Andolana originals

ದಾಖಲೆಯ ಮೊತ್ತಕ್ಕೆ ಮಡಿಕೇರಿ ನಗರಸಭೆ ಮಳಿಗೆಗಳು ಹರಾಜು

ಇ-ಟೆಂಡರ್‌ ಮೂಲಕ ನಡೆದ 53 ಮಳಿಗೆಗಳು ಹರಾಜು ಪ್ರಕ್ರಿಯೆ ; 16 ಮಳಿಗೆಗಳು ಅನರ್ಹ

ಮಡಿಕೇರಿ: ನಗರಸಭೆ ಅಧಿನದಲ್ಲಿರುವ 53 ಮಳಿಗೆಗಳ ಹರಾಜು ಪ್ರಕ್ರಿಯೆ ಇ-ಟೆಂಡರ್ ಮೂಲಕ ಇತ್ತೀಚೆಗೆ ನಡೆದಿದ್ದು, ದಾಖಲೆ ಮೊತ್ತಕ್ಕೆ ಬಿಡ್ಡಿಂಗ್ ಆಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಯಾರೂ ನಿರೀಕ್ಷಿಸದ ರೀತಿಯಲ್ಲಿ ಕಳೆದ ಬಾರಿಗಿಂತಲೂ 4-5 ಪಟ್ಟು, ಕೆಲವರಂತೂ ಹತ್ತು ಪಟ್ಟಿಗೂ ಹೆಚ್ಚು ದರ ನೀಡಿ ಮಳಿಗೆಗಳನ್ನು ಬಿಡ್ಡಿಂಗ್ ಮೂಲಕ ಪಡೆದುಕೊಂಡಿರುವುದು ಗಮನಾರ್ಹ ಸಂಗತಿಯಾಗಿದೆ. 53 ಮಳಿಗೆಗಳ ಪೈಕಿ 16 ಮಳಿಗೆಗಳು ಸಿಂಗಲ್ ಬಿಡ್, ಕಳೆದ ಬಾರಿಗಿಂತ ಕಡಿಮೆ ಮೊತ್ತದ ಬಿಡ್ ಎಂಬ ಕಾರಣಕ್ಕೆ ಅನರ್ಹಗೊಂಡಿವೆ.

ಕಳೆದ 12 ವರ್ಷಗಳ ಹಿಂದೆ ಬಿಡ್ಡಿಂಗ್ ಮೂಲಕ ಮಳಿಗೆ ಖರೀದಿಸಿ ಅವಽ ಕೊನೆಗೊಂಡ ಸಂದರ್ಭವಿದ್ದ ಬಾಡಿಗೆಯ ಮೊತ್ತ ಹಾಗೂ ಈ ಬಾರಿ ಹರಾಜಾಗಿರುವ ಮೊತ್ತದ ನಡುವೆ ಅಜಗಜಾಂತರ ವ್ಯತ್ಯಾಸಗಳಿವೆ. ಯಾರೂ ನಿರೀಕ್ಷಿಸಿದ ದರದಲ್ಲಿ ವ್ಯಾಪಾರಿಗಳು ಮಳಿಗೆ ಪಡೆದುಕೊಂಡಿ ರುವುದು ನಿಬ್ಬೆರಗಾಗುವಂತೆ ಮಾಡಿದೆ. 53 ಮಳಿಗೆಗಳ ಪೈಕಿ ಅನರ್ಹಗೊಂಡ 16 ಮಳಿಗೆಗಳನ್ನು ಹೊರತುಪಡಿಸಿದರೆ ಒಟ್ಟು 37 ಮಳಿಗೆಗಳ ಬಿಡ್ಡಿಂಗ್ ಅಂತಿಮಗೊಂಡಿದೆ. ಕಳೆದ 12 ವರ್ಷಗಳ ಅವಧಿಗೆ ಹರಾಜಾದ

ಒಟ್ಟು 53 ಮಳಿಗೆಗಳಿಗೆ ಕೊನೆ ತಿಂಗಳ ಒಟ್ಟು ಬಾಡಿಗೆ ರೂ. 4,72,619 ಆಗಿತ್ತು. ಈ ವರ್ಷ ರೂ.10,60,138ಗೆ ಮಳಿಗೆಗಳು ಹರಾಜಾಗಿವೆ. ಶೇ. 224 ಲಾಭಾಂಶವನ್ನು ನಗರಸಭೆ ಪಡೆದಿದೆ. ಗಣನೀಯ ಪ್ರಮಾಣದಲ್ಲಿ ಬಿಡ್ಡುದಾರರು ಮಳಿಗೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದ ರೊಂದಿಗೆ ತಿಂಗಳಿಗೆ ಇಷ್ಟೊಂದು ಪ್ರಮಾಣದ ಬಾಡಿಗೆ ನೀಡಿ ವ್ಯವಹಾರ ನಡೆಸಬಹುದಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.

12 ವರ್ಷದ ಅವಧಿಗೆ ಬಿಡ್ ಮೂಲಕ ಅಂಗಡಿಯನ್ನು ವ್ಯಾಪಾರಿಗಳು ಪಡೆಯಲು ಅವಕಾಶವಿದ್ದು, ಬಿಡ್‌ನಲ್ಲಿ ಸೂಚಿಸಿದ ಮೊತ್ತ ಪ್ರತಿ ತಿಂಗಳ ಬಾಡಿಗೆಯಾಗಿರುತ್ತದೆ. ಪ್ರತಿ ೩ ವರ್ಷಕ್ಕೊಮ್ಮೆ ದರವನ್ನು ಹೆಚ್ಚಿಸಲು ಅವ ಕಾಶವಿದೆ. ಬಿಡ್ಡಿಂಗ್ ಮೂಲಕ ಮಳಿಗೆ ಪಡೆದವರು ಹಣ ನೀಡದಿದ್ದರೆ ಠೇವಣಿ ರೂಪದಲ್ಲಿ ಪಾವತಿಸಿದ್ದ ಹಣವನ್ನು ಮುಟ್ಟು ಗೋಲು ಹಾಕಿಕೊಳ್ಳಬಹುದಾಗಿದೆ ಎಂದು ನಗರಸಭೆ ಆಯುಕ್ತ ರಮೇಶ್ ತಿಳಿಸಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

7 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

8 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

9 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

12 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

13 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

13 hours ago