ತಿರುಗುತ್ತಲೇ ಇರುವ ಬುಗುರಿ
ಬೆರಗು ಮೂಡಿಸಿ
ಬಣ್ಣದ ಬುಗುರಿ
ಬಚ್ಚಿಡಲಾಗದ
ಸೂರ್ಯನ ಹಾಗೆ
ಗಿರಗಿರನೆ ತಿರುಗುತ್ತ
ಗೆರೆಯದಾಟಿ ಮರೆತು ಕಕ್ಕುಲಾತಿ
ಆಗಾಗ ಹೊಡೆದು ಗುನ್ನ
ಮಾಡಿತ್ತು
ಘಾಸಿ
ವ್ಯಂಗ್ಯ ಕೀಟಲೆಗಳಲಿ
ನಗಿಸಿತ್ತು ಸುತ್ತ ನೆರೆದವರ
ಆಕಾಶಕ್ಕೆ ನೆಗೆದು
ಪಾತಾಳಕ್ಕೂ ಜಿಗಿದು
ಬಿಡಿಸಿ ಬಗೆಬಗೆ ಚಿತ್ತಾರ
ತನ್ನ ಸುತ್ತ ತಾನೇ ಬಲೆನೇಯ್ದು
ತಳಮಳದಿ ನಶೆಯೊಳಗೆ ತೇಲುತ್ತ
ತಕರಾರುಗಳ ಜೀಕುತ್ತ
ಅನಾದಿ ಏಕಾಂಗಿ ನಾದವ ನುಡಿಸುತ್ತ
ಯಾರ ಮಾತಿಗೂ ಕೇರು ಮಾಡದೆ
ಸುಡುಸಂಕಟ
ಭೂಮಿ ಸುತ್ತುತ್ತಲೇ ಇತ್ತು
– ಎಸ್.ನರೇಂದ್ರಕುಮಾರ್
ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದರು. ಇಂದು ಬೆಳಿಗ್ಗೆ ಮಠಕ್ಕೆ…
ಪಾಂಡವಪುರ: ಪಾಂಡವಪುರ ತಾಲ್ಲೂಕಿನ ಕೆ.ಆರ್.ಎಸ್ ಹಿನ್ನೀರಿನಲ್ಲಿ ಬೋಟಿಂಗ್ ವೇಳೆ ಗಾಳಿಯ ಹೊಡೆತಕ್ಕೆ ಸಿಲುಕಿ ಬೋಟ್ ಮೊಗಚಿ ಕೇರಳ ಮೂಲದ ಇಬ್ಬರು…
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ…
ಹಾಸನ: ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆಗೆ ಲಕ್ಷಾಂತರ ರೂ ಮೌಲ್ಯದ ಬಾಳೆ ಬೆಳೆ ನಾಶವಾಗಿದೆ. ಅರಕಲಗೂಡು ತಾಲ್ಲೂಕಿನ…
ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿಗೆ ಗಂಡು ಮಗು ಜನಿಸಿದೆ. ಈ ಸಿಹಿ ಸುದ್ದಿಯನ್ನು ಡಾಲಿ ಧನಂಜಯ್…
ಕಠ್ಮಂಡು: ಜೀಪ್ ಪ್ರಪಾತಕ್ಕೆ ಬಿದ್ದು 20 ಮಂದಿ ಸಾವನ್ನಪ್ಪಿರುವ ಘಟನೆ ನೇಪಾಳದ ರೋಲ್ಪಾದಲ್ಲಿ ನಡೆದಿದ್ದು, ಭಾರೀ ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ…