Andolana originals

ದಾಖಲೆಯ ಮೊತ್ತಕ್ಕೆ ಮಡಿಕೇರಿ ನಗರಸಭೆ ಮಳಿಗೆಗಳು ಹರಾಜು

ಇ-ಟೆಂಡರ್‌ ಮೂಲಕ ನಡೆದ 53 ಮಳಿಗೆಗಳು ಹರಾಜು ಪ್ರಕ್ರಿಯೆ ; 16 ಮಳಿಗೆಗಳು ಅನರ್ಹ

ಮಡಿಕೇರಿ: ನಗರಸಭೆ ಅಧಿನದಲ್ಲಿರುವ 53 ಮಳಿಗೆಗಳ ಹರಾಜು ಪ್ರಕ್ರಿಯೆ ಇ-ಟೆಂಡರ್ ಮೂಲಕ ಇತ್ತೀಚೆಗೆ ನಡೆದಿದ್ದು, ದಾಖಲೆ ಮೊತ್ತಕ್ಕೆ ಬಿಡ್ಡಿಂಗ್ ಆಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಯಾರೂ ನಿರೀಕ್ಷಿಸದ ರೀತಿಯಲ್ಲಿ ಕಳೆದ ಬಾರಿಗಿಂತಲೂ 4-5 ಪಟ್ಟು, ಕೆಲವರಂತೂ ಹತ್ತು ಪಟ್ಟಿಗೂ ಹೆಚ್ಚು ದರ ನೀಡಿ ಮಳಿಗೆಗಳನ್ನು ಬಿಡ್ಡಿಂಗ್ ಮೂಲಕ ಪಡೆದುಕೊಂಡಿರುವುದು ಗಮನಾರ್ಹ ಸಂಗತಿಯಾಗಿದೆ. 53 ಮಳಿಗೆಗಳ ಪೈಕಿ 16 ಮಳಿಗೆಗಳು ಸಿಂಗಲ್ ಬಿಡ್, ಕಳೆದ ಬಾರಿಗಿಂತ ಕಡಿಮೆ ಮೊತ್ತದ ಬಿಡ್ ಎಂಬ ಕಾರಣಕ್ಕೆ ಅನರ್ಹಗೊಂಡಿವೆ.

ಕಳೆದ 12 ವರ್ಷಗಳ ಹಿಂದೆ ಬಿಡ್ಡಿಂಗ್ ಮೂಲಕ ಮಳಿಗೆ ಖರೀದಿಸಿ ಅವಽ ಕೊನೆಗೊಂಡ ಸಂದರ್ಭವಿದ್ದ ಬಾಡಿಗೆಯ ಮೊತ್ತ ಹಾಗೂ ಈ ಬಾರಿ ಹರಾಜಾಗಿರುವ ಮೊತ್ತದ ನಡುವೆ ಅಜಗಜಾಂತರ ವ್ಯತ್ಯಾಸಗಳಿವೆ. ಯಾರೂ ನಿರೀಕ್ಷಿಸಿದ ದರದಲ್ಲಿ ವ್ಯಾಪಾರಿಗಳು ಮಳಿಗೆ ಪಡೆದುಕೊಂಡಿ ರುವುದು ನಿಬ್ಬೆರಗಾಗುವಂತೆ ಮಾಡಿದೆ. 53 ಮಳಿಗೆಗಳ ಪೈಕಿ ಅನರ್ಹಗೊಂಡ 16 ಮಳಿಗೆಗಳನ್ನು ಹೊರತುಪಡಿಸಿದರೆ ಒಟ್ಟು 37 ಮಳಿಗೆಗಳ ಬಿಡ್ಡಿಂಗ್ ಅಂತಿಮಗೊಂಡಿದೆ. ಕಳೆದ 12 ವರ್ಷಗಳ ಅವಧಿಗೆ ಹರಾಜಾದ

ಒಟ್ಟು 53 ಮಳಿಗೆಗಳಿಗೆ ಕೊನೆ ತಿಂಗಳ ಒಟ್ಟು ಬಾಡಿಗೆ ರೂ. 4,72,619 ಆಗಿತ್ತು. ಈ ವರ್ಷ ರೂ.10,60,138ಗೆ ಮಳಿಗೆಗಳು ಹರಾಜಾಗಿವೆ. ಶೇ. 224 ಲಾಭಾಂಶವನ್ನು ನಗರಸಭೆ ಪಡೆದಿದೆ. ಗಣನೀಯ ಪ್ರಮಾಣದಲ್ಲಿ ಬಿಡ್ಡುದಾರರು ಮಳಿಗೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದ ರೊಂದಿಗೆ ತಿಂಗಳಿಗೆ ಇಷ್ಟೊಂದು ಪ್ರಮಾಣದ ಬಾಡಿಗೆ ನೀಡಿ ವ್ಯವಹಾರ ನಡೆಸಬಹುದಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.

12 ವರ್ಷದ ಅವಧಿಗೆ ಬಿಡ್ ಮೂಲಕ ಅಂಗಡಿಯನ್ನು ವ್ಯಾಪಾರಿಗಳು ಪಡೆಯಲು ಅವಕಾಶವಿದ್ದು, ಬಿಡ್‌ನಲ್ಲಿ ಸೂಚಿಸಿದ ಮೊತ್ತ ಪ್ರತಿ ತಿಂಗಳ ಬಾಡಿಗೆಯಾಗಿರುತ್ತದೆ. ಪ್ರತಿ ೩ ವರ್ಷಕ್ಕೊಮ್ಮೆ ದರವನ್ನು ಹೆಚ್ಚಿಸಲು ಅವ ಕಾಶವಿದೆ. ಬಿಡ್ಡಿಂಗ್ ಮೂಲಕ ಮಳಿಗೆ ಪಡೆದವರು ಹಣ ನೀಡದಿದ್ದರೆ ಠೇವಣಿ ರೂಪದಲ್ಲಿ ಪಾವತಿಸಿದ್ದ ಹಣವನ್ನು ಮುಟ್ಟು ಗೋಲು ಹಾಕಿಕೊಳ್ಳಬಹುದಾಗಿದೆ ಎಂದು ನಗರಸಭೆ ಆಯುಕ್ತ ರಮೇಶ್ ತಿಳಿಸಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ರಸ್ತೆಗಳ ದಾರುಣತೆ: ಬೇಕಿದೆ ಇಲಾಖೆಗಳ ಸಮನ್ವಯತೆ

ಶ್ರೇಯಸ್ ದೇವನೂರು ಮಾದರಿ ಮೈಸೂರು ಉಳಿವಿಗೆ ಒಂದು ಸಮಗ್ರ ಸಭೆ, ದೀರ್ಘಕಾಲಿಕ ಯೋಜನೆ ಅಗತ್ಯ ಮೈಸೂರು - ಅರಮನೆಗಳ ನಗರ,…

2 hours ago

ಕೊಡಗು ‘ಜಿಲ್ಲೆಯಲ್ಲಿ ಜಲ್‌ಜೀವನ್ ಮಿಷನ್ ಯೋಜನೆ ಪ್ರಗತಿ’

ಪುನೀತ್ ಮಡಿಕೇರಿ ೪೫೭ ಕಾಮಗಾರಿಗಳ ಪೈಕಿ ೩೬೯ ಕಾಮಗಾರಿಗಳು ಪೂರ್ಣ ಮಡಿಕೇರಿ: ಕುಡಿಯುವ ನೀರಿನ ಗೃಹ ನಳ ನೀರು ಸಂಪರ್ಕ…

2 hours ago

ಪ್ರವಾಸಿಗರ ಆಕರ್ಷಣೆಗೆ ವರುಣ ಕೆರೆಗೆ ನವಸ್ಪರ್ಶ

ಕೆ.ಬಿ.ರಮೇಶನಾಯಕ ೧೫ ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಸೌಂದರ್ಯೀಕರಣ  ಪ್ರವಾಸಿಗರ ಕಣ್ಮನ ಸೆಳೆಯಲು ಹತ್ತು ಹಲವು ಮನರಂಜನಾ ಚಟುವಟಿಕೆಗಳು ಮೈಸೂರಿನಿಂದ…

2 hours ago

ಮೈಸೂರು ಜಿಲ್ಲೆಯಲ್ಲಿ ಪಶು ಪಾಲನೆಗೆ ಪಶು ವೈದ್ಯರ ಬರ

ಹೆಚ್.ಎಸ್. ದಿನೇಶ್‌ಕುಮಾರ್ ಮೈಸೂರು ಜಿಲ್ಲೆಯಲ್ಲಿ ೨೭ ಮಂದಿ ಪಶು ವೈದ್ಯರ ಹುದ್ದೆ ಖಾಲಿ ಮೈಸೂರು: ಹಸು, ಎಮ್ಮೆ, ಕುರಿಗಳಂತಹ ಪ್ರಾಣಿಗಳು…

2 hours ago

ಸಿದ್ದಾಪುರ | ಕಾಡಾನೆ ದಾಳಿಗೆ ಓರ್ವ ಗಂಭೀರ

ಸಿದ್ದಾಪುರ : ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಾಲ್ಕೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್‌ಮಂಗಲ…

13 hours ago