ಒಂದು ಕಾಲದಲ್ಲಿ ಮೈಸೂರಿನ ಸಯ್ಯಾಜಿರಾವ್ ರಸ್ತೆ- ಸರ್ದಾರ್ ಪಟೇಲ್ ರಸ್ತೆಗಳು ಸೇರುವ ಒಂದು ಮೂಲೆಯಲ್ಲಿ ಪೆನ್ನು ಮಾರುತ್ತಾ, ಬಾನ್ಸುರಿ ನುಡಿಸುತ್ತಾ ಜನಸಂದಣಿಯನ್ನು ಅಯಸ್ಕಾಂತದಂತೆ ಸೆಳೆಯುತ್ತಿದ್ದ ಶ್ರೀಯುತ ದಿನೇಶ್ ಚಂದ್ರ ಮಿಶ್ರಾ ಅವರಿಗೆ ಈಗ ೮೫ ವರ್ಷ! ಈಗ ಇವರ ಬಾನ್ಸುರಿಯ ಸದ್ದು ಕೇಳಬೇಕಾದರೆ ಅಲ್ಲೇ ಪಕ್ಕದಲ್ಲಿರುವ ಅರಸು ಕಾಂಪ್ಲೆಕ್ಸಿನಲ್ಲಿರುವ ಇವರ ಪೆನ್ನಿನ ಅಂಗಡಿಗೆ ಹೋಗಿ ಒಂದು ಪೇಪರಿನಲ್ಲಿ ಬರೆದು ಇವರ ಬಳಿ ಕೇಳಿಕೊಳ್ಳಬೇಕು. ಏಕೆಂದರೆ ವೋಂಸಹಜ ಕಾರಣಗಳಿಂದಾಗಿ ಇವರ ಶ್ರವಣಶಕ್ತಿ ಮಂದವಾಗಿದೆ. ಇನ್ನೂ ಒಂದು ವಿಷಯವೆಂದರೆ ಕೆಲವು ವರ್ಷಗಳ ಹಿಂದೆ ನಡೆದ ಹೃದಯ ಶಸ್ತ್ರ ಚಿಕಿತ್ಸೆಯಿಂದಾಗಿ ಇವರಿಗೆ ಒಂದು ನಿಮಿಷಕ್ಕಿಂತ ಹೆಚ್ಚು ಬಾನ್ಸುರಿ ನುಡಿಸಲೂ ಆಗುವುದಿಲ್ಲ.

ದಿನೇಶ್ ಚಂದ್ರ ಮಿಶ್ರಾ ಅವರ ಹಿರಿಯರು ಉತ್ತರ ಪ್ರದೇಶದ ಕನೌಜ್ ಪ್ರದೇಶಕ್ಕೆ ಸೇರಿದವರು. ನಂತರ ಕಾರಣಾಂತರಗಳಿಂದಾಗಿ ಕಲಕತ್ತಾಗೆ ವಲಸೆ ಹೋದವರು. ಅಲ್ಲಿ ಅವರಿಗೆ ಒಂದು ಪೆನ್ನಿನ ಕಾರ್ಖಾನೆ ಇತ್ತು. ಆ ಪೆನ್ನು ಮಾರುತ್ತಾ ದೇಶ ಸುತ್ತುತ್ತಿದ್ದ ಮಿಶ್ರಾ ಅವರಿಗೆ ಮೈಸೂರು ಯಾಕೋ ಇಷ್ಟವಾಯಿತು. ಆ ಕಾರಣದಿಂದ ಇಲ್ಲೇ ಉಳಿದುಕೊಂಡರು. ರಸ್ತೆ ಬದಿಯಲ್ಲಿ ಪೆನ್ನು ಮಾರುತ್ತಾ, ಬಾನ್ಸುರಿ ನುಡಿಸುತ್ತಾ ಜೀವನ ಕಟ್ಟಿಕೊಂಡರು. ಈಗ ಇವರ ಮಗ ಖ್ಯಾತ ಬಾನ್ಸುರಿ ವಾದಕ ಮತ್ತು ತಯಾರಕ. ಮಗಳು ಹೆಸರಾಂತ ಮಾಧ್ಯಮ ತಜ್ಞೆ. ಆದರೆ ಈ ಯಾವುದರ ಪರಿವೆಯೂ ಇಲ್ಲದೆ ಮಿಶ್ರಾ ಅವರು ವಾರದ ದಿನಗಳಲ್ಲಿ ಅಪರಾಹ್ನ ಎರಡರಿಂದ ಇರುಳಿನ ತನಕ ತಮ್ಮ ಅಂಗಡಿಯಲ್ಲಿ ಕೂತಿರುತ್ತಾರೆ ಮತ್ತು ಮನಸಾದಾಗ ಸಣ್ಣಗೆ ಬಾನ್ಸುರಿಯನ್ನೂ ಬಾರಿಸುತ್ತಾರೆ.

ಮಿಶ್ರಾ ಅವರು ಮೈಸೂರಿನ ರಾಜಮಾರ್ಗದ ಬದಿ ಬಾನ್ಸುರಿ ನುಡಿಸಲು ತೊಡಗಿ ಐವತ್ತು ವರ್ಷಗಳಾಗುತ್ತಾ ಬಂತು. ಅವರ ‘ಹಾರ್ವೆಸ್ಟ್’ ಪೆನ್ನಿನ ಕಾರ್ಖಾನೆ ನಿಂತು ಹೋಗಿದೆ. ಬಾನ್ಸುರಿ ನುಡಿಸುವ ಶಕ್ತಿಯೂ ಕುಂದುತ್ತಾ ಬಂದಿದೆ. ಆದರೂ ಏನೂ ಗೊಣಗದೆ, ಯಾರನ್ನೂ ದೂರದೆ ಮೈಸೂರನ್ನೂ ಇನ್ನಷ್ಟು ಪ್ರೀತಿಸುತ್ತಿರುವ ಅವರಿಗೆ ನಾವು ಕೃತಜ್ಞರಾಗಬೇಕಾಗಿದೆ.

andolana

Recent Posts

ಓದುಗರ ಪತ್ರ: ಕಠಿಣ ಕ್ರಮ ಅಗತ್ಯ

ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್‌ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…

22 mins ago

ಓದುಗರ ಪತ್ರ: ಕಸ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಅಗತ್ಯ

ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…

24 mins ago

ಕೇಂದ್ರ ಸರ್ಕಾರದ ಮೇಲೆ ಜೆನ್ ಝೀ ಚಳುವಳಿಯ ತೂಗುಗತ್ತಿ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…

27 mins ago

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

3 hours ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

3 hours ago

ಅಳಿಯ ಅಲ್ಲ, ಮಗಳ ಗಂಡ!

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…

3 hours ago