ಒಂದು ಕಾಲದಲ್ಲಿ ಮೈಸೂರಿನ ಸಯ್ಯಾಜಿರಾವ್ ರಸ್ತೆ- ಸರ್ದಾರ್ ಪಟೇಲ್ ರಸ್ತೆಗಳು ಸೇರುವ ಒಂದು ಮೂಲೆಯಲ್ಲಿ ಪೆನ್ನು ಮಾರುತ್ತಾ, ಬಾನ್ಸುರಿ ನುಡಿಸುತ್ತಾ ಜನಸಂದಣಿಯನ್ನು ಅಯಸ್ಕಾಂತದಂತೆ ಸೆಳೆಯುತ್ತಿದ್ದ ಶ್ರೀಯುತ ದಿನೇಶ್ ಚಂದ್ರ ಮಿಶ್ರಾ ಅವರಿಗೆ ಈಗ ೮೫ ವರ್ಷ! ಈಗ ಇವರ ಬಾನ್ಸುರಿಯ ಸದ್ದು ಕೇಳಬೇಕಾದರೆ ಅಲ್ಲೇ ಪಕ್ಕದಲ್ಲಿರುವ ಅರಸು ಕಾಂಪ್ಲೆಕ್ಸಿನಲ್ಲಿರುವ ಇವರ ಪೆನ್ನಿನ ಅಂಗಡಿಗೆ ಹೋಗಿ ಒಂದು ಪೇಪರಿನಲ್ಲಿ ಬರೆದು ಇವರ ಬಳಿ ಕೇಳಿಕೊಳ್ಳಬೇಕು. ಏಕೆಂದರೆ ವೋಂಸಹಜ ಕಾರಣಗಳಿಂದಾಗಿ ಇವರ ಶ್ರವಣಶಕ್ತಿ ಮಂದವಾಗಿದೆ. ಇನ್ನೂ ಒಂದು ವಿಷಯವೆಂದರೆ ಕೆಲವು ವರ್ಷಗಳ ಹಿಂದೆ ನಡೆದ ಹೃದಯ ಶಸ್ತ್ರ ಚಿಕಿತ್ಸೆಯಿಂದಾಗಿ ಇವರಿಗೆ ಒಂದು ನಿಮಿಷಕ್ಕಿಂತ ಹೆಚ್ಚು ಬಾನ್ಸುರಿ ನುಡಿಸಲೂ ಆಗುವುದಿಲ್ಲ.

ದಿನೇಶ್ ಚಂದ್ರ ಮಿಶ್ರಾ ಅವರ ಹಿರಿಯರು ಉತ್ತರ ಪ್ರದೇಶದ ಕನೌಜ್ ಪ್ರದೇಶಕ್ಕೆ ಸೇರಿದವರು. ನಂತರ ಕಾರಣಾಂತರಗಳಿಂದಾಗಿ ಕಲಕತ್ತಾಗೆ ವಲಸೆ ಹೋದವರು. ಅಲ್ಲಿ ಅವರಿಗೆ ಒಂದು ಪೆನ್ನಿನ ಕಾರ್ಖಾನೆ ಇತ್ತು. ಆ ಪೆನ್ನು ಮಾರುತ್ತಾ ದೇಶ ಸುತ್ತುತ್ತಿದ್ದ ಮಿಶ್ರಾ ಅವರಿಗೆ ಮೈಸೂರು ಯಾಕೋ ಇಷ್ಟವಾಯಿತು. ಆ ಕಾರಣದಿಂದ ಇಲ್ಲೇ ಉಳಿದುಕೊಂಡರು. ರಸ್ತೆ ಬದಿಯಲ್ಲಿ ಪೆನ್ನು ಮಾರುತ್ತಾ, ಬಾನ್ಸುರಿ ನುಡಿಸುತ್ತಾ ಜೀವನ ಕಟ್ಟಿಕೊಂಡರು. ಈಗ ಇವರ ಮಗ ಖ್ಯಾತ ಬಾನ್ಸುರಿ ವಾದಕ ಮತ್ತು ತಯಾರಕ. ಮಗಳು ಹೆಸರಾಂತ ಮಾಧ್ಯಮ ತಜ್ಞೆ. ಆದರೆ ಈ ಯಾವುದರ ಪರಿವೆಯೂ ಇಲ್ಲದೆ ಮಿಶ್ರಾ ಅವರು ವಾರದ ದಿನಗಳಲ್ಲಿ ಅಪರಾಹ್ನ ಎರಡರಿಂದ ಇರುಳಿನ ತನಕ ತಮ್ಮ ಅಂಗಡಿಯಲ್ಲಿ ಕೂತಿರುತ್ತಾರೆ ಮತ್ತು ಮನಸಾದಾಗ ಸಣ್ಣಗೆ ಬಾನ್ಸುರಿಯನ್ನೂ ಬಾರಿಸುತ್ತಾರೆ.

ಮಿಶ್ರಾ ಅವರು ಮೈಸೂರಿನ ರಾಜಮಾರ್ಗದ ಬದಿ ಬಾನ್ಸುರಿ ನುಡಿಸಲು ತೊಡಗಿ ಐವತ್ತು ವರ್ಷಗಳಾಗುತ್ತಾ ಬಂತು. ಅವರ ‘ಹಾರ್ವೆಸ್ಟ್’ ಪೆನ್ನಿನ ಕಾರ್ಖಾನೆ ನಿಂತು ಹೋಗಿದೆ. ಬಾನ್ಸುರಿ ನುಡಿಸುವ ಶಕ್ತಿಯೂ ಕುಂದುತ್ತಾ ಬಂದಿದೆ. ಆದರೂ ಏನೂ ಗೊಣಗದೆ, ಯಾರನ್ನೂ ದೂರದೆ ಮೈಸೂರನ್ನೂ ಇನ್ನಷ್ಟು ಪ್ರೀತಿಸುತ್ತಿರುವ ಅವರಿಗೆ ನಾವು ಕೃತಜ್ಞರಾಗಬೇಕಾಗಿದೆ.

andolana

Recent Posts

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

11 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

12 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

12 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

12 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

12 hours ago

ಮಹಾಪಂಚ್ ಕಾರ್ಟೂನ್‌

ಮಹಾಪಂಚ್ ಕಾರ್ಟೂನ್‌ | ಸೆಪ್ಟಂಬರ್‌ 18 ಶುಕ್ರವಾರ

13 hours ago