ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ ಕಾರಣ. ಈ ಹಿಂದೆ ಹೀಗೆ ಆಗುತ್ತಿರಲಿಲ್ಲ.
ಕಾರಣ ಮೆಟ್ಟಿಲುಗಳ ಮೂಲಕ ಮತ್ತು ಬಸ್ಸುಗಳಲ್ಲಿ ಬಂದ ಭಕ್ತರು ದೇವಸ್ಥಾನದ ಮುಖ್ಯದ್ವಾರದ ಮುಂದೆಯೇ ನಿಂತು ತಾಯಿ ಚಾಮುಂಡಿಗೆ ಕೈ ಮುಗಿದು ಬೆಟ್ಟದಲ್ಲಿಯೇ ಇರುವ ಇತರ ದೇವಸ್ಥಾನ ಗಳಿಗೆ ತೆರಳಿ ದೇವರ ದರ್ಶನ ಮಾಡಿಕೊಂಡು ತೆರಳುತ್ತಿದ್ದರು.ಆಗ ವಿಪರೀತ ಜನ ಸಂದಣಿ ಉಂಟಾಗುತ್ತಿರಲಿಲ್ಲ. ಆದರೆ ಈಗ ಮಾಡಿರುವ ಅವೈಜ್ಞಾನಿಕ ಮಾರ್ಪಾಡಿನಿಂದ ಮೆಟ್ಟಿಲು ಹತ್ತಿ ಬರುವವರು ಮತ್ತು ಬಸ್ನಲ್ಲಿ ಬರುವ ಭಕ್ತರು ಬ್ಯಾರಿಕೇಡ್ ಚಕ್ರವ್ಯೂಹದೊಳಗೆ ಸಿಲುಕಿ ದೇವಿ ದರ್ಶನ ಮಾಡಿಯೇ ತೆರಳಬೇಕು ಎಂಬ ತೀರ್ಮಾನವನ್ನು ಅಧಿಕಾರಿವರ್ಗ ಮಾಡಿದೆ.
ಅಧಿಕಾರಿ ವರ್ಗ ಇನ್ನಾದರೂ ಮೆಟ್ಟಿಲು ಹತ್ತಿ ಬರುವವರು ಮತ್ತು ಬಸ್ ಮೂಲಕ ಬರುವ ಭಕ್ತರಿಗೆ ಇರುವ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ಹೊರಗಡೆ ನಿಂತು ಕೈ ಮುಗಿದು ಹೋಗುವಂತೆಯೇ ವ್ಯವಸ್ಥೆ ಮಾಡಿ ಭಕ್ತರಿಗೆ ಬೃಹತ್ ಎಲ್ ಇ ಡಿ ಪರದೆಯ ಮೂಲಕ ತಾಯಿ ಚಾಮುಂಡಿ ದರ್ಶನ ಮಾಡಿಸಿದರೆ ಜನ ಸಂದಣಿ ಕಡಿಮೆ ಆಗುತ್ತದೆ. ದೇವಿಯ ದರ್ಶನ ಮಾಡಿಯೇ ತೆರಳುತ್ತೇವೆ ಎನ್ನುವ ಭಕ್ತರಿಗೆ ದೇವಸ್ಥಾನದ ಎಡ ಭಾಗದಲ್ಲಿ (ಧರ್ಮ ದರ್ಶನ ಸಾಲು ನಿಲ್ಲುವ ಕಡೆ) ಬ್ಯಾರಿಕೇಡ್ ವ್ಯವಸ್ಥೆ ಮಾಡಲಿ.
-ಅಹಲ್ಯ ಸಿ.ನಾ.ಚಂದ್ರ, ಮೈಸೂರು
ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…
ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…
ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ…
ನರೇಂದ್ರ ಮೋದಿ ಅವರು ೨೦೦೧ರಲ್ಲಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಸತತ ೧೫ ವರ್ಷಗಳು ಅಲ್ಲಿ…