Andolana originals

ರಾಗಿ ಬೆಳೆಯನ್ನೂ ಆವರಿಸಿದ ಗಂಧಿಬಗ್ ಕೀಟ; ರೈತರಿಗೆ ಸಂಕಷ್ಟ

ಆನಂದ್ ಹೊಸೂರು
ಹೊಸೂರು: ಭತ್ತದ ಬೆಳೆಯನ್ನು ತಿಂದು ಹಾಳು ಮಾಡುತ್ತಿದ್ದ ಗಂಧಿಬಗ್ ಕಾಟ ಇದೀಗ ರಾಗಿಯನ್ನೂ ಆವರಿಸಿದ್ದು ರೈತರು ಕಂಗಾಲಾಗಿದ್ದಾರೆ.

ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಹೋಬಳಿಯ ಹೊಸೂರು ಸುತ್ತಮುತ್ತಲೂ ಬೆಳೆದಿರುವ ರಾಗಿ ಬೆಳೆಯಲ್ಲಿ ಗಂಧಿಬಗ್ ಕಾಟವು ಹೆಚ್ಚಾಗುತ್ತಿದ್ದು, ಈ ಕೀಟ ಈ ಹಿಂದೆ ಭತ್ತದ ಬೆಳೆಯನ್ನು ಹಾಳುಮಾಡುತ್ತಿತ್ತು. ಭತ್ತದ ಕಾಳುಗಳು ಹಾಲು ತುಂಬುವ ಸಮಯದಲ್ಲಿ ಕಾಳುಗಳ ಮೇಲೆ ಕುಳಿತು ರಸ ಹೀರಿ ಕಾಳುಗಟ್ಟದೆ ಜೊಳ್ಳಾಗುತ್ತಿತ್ತು.

ಅದೇ ರೀತಿ ಇದೀಗ ರಾಗಿಯ ತೆನೆಯ ಮೇಲೆ ಕುಳಿತು ಕಾಳುಗಳ ರಸ ಹೀರುತ್ತಿದೆ. ಈ ಕೀಟವು ಕೆಲವೇ ಸಮಯದಲ್ಲಿ ತನ್ನ ಸಂತಾನೋತ್ಪತ್ತಿಯನ್ನು ಹೆಚ್ಚಿಸಿಕೊಂಡು ಇಡೀ ಬೆಳೆಯನ್ನೇ ಆವರಿಸುತ್ತಿದ್ದು ಕಾಳು ಗಟ್ಟಿಯಾಗುವ ಮುನ್ನವೇ ಜೊಳ್ಳಾಗಿ ಉದುರುತ್ತಿದ್ದು ಈ ಹೊಸ ಕೀಟಬಾಧೆಯಿಂದ ಕಾಳುಗಟ್ಟಿ ರೈತರ ಮನೆಯ ಚೀಲಗಳನ್ನು ತುಂಬುತ್ತಿದ್ದ ರಾಗಿ ಹಾಳಾಗುತ್ತಿದೆ. ಯಾವುದೇ ರೋಗರುಜಿನಗಳು ಬಾರದಂತಹ ಬೆಳೆಯಾದ ರಾಗಿ ಬೆಳೆಗೂ ಕೀಟಬಾಧೆ ಬಂದಿರುವುದು ಈ ಭಾಗದ ರೈತರಲ್ಲಿ ಆಶ್ಚರ್ಯ ತಂದಿದೆ. ಈ ಕೀಟವು ಭತ್ತದ ಬೆಳೆಯನ್ನು ಪ್ರಧಾನವಾಗಿ ಆಯ್ಕೆ ಮಾಡಿಕೊಳ್ಳುತ್ತದೆ.

ಭತ್ತದ ಕಟಾವು ಆರಂಭವಾಗಿರುವ ಕಾರಣ ಪರ್ಯಾಯ ಬೆಳೆಗಳನ್ನು ತನ್ನ ಆಶ್ರಯಕ್ಕಾಗಿ ಹುಡುಕಾಡುತ್ತದೆ. ಈ ಸಮಯದಲ್ಲಿ ಅಕ್ಕಪಕ್ಕದಲ್ಲೇ ಇರುವ ರಾಗಿಯಂತಹ ತೆನೆ ಕಟ್ಟುವ ಬೆಳೆಗಳಿಗೆ ಬರುವ ಸಂಭವವೂ ಇರುವುದರಿಂದ ಸೂಕ್ತ ಔಷಧೋಪಚಾರ ಮಾಡಿದರೆ ತಕ್ಷಣ ಕಡಿಮೆಯಾಗಲಿದೆ ಎಂದು ಮಂಡ್ಯ ವಿ. ಸಿ.ಫಾರಂನ ಕೃಷಿ ಕೀಟ ವಿಜ್ಞಾನಿ ಕಿತ್ತೂರು ಮಠ ತಿಳಿಸಿದ್ದಾರೆ.

ಗಂಧಿಬಗ್ ಕೀಟವು ಕೆಲವು ವರ್ಷಗಳಿಂದ ಭತ್ತದ ಬೆಳೆಯನ್ನು ಮಾತ್ರ ತಿನ್ನುತ್ತಿತ್ತು. ಆದರೆ ಇದೀಗ ಹೊಸದಾಗಿ ರಾಗಿ ಬೆಳೆಯನ್ನು ಹಾನಿ ಮಾಡುತ್ತಿದ್ದು, ತಕ್ಷಣ ರೈತರು ನಿರ್ಲಕ್ಷ್ಯ ಮಾಡದೆ ಸೂಕ್ತ ಔಷಧೋಪಚಾರ ಮಾಡಬೇಕು. ಇಲ್ಲವಾದರೆ ಕಾಳುಗಳು ಜೊಳ್ಳಾಗಿ ಉದುರಿ ಹೋಗುತ್ತವೆ. ಇದಕ್ಕಾಗಿ ಲ್ಯಾಂಬ್ದ ಸಾಯ್ ಹಾಲೋಥ್ರಿನ್ ೦. ೫ ಮಿಲಿ ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಣೆ ಮಾಡಿದರೆ ಕೀಟಬಾಧೆ ಕಡಿಮೆಯಾಗಲಿದೆ. -ಪ್ರಸನ್ನ ದಿವಾನ್, ಕೃಷಿ ಅಧಿಕಾರಿ, ಚುಂಚನಕಟ್ಟೆ

 

ಆಂದೋಲನ ಡೆಸ್ಕ್

Recent Posts

ಅಲಯನ್ಸ್ ಸ್ಕ್ವೇರ್ ಪ್ರಾಪರ್ಟೀಸ್‌ಗೆ 20ನೇ ವರ್ಷದ ಸಂಭ್ರಮ

ಅದು ೨೦೦೬ರ ಸಮಯ. ಮೈಸೂರು ಈಗಿನಂತಿರಲಿಲ್ಲ. ಆದರೂ ಮೈಸೂರು ಇಂದಿಗಿಂತ ಹಿಂದೆಯೇನೂ ಇರಲಿಲ್ಲ. ಈಗಿನಷ್ಟೇ ಪ್ರವಾಸಿಗರು, ಹೂಡಿಕೆದಾರರನ್ನು ಆಕರ್ಷಿಸುತ್ತಿತ್ತು. ಮೈಸೂರಿನಲ್ಲಿ…

7 mins ago

ಓದುಗರ ಪತ್ರ: ಮನೆ ಗೇಟುಗಳ ಮುಂದೆ ಅಪರಿಚಿತರ ‘ಕಾರುಬಾರು’

ಮನೆಗಳ ಗೇಟಿನ ಮುಂದೆಯೇ ಅಪರಿಚಿತರ ಕಾರು ನಿಲ್ಲಿಸುವ ಕೆಟ್ಟ ಪರಂಪರೆಯನ್ನು ಅನೇಕ ಕಡೆ ಕಾಣಬಹುದು. ಸೂರ್ಯಬೇಕರಿ ಬಳಿಯ ಎರಡನೇ ಅಡ್ಡರಸ್ತೆಯಲ್ಲಿ…

3 hours ago

ಓದುಗರ ಪತ್ರ: ರೈಲು ನೀರಿನ ಬಾಟಲಿಗೆ ಒಂದು ರೂ. ಹೆಚ್ಚು ವಸೂಲಿ!

ಭಾರತೀಯ ರೈಲ್ವೆಯನ್ನು ನೆಚ್ಚಿಕೊಂಡಿರುವವರು ಕೊಟ್ಯಂತರ ಮಂದಿ ಇದ್ದಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ರೈಲು ನಿಲ್ದಾಣಗಳಲ್ಲಿ ರೈಲು ನೀರಿನ ಬಾಟಲಿಗಳ…

3 hours ago

ಓದುಗರ ಪತ್ರ: ಹೆಚ್ಚಿನ ಟಿಕೆಟ್ ದರ ನೀಡಲು ಸಿದ್ಧರಾಗಬೇಕಾ?

ಬೆಲೆ ಹೆಚ್ಚಳವೆಂಬುದು ಈಗ ಅನಿರೀಕ್ಷಿತವಲ್ಲವೆಂಬುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಸದ್ಯದಲ್ಲೆ ಇದಕ್ಕೆ ಸೇರ್ಪಡೆಯಾಗುವಂತಿದೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್…

3 hours ago

ಬಡಮಕ್ಕಳಿಗೆ ಬೆಚ್ಚಗಿನ ಬದುಕು ನೀಡುವ ಕುಶಾಲ್ ರಾಜ್

ಪಂಜು ಗಂಗೊಳ್ಳಿ ಅವರ ವಾರದ ಅಂಕಣ  ಮಕ್ಕಳ ಶಿಕ್ಷಣಕ್ಕೆ ನೆರವಾಗಲು ‘ಲೋಟಸ್ ಪೆಟಲ್ ಫೌಂಡೇಶನ್’ ಸ್ಥಾಪನೆ  ಜಾರ್ಖಂಡಿನ ರಾಂಚಿಯ ಕುಶಾಲ್ ರಾಜ್…

3 hours ago

ಬಸವನಹುಳು ಸಾಕಣೆಯೂ ಲಾಭದಾಯಕ

ಕೇಶವ್ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಿಂದ ಅಚ್ಚರಿಯ ಸಂಶೋಧನೆ! ಮೈಸೂರು: ಬಸವನಹುಳುಗಳನ್ನು ಜಮೀನುಗಳಲ್ಲಿ ರೈತರು ನೋಡಿದರೆ, ನಮ್ಮ…

3 hours ago