ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ಕೇವಲ ಆತ್ಮಸುಖಕ್ಕಾಗಿ ಬರೆದವರು. ಇವರ ಬರಹಗಳ ಘಮಲನ್ನು ನಾಡಿನುದ್ದಕ್ಕೂ ಕಾವ್ಯ ರಸಿಕರು ಅನುಭವಿಸಿದ್ದಾರೆ. ಆದರೆ ಇವರ ಬದುಕಿನ ಏಳುಬೀಳುಗಳನ್ನು ಕಂಡವರು ಬಹಳ ಕಡಿಮೆ. ಕೇವಲ ಕಂಡದ್ದು ಮಾತ್ರವಲ್ಲ; ಕಂಡು ಅನಭವಿಸಿದವರು ಕವಿಯ ಮಗ ಕೆ.ಎನ್.ಮಹಾಬಲ. ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರಾಗಿರುವ ಮಹಾಬಲ ಅವರ ಪುಸ್ತಕ ‘ನನ್ನ ಅಪ್ಪ ಕೆಎಸ್‌ನ’ ಇಂತಹ ಅಪರೂಪದ ನೆನಪುಗಳ ಹೊತ್ತಗೆ. (ಬಹುರೂಪಿ ಪ್ರಕಾಶನ ದೂರವಾಣಿ: ೭೦೧೯೧೮೨೭೨೯).

‘ಸೋಫಾದ ಕೆಳಗಿತ್ತು ವಾಕಿಂಗ್ ಸ್ಟಿಕ್’ ಎಂಬ ಬರಹದಲ್ಲಿ ಒಂದು ಪ್ರಸಂಗ ಬರುತ್ತದೆ. ಮೈಸೂರಿನಲ್ಲಿ ಮಹಾಬಲ ಅವರ ಮನೆಯಲ್ಲಿ ಕೆ. ಎಸ್.ನ ಅವರ ನಡಿಗೆ ಬೆತ್ತ ಮಿಸ್ ಆಗಿಹೋಯಿತು. ಮಹಾಬಲ ಅವರ ತಮ್ಮ ತಂದೆಗೆ ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಹಾದಿಯ ಚನ್ನಪಟ್ಟಣದಲ್ಲಿ ಮತ್ತೊಂದು ನಡಿಗೆ ಬೆತ್ತವನ್ನು ಕೊಡಿಸಿದರು. ಸರಿ ಆದರೆ ಕೆ.ಎಸ್.ನ ಅವರಿಗೆ ಇವರ ಮನೆಯಲ್ಲಿ ಉಳಿದುಬಿಟ್ಟ ವಾಕಿಂಗ್ ಸ್ಟಿಕ್ ಬಗೆಗೆ ಮೋಹ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ : ಕೇರಳದ ಸಂತೋಷ್‌ಕುಮಾರ್ ಹೆಸರು ತಳುಕು

ಏಕೆಂದರೆ ಅದು ಕೆ.ವಿ.ಸುಬ್ಬಣ್ಣನವರು ಪ್ರೀತಿಯಿಂದ ಕೆ.ಎಸ್.ನ, ಅವರಿಗೆ ಕೊಟ್ಟಿದ್ದು. ಆ ವಾಕಿಂಗ್ ಸ್ಟಿಕ್ ಸಿಕ್ಕರೂ ಮಹಾಬಲ ಅವರು ಅಪ್ಪನಿಗೆ ಸದಾ ಒಂದು ನೆಪ ಒಡ್ಡಿ ಕೊಡಲಿಲ್ಲ. ಕಾರಣ ಅದರ ಮೇಲೆ ಇವರಿಗೂ ಮೋಹ ಬೆಳೆದುಕೊಂಡಿತ್ತು. ಕೊನೆಗೂ ಕೆ.ಎಸ್.ನ. ಅವರು ಜಾರಿಬಿದ್ದು ಆಸ್ಪತ್ರೆಯಲ್ಲಿ ಇದ್ದಾಗಲೂ ಅದನ್ನು ನೆನಪು ಮಾಡಿಕೊಂಡು ತರಿಸಿಕೊಂಡೇಬಿಟ್ಟರು. ಆ ವಾಕಿಂಗ್ ಸ್ಟಿಕ್ ಮನೆಗೆ ಬಂದ ದಿನ ‘ಲೇ ವಾಕಿಂಗ್ ಸ್ಟಿಕ್ ಬಂತು’ ಎಂದು ಹರ್ಷಪಟ್ಟಿದ್ದರು. ಅಮ್ಮ, ಆಗಲಿ ಗಸಗಸೆ ಪಾಯಸ ಮಾಡೋಣ ಎಂದರು.

ಪಾಯಸಗಳಲ್ಲಿ ಗಸಗಸೆ ಪಾಯಸ ನಮ್ಮ ತಂದೆಯವರಿಗೆ ತುಂಬಾ ಇಷ್ಟವಾದದ್ದು. ನಮ್ಮ ತಂದೆಯವರು ನಿಧನರಾದ ಸಮಯದಲ್ಲೂ ಆ ವಾಕಿಂಗ್ ಸ್ಟಿಕ್ ವಿರಾಜಿಸುತ್ತಿತ್ತು ಎಂದು ಮುಗಿಯುವ ಆ ಬರಹ ನಮಗೇ ಗೊತ್ತಿಲ್ಲದೆ ಒಂದು ನಿಟ್ಟುಸಿರನ್ನು ತರುತ್ತದೆ.

(ಮಂಡ್ಯದ ಲೇಖಕಿ ಶುಭಶ್ರೀಪ್ರಸಾದ್ ಅವರ ಹೊಸ ಪುಸ್ತಕ ‘ಹೊತ್ತಗೆ ಹಿಡಿವ ಹೊತ್ತು’ ಕೃತಿಯಿಂದ. ಪ್ರಕಾಶಕರು: ಪರಿಚಯ ಪ್ರಕಾಶನ.ದೂರವಾಣಿ: ೯೯೧೬೮೯೪೪೧೭ )

ಆಂದೋಲನ ಡೆಸ್ಕ್

Recent Posts

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…

10 hours ago

ಸಂಪುಟ ವಿಸ್ತರಣೆ ವಿಳಂಬ; ಡಿಕೆಶಿ ಅಸಮಾಧಾನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…

11 hours ago

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…

11 hours ago

ರಸ್ತೆ ಬದಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು

ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…

11 hours ago

ಎಕ್ಸ್ ಬಿಟ್ಟು ಇನ್‌ಸ್ಟಾ ಹಿಡಿದ ರಾಜಕಾರಣ : ಮೋದಿಗೆ ಜೆನ್-ಝೀ ಕಾಟ

ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…

23 hours ago