು ನಮಗೆ ಕ್ಲಾಸ್ ತಗೋಬೇಕಿತ್ತು’ ಎಂದಾಗ ನಕ್ಕು, ‘ಜನಪದ ವಿದ್ಯಾರ್ಥಿಗಳಿಗೆ ಕ್ಲಾಸ್ ಇರುತ್ತಿದ್ದವು, ಬೇರೆ ವಿದ್ಯಾರ್ಥಿಗಳಿಗೆ ಸಿದ್ಧವಾದ ಜನರಲ್ ವೇಳಾಪಟ್ಟಿಯಲ್ಲಿ ನನ್ನ ವೃತ್ತಿ ಬದುಕಿನ ಒಂದು ತರಗತಿ ಬರದ ಹಾಗೆ ವೇಳಾಪಟ್ಟಿ ಸಿದ್ಧವಾಗುತ್ತಿತ್ತು’ ಎಂದರು.

ಬೆಂಕಿಯುಂಡೆಯನ್ನು ಉಂಡ ಜೀವ ಬೆಂಕಿಯೂ- ಬೆಳಕೂ ಆಗಿತ್ತು. ಯಾವುದನ್ನೂ, ಯಾರನ್ನೂ ಸುಲಭವಾಗಿ ಒಪ್ಪದ ಅವರು ಹೆಂಗರುಳಿನ ಹೆಮ್ಮರವೂ ಆಗಿದ್ದರು. ಅವರ ಹಾಸ್ಯ ಪ್ರಜ್ಞೆಯೂ ಅಷ್ಟೇ ವಿಶೇಷವಾಗಿತ್ತು. ಸದಾ ಹಸಿರಂತೆ ಉಸಿರಾಡುತಿದ್ದ ಅವ್ವನ ನೆನಪು, ಅಪ್ಪನ ಮೇಲಿನ ಕೋಪ, ಅವರ ಊರು, ನೆಂಟರು, ಬಾಲ್ಯ, ಭಯ, ಅವಮಾನ, ಬದುಕುವ ತಹತಹಿಕೆ, ಮೈಸೂರಿನ ದಿನಗಳು, ಮಾನಸ ಗಂಗೋತ್ರಿ, ಗೆಳೆಯ – ಗೆಳತಿಯರು, ಮೇಲುಕೋಟೆ, ನಿರುದ್ಯೋಗ, ಕಥೆಗಾರ, ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಸ, ಅವರ ಅಕ್ಕ, ಅಕ್ಕನ ಮಗಳು (ಎಂದರೆ ಮೇಷ್ಟ್ರ ಮಡದಿ), ಮಕ್ಕಳಾದ ಚಂದನ, ವಂದನ, ಸಿರಿ, ವಿದ್ಯಾರ್ಥಿಗಳು ಎಲ್ಲವನ್ನು, ಎಲ್ಲರನ್ನೂ ಕೊನೆಕ್ಷಣದ ತನಕ ಜೀವಿಸಿದ ಜೀವ.

ತಾವು ಮೈಸೂರಿಗೆ ಹೋಗಿ ಅಲ್ಲಿಯೇ ನೆಲೆ ನಿಲ್ಲಬೇಕು ಎಂಬುದು ಅವರ ಆಸೆಯಾಗಿತ್ತು. ಸಾಹಿತ್ಯದ ಬೇರೆ ಬೇರೆನೆಲೆಯಲ್ಲಿ ಸೃಜನಶೀಲ ವಾಗಿ ತೊಡಗಿಸಿಕೊಂಡ ಅವರಿಗೆ ಕಾವ್ಯವೇ ಪ್ರಿಯವಾಗಿತ್ತು. ಮೌನವಾ ದಾಗ ಸಂಗೀತ ಸಾಂತ್ವನ ನೀಡುತ್ತಿತ್ತು. ಸಿನಿಮಾ, ರಂಗಭೂಮಿಯ ಕುರಿತ ಅವರ ಅಧ್ಯಯನವೂ ವಿಶೇಷವಾಗಿತ್ತು. ಸೃಜನಶೀಲ ಸಂವೇದನೆ ಹೊಂದಿದ ಮೊಗಳ್ಳಿ ಸರ್‌ಗೆ ಈ ಜಾತಿವಾದ, ಜನಾಂಗವಾದ ಹಾಗೂ ಮನುಷ್ಯ ಮನುಷ್ಯರ ದ್ವೇಷಾಸೂಯೆ ಬಗ್ಗೆ ಉಗ್ರ ಕೋಪವಿತ್ತು. ಆ ಕೆಂಡಗಣ್ಣಿನಲ್ಲಿ ತಣ್ಣನೆಯ ಬುದ್ಧ ಬೆಳಗುತ್ತಿದ್ದ. ಅವರ ತತ್ವ, ಅಧ್ಯಾತ್ಮ, ಲೋಕದೃಷ್ಟಿ ಅರಿಯಲು ಅರಿವಿನ ಕಣ್ಣು ತೆರೆಯಬೇಕು

” ಅವರ ಲೇಖನಿಯ ಹರಿತ, ಮಾತಿನ ಮೃದುತ್ವ ಹಾಗೂ ತಾಯಿಯ ಅಂತಃಕರಣ ಅವರನ್ನು ಬಲ್ಲವರಿಗೆ ಅಪರಿಚಿತ ವೇನಲ್ಲ.”

ಆಂದೋಲನ ಡೆಸ್ಕ್

Recent Posts

ಭಟ್ಕಳ ದುರಂತ | ಕಪ್ಪೆ ಚಿಪ್ಪು ಆರಿಸಲು ಹೋಗಿದ್ದ 8 ಮಂದಿ ಸಾವು!

ನದಿಗೆ ಇಳಿದು ಕೊಚ್ಚಿ ಹೋದ ಕುಟುಂಬ ಭಟ್ಕಳ : ಭಟ್ಕಳದಲ್ಲಿ ಚಪ್ಪೆಕಲ್ಲು ಆರಿಸಲು ಹೋಗಿದ್ದ ಒಂದೇ ಕುಟುಂಬದ 8 ಜನರು…

7 hours ago

ಬಲೂಚಿಸ್ತಾನ | ಸೇನಾ ಸಿಬ್ಬಂದಿ ಇದ್ದ ರೈಲು ಗುರಿಯಾಗಿಸಿ ಸ್ಫೋಟ ; 24 ಸಾವು

ಪೇಶಾವರ : ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ನಡೆಸಿದ ಸ್ಪೋಟದಲ್ಲಿ 24 ಮಂದಿ ಸಾವು ಸೇರಿದಂತೆ…

10 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ | ಜನಸಂಖ್ಯೆ ಏರುಪೇರು : ಆಂಧ್ರದ ನೀತಿ ಅನುಕರಣೀಯವೇ?

ದೇಶದ ಜನಸಂಖ್ಯೆಯಲ್ಲಾಗುತ್ತಿರುವ ಏರುಪೇರು ರಾಷ್ಟ್ರೀಯ ಜನಸಂಖ್ಯೆ ನಿರ್ವಹಣೆಯ ನೀತಿಯ ದಿಕ್ಕನ್ನೇ ಬದಲಿಸುತ್ತಿದೆ. ಉತ್ತರ ಭಾರತದ ಜನಸಂಖ್ಯೆ ಪ್ರಮಾಣ ಲಂಗು ಲಗಾಮಿಲ್ಲದೆ…

12 hours ago

ಮೆಲೊಡಿ ಖಾವೋ ; ಕುಚ್‌ ಜಾನ್‌ ಜಾವೋ!

ರಾಜಾರಾಂ ತಲ್ಲೂರು ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ತಿಕ್ಕಿ ಮುಖ ತೊಳೆಯಬೇಕು ಎಂದು ದೇಶದ ಸಂವಿಧಾನದಲ್ಲಿ ಬರೆದಿದೆಯೇನ್ರಿ? . .…

12 hours ago

ಭಾನುವಾರದ ಹಾಡುಪಾಡು | ಈ ಮೋಹ, ಈ ಬಯಕೆ ಮತ್ತು ಇದೆಲ್ಲಾ ಯಾಕೆ ಹೀಗೆ?

ಮೋಹಿತ್‌ ಎಸ್‌ ಗೌಡ ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ‘ಲಿಂಗ ಬದಲಿಸಿ ಬರೆಯಿರಿ’ ಅಥವಾ ‘ವಿರುದ್ಧ ಪದ…

12 hours ago

ಭಾನುವಾರದ ಹಾಡುಪಾಡು | ಒಂದು ಸುಂದರ ಸಂಸಾರ ಮುರಿದುಹೋದ ಕಥೆ

ರೇಣುಕಾ ನಿಡಗುಂದಿ  ಕಾಲೇಜಿನ ದಿನಗಳಲ್ಲಿ ಅವರಿಬ್ಬರೂ ಭೇಟಿಯಾದಾಗಲೇ ಆಕೆ ತಾನು ಬೈ ( Bisexual) ಎಂದು ಹೇಳಿಕೊಂಡಿದ್ದಳು. ಹೊಸತಲೆಮಾರಿನ ಹುಡುಗ…

13 hours ago