ಎಡಿಟೋರಿಯಲ್

ನಮ್ಮೂರ ವಿಶಿಷ್ಟ ಪ್ರಜೆಗಳು

 

  ಮ್ಮ ಸೀಮೆಯಲ್ಲಿ ಕೆಲವು ವಿಶಿಷ್ಟ ಪ್ರಜೆಗಳಿದ್ದರುಇವರು ಬದುಕನ್ನು ಕಷ್ಟದಲ್ಲೂ ಸುಂದರಗೊಳಿಸಬಹುದೆಂದು ಕಾಣಿಸಿದವರುಸರ್ವರೂ ತುಳಿಯದ ಹಾದಿಯಲ್ಲಿ ನಡೆದವರುಸಾಹಸದ ಬಾಳ್ವೆ ಮಾಡಿ ಸೋಲುಂಡವರುಬೇಲಿ ಹೂಗಳಂತೆ ಅಖ್ಯಾತರು.

ಇವರಲ್ಲಿ ನಮ್ಮೂರ ಸನ್ನಿಪೀರಣ್ಣನೂ ಒಬ್ಬನುಮುಖಕ್ಷೌರ ಮಾಡದಕುಳ್ಳಗೆ ತೆಳ್ಳಗೆ ಇದ್ದ ಸನ್ನಿಪೀರಾ ಊರೊಳಗಿದ್ದೂ ಊರಿನಂತಾಗದವನುನಿರಂಕುಶಮತಿಯಾಗಿ ಯಾರಿಗೂ ಸೊಪ್ಪುಹಾಕದೆ ತನ್ನಿಚ್ಛೆಯ ಬದುಕು ನಡೆಸಿದವನು. ‘ಸಂಸ್ಕಾರ’ದ ನಾರಾಣಪ್ಪಜನಮುಖಕ್ಕೆ ಹೊಡೆದಂತೆ ಏನಾ ದರೂ ಹೇಳಿಬಿಡುತ್ತಾನೆಂದು ಅವನ ಬಾಯಿಗೆ ಬೀಳಲು ಅಳುಕುತ್ತಿದ್ದರುಅವನ ನಿಷ್ಠುರತೆಗೆ ಸನ್ನಿ ಬಿರುದನಿತ್ತು ಸೇಡು ತೀರಿಸಿಕೊಂಡಿದ್ದರುಮನೆಯಲ್ಲಿ ಯಾರಾದರೂ ವಿಚಿತ್ರವಾಗಿ ಆಡಿದರೆ, ‘ಸನ್ನಿಪೀರನಂಗೆ ಆಡ್ತೀಯಲ್ಲೊ’, ‘ನಿನಗೇನು ಸನ್ನಿಪೀರಾ ಮೈಮೇಲೆ ಬಂದಿದಾನಾ?’ ಎನ್ನುತ್ತಿದ್ದರುಊರಿನ್ನೂ ಮಲಗಿರುವಾಗಲೇ ಎದ್ದು ಮೂರು ಮೈಲಿ ದೂರದ ತರೀಕೆರೆಗೆ ಹೋಗುವುದುದಿನವಿಡೀ ಸಾಮಿಲ್ಲಿನಲ್ಲಿ ಮರಕೊಯ್ಯುವುದುಕತ್ತಲದಾರಿಯಲ್ಲಿ ಸೈಕಲ್ ಟೈರಿನ ದೊಂದಿ ಮಾಡಿಕೊಂಡು ಮನೆಗೆ ಬರುವುದು ಅವನ ದಿನಚರಿದೆವ್ವಗಳಿಂದ ಕುಖ್ಯಾತವಾಗಿದ್ದ ಹಳ್ಳವನ್ನು ಏಕಾಂಗಿಯಾಗಿ ದಾಟುವ ಅವನು ನಮ್ಮ ಪಾಲಿಗೆ ಜಗತ್ತಿನ ಶಕ್ತಿಶಾಲಿ ಮನುಷ್ಯನಾಗಿದ್ದಮನೆಯಲ್ಲಿ ಹಣ್ಣಾದ ತಾಯಿಚಿಕ್ಕವಯಸ್ಸಿನ ಮಗಳುಹೆಂಡತಿ ಕಿರಿಕಿರಿ ತಾಳಲಾಗದೆ ಬಿಟ್ಟುಹೋಗಿದ್ದಳುವಿವಾಹ ಬದುಕಿನ ಕುರುಹಾದ ಏಕೈಕ ಪುತ್ರಿಯನ್ನು ಜತನದಿಂದ ಪೋಷಿಸಿದ್ದನುಮಣಿಸರದ ಅಂಗಡಿಯಿಂದ ರಾಶಿ ಗಿಲೀಟಿನ ಆಭರಣ ತಂದು ಸಿಂಗರಿಸುತ್ತಿದ್ದನುರಂಜಾನ್ ಬಂದರೆ ಮುನೀರಾ ಸರ್ವಾಲಂಕಾರ ಭೂಷಿತೆಯಾಗಿ ಗೆಳತಿಯರ ಹೊಟ್ಟೆಯಲ್ಲಿ ಬೆಂಕಿ ಎಬ್ಬಿಸುವಳುಊರೆಲ್ಲ ಉಂಡು ಮಲಗಿದ ಬಳಿಕ ಬರುತ್ತಿದ್ದ ಪೀರಣ್ಣ ಮನೆಯ ಮುಂದೆ ನಿಂತು ಒಂದು ಆವಾಜ್ ಹಾಕುತ್ತಿದ್ದನು: ‘ಬೇಟಾ…’ ಈ ಕರೆಗೇ ಕಾಯುತ್ತಿದ್ದವಳಂತೆ ಮುನೀರಾ ‘ಅಬ್ಬಾ ಆಯಾಅಬ್ಬಾ ಆಯಾ’ ಎಂದು ಕುಣಿಸುತ್ತ ಬಾಗಿಲು ತೆಗೆದು ತಿಂಡಿಪೊಟ್ಟಣ ಇಸಿದುಕೊಳ್ಳುತ್ತಿದ್ದಳುನಿದ್ದೆಯಲ್ಲಿದ್ದ ಜನ ‘ಸನ್ನಿ ಅಬ್ ಆಯಾ ಕಿಕಿ’ ಎಂದು ಗೊಣಗಿ ನಿದ್ದೆ ಮುಂದುವರಿಸುತ್ತಿದ್ದರು.

ಸಾಮಿಲ್ ಹೊಟ್ಟಿನ ದೂಳೀಮಯ ಮೈ ತೊಳೆದುಕೊಂಡ ಪೀರಣ್ಣಸುಟ್ಟ ಒಣಮೀನು ನಂಜಿಕೊಂಡು ಅಪರಾತ್ರಿ ಆರೋಗಣೆ ಶುರು ಮಾಡುವನು.

ಹೀಗೆ ವರ್ಷವಿಡೀ ಹಗಲುಹೊತ್ತು ಜನರ ಕಣ್ಣಿಗೆ ಬೀಳದಂತೆ ನಿಶಾಚರನಾಗಿ ಬದುಕಿದ ಪೀರಣ್ಣನ ಮುಖಚಂದಿರಹಬ್ಬಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ದೊರಕುತ್ತಿತ್ತುಅದ್ಭುತ ನಟಮೊಹರಂನಲ್ಲಿ ಅವನದು ಪಾಳೇಗಾರ ಸೋಗುರಟ್ಟೆ ಸೊಂಟಗಳಿಗೆ ಕಟ್ಟಿದ ಕಪ್ಪು ಸರವಿಗಳನ್ನು ಹಿಡಿದ ನಾಲ್ಕು ಜನ ಹಿಂದಿನಿಂದ ಎಳೆಯುತ್ತಿರಲು ತಪ್ಪಿಸಿಕೊಳ್ಳಲು ಕೊಸರಾಡುತ್ತಹುಲಿಯಂತೆ ಹೆಜ್ಜೆಹಾಕುತ್ತಲಟ್ಟನೆ ಕುತ್ತಿಗೆ ತಿರುಗಿಸಿ ಕಣ್ಣು ಕೆಕ್ಕರಿಸಿ ನೆರೆದ ನೆರವಿಯತ್ತ ನೋಡುತ್ತತಪ್ಪಟಿ ಹೊಡೆತಕ್ಕೆ ಕುಣಿಯುತ್ತಿದ್ದನುಚಿಕ್ಕಹಳ್ಳದ ದೆವ್ವಗಳು ಹೆದರುವುದು ಆಶ್ಚರ್ಯವಲ್ಲ.

ಎರಡನೇ ವರ್ಣರಂಜಿತ ವ್ಯಕ್ತಿ ಅಜೀಜ್ಆರಡಿ ಎತ್ತರದ ದೃಢಕಾಯದ ನಗುಮುಖಿಊರಿನ ಸೋಮಾರಿತನವನ್ನೆಲ್ಲ ತಾನೇ ಧಾರಣ ಮಾಡಿದ್ದ ಆಲಸಿಎಳವೆಯಲ್ಲಿ ತಂದೆ ಸತ್ತು ತಾಯಿ ಮುದ್ದಿನಿಂದ ಸಾಕಿದ್ದೇ ಅವನು ಹಾಳಾಗಲು ಕಾರಣವೆಂದು ಊರು ಆಡಿಕೊಳ್ಳುತ್ತಿತ್ತುಮಕ್ಕಳನ್ನು ದಂಡಿಸುವಾಗ ‘ಸಡಿಲ ಬಿಟ್ಟರೆ ನೀನು ಅಜೀಜ್ ಆಗುತ್ತೀಯಾ’ ಎಂದು ಎಚ್ಚರಿಸುತ್ತಿತ್ತುಅಜೀಜಣ್ಣನ ನಾಷ್ಟಾಕ್ಕೆ ಎಂಟು ರಾಗಿರೊಟ್ಟಿ ಮತ್ತು ಹುರುಳಿ ಚಟ್ನಿಊಟಕ್ಕೆ ಎರಡು ರಾಗಿಮುದ್ದೆಯ ಮೇಲೆ ಅರ್ಧಸೇರಕ್ತಿ ಅನ್ನಬಕಾಸುರನನ್ನು ಮುದಿತಾಯಿ ಮತ್ತು ಹೆಂಡತಿಕಳೆಗೆ ಕುಯಿಲಿಗೆ ಹೋಗಿ ಸಂಭಾಳಿಸುತ್ತಿದ್ದರುಬೇಸಗೆಯಲ್ಲಿ ಅವರು ಕಾಫಿತೋಟಗಳಿಗೆ ಗುಳೆ ಹೋದರೆಅಜೀಜನೂ ಸಿಳ್ಳು ಹೊಡೆಯುತ್ತ ಹಿಂಬಾಲಿಸುತ್ತಿದ್ದನುಹೆಣ್ಣುಮಕ್ಕಳ ದುಡಿಮೆಯಿಲ್ಲದೆ ಹೋಗಿದ್ದರೆನಮ್ಮೂರ ಅನೇಕ ಸಂಸಾರಗಳು ಬೀದಿಗೆ ಬಿದ್ದಿರುತ್ತಿದ್ದವು.

ಅಜೀಜಣ್ಣ ಮನಸ್ಸು ಬಂದಾಗ ಹೋಗಿ ದೊಡ್ಡ ಸಾಗುವಾನಿ ನಾಟ ತಂದುಬಂಡಿ ಮಾಡುವವರ ಮುಂದೆ ಒಗೆದು ಇಪ್ಪತ್ತು ರೂಸಂಪಾದಿಸುತ್ತಿದ್ದನುರೊಕ್ಕವನ್ನು ಸಿನಿಮಾ ಟಾಕೀಸಿಗೂ ಹೋಟೆಲುಗಳಿಗೂ ಶ್ರದ್ಧೆಯಿಂದ ಸಮರ್ಪಿಸುತ್ತಿದ್ದನುಅವನಿಂದ ಕೆಲಸ ತೆಗೆಸುವವರು ಕೇರಳ ಲಕ್ಕಿ ರೆಸ್ಟೋರೆಂಟಿನ ಜಗುಲಿಯ ಮೇಲೊ ವಿನಾಯಕ ಟಾಕೀಸಿನ ಆವರಣದಲ್ಲೊ ಭೇಟಿಯಾಗುತ್ತಿದ್ದರುಅಜೀಜಣ್ಣ ‘ಬಹಾರೋ ಫೂಲು ಬರಸಾವೊ’ ಮುಂತಾದ ಸಿನಿಮಾ ಹಾಡುಗಳನ್ನು ಸಿಳ್ಳೆಯಲ್ಲೇ ನುಡಿಸುತ್ತಿದ್ದನುಹಬ್ಬದ ದಿನ ಬೇವಿನ ಮರವೇರಿ ಮಹಿಳೆಯರಿಗೆ ಉಯ್ಯಾಲೆ ಹಾಕಿಕೊಡುತ್ತಿದ್ದನುಹೆಂಗಸರ ಜತೆಕೂತು ಚೌಕಾಬಾರ ಆಡುತ್ತಿದ್ದನುಅವನ ಪ್ರತಿಭೆ ಕಾಡು ಕುಸುಮದ ಪರಿಮಳದಂತಿದ್ದು ಲೋಕದ ಲಕ್ಷ ಕ್ಕೆ ಬಾರದೆಹೋಯಿತುಕೊನೆಯ ದಿನಗಳಲ್ಲಿ ಮರಕೆತ್ತುತ್ತ ಬಾಚಿಯಿಂದ ಕಾಲಿಗೆ ಗಾಯವಾಗಿ ಕುಂಟುತ್ತಿದ್ದನುಗಾಯ ನಂಜಾಗಿ ನಡುವಯಸ್ಸಿಗೇ ಸತ್ತನು.

ಅಜೀಜ್’ ಎಂದರೆ ಬಲಶಾಲಿ ಎಂದರ್ಥಅದೇಕೊ ನಾನು ಕಂಡ ಅಜೀಜಣ್ಣಗಳೆಲ್ಲ ಪುಕ್ಕಲುಗಳುನಂಟರ ಪೈಕಿಯಿದ್ದ ಅಜೀಜಣ್ಣನೊಬ್ಬನು ಮಡದಿಗೆ ಹೆದರುವುದಕ್ಕೆ ಹೆಸರಾಗಿದ್ದನುಆಕೆಯನ್ನು ಸಂಪ್ರೀತಗೊಳಿಸಲು ಏನಾದರೂ ಸಾಹಸ ಮಾಡಲೆಳಸಿಫಜೀತಿಗೆ ಸಿಕ್ಕಿಬೀಳುತ್ತಿದ್ದನುಸಂತೆಯಿಲ್ಲದ ಒಂದು ದಿನ ಮನೆಯಲ್ಲಿರುವಾಗ್ಗೆಮಡದಿಗೆ ಕಾರ ಕಡೆಯಲು ಹೇಳಿಗಾಳ ಎತ್ತಿಕೊಂಡು ಕೆರೆಗೆ ಹೋದನುಯಾವ ಮೀನೂ ಗಾಳ ಕಚ್ಚಲಿಲ್ಲಬರಿಗೈಯಲ್ಲಿ ಮನೆಗೆ ತೆರಳಲು ಧೈರ್ಯವಾಗಲಿಲ್ಲಅದೇ ಹೊತ್ತಿಗೆ ಬೆಸ್ತರು ಮೀನನ್ನು ದಂಡೆಗೆ ತರಲುಅಜೀಜಣ್ಣ ಎರಡು ಕೆಜಿಯ ಮೀನೊಂದನ್ನು ಖರೀದಿಸಿಸಂಜೆಯೊಳಗೆ ಹಣ ಕೊಡುತ್ತೇನೆಂದು ಹೇಳಿ ಬಂದನುಹೆಂಡತಿಯೆದುರು ಮೀನನ್ನು ದೊಪ್ಪೆಂದು ಎತ್ತಿಹಾಕಿಅದನ್ನು ಎಳೆದು ದಡಕ್ಕೆ ಹಾಕುವುದಕ್ಕೆ ರಟ್ಟೆಯೆಲ್ಲ ಬಿದ್ದುಹೋಯಿತು ಎಂದನುಆಕೆ ಸಂಭ್ರಮದಿಂದ ಮೀನನ್ನುಜ್ಜಿ ಹುಳಿಮಾಡಿ ಮುದ್ದೆ ಕೂಡಿಸಿಇನ್ನೇನು ಬಾಹುಬಲಿ ಪತಿಗೆ ಬಡಿಸಬೇಕುಅಷ್ಟರಲ್ಲಿ, ‘ಅಕ್ಕಾಅಜೀಜಣ್ಣ ಮನ್ಯಾಗೈತಾ?’ ಕೂಗು ಬಾಗಿಲಲ್ಲಿ ಅನುರಣಿಸಿತುಹೊರಗೆ ಬಂದು ನೋಡಲು ಮೀನುಗಾರ ನಕ್ಷತ್ರಿಕನಂತೆ:

ಏನಪ್ಪಏನು ಬೇಕಿತ್ತು?’

ಅಣ್ಣಾ ಮೀನು ತಗೊಂಬಂದಿದ್ದದುಡ್ಡು ಕೊಡಬೇಕಮ್ಮ?”

ಆಕೆಗೆ ಅಪಮಾನವಾಯಿತುಭೂರಿ ನನಗಂಡ ಬುಗುಡಿ ತಂದರೆಇಟ್ಕೊಳ್ಳೋಕೆ ತೂತಿಲ್ಲವೆಂದು ಆಕೆ ಬಲ್ಲಳುಆದರೆ ಪತಿ ಬೇಟೆಯಾಡಿ ತಂದದ್ದೆಂದು ಹೆಮ್ಮೆಯಿಂದ ಗಲ್ಲಿಯವರಿಗೆಲ್ಲ ಮತ್ಸ್ಯ ಪ್ರದರ್ಶನದಿದ್ದಳುಮರ್ಯಾದೆ ಹೋಗಿತ್ತುರೊಕ್ಕ ಕೊಟ್ಟು ಒಳಬಂದಳುಗಂಡ ಪೆಚ್ಚುನಗೆ ಬೀರುತ್ತ ತಟ್ಟೆಯ ಮುಂದೆ ಕೂತಿದ್ದನು. ‘ತಟ್ಟೆ ಕಿತ್ತುಕೊಂಡು ಅಂಗಳಕ್ಕೆ ಚೆಲ್ಲಬೇಕೆಂದು ಆಲೋಚನೆ ಬಂತು’ಆದರೆ ಮಸಾಲೆ ಅರೆದು ಕಷ್ಟಪಟ್ಟು ಮಾಡಿದ ಸಾರು ಕಂಪು ಬೀರುತ್ತಿತ್ತುಮಾಫು ಮಾಡಿ ಬಡಿಸಿದಳು.

ಮದುವೆಯಾಗಿ ಮಡದಿ ಮಕ್ಕಳ ಕಷ್ಟಕ್ಕೊಳಗಾಗುವ ರಿಸ್ಕನ್ನೇ ತೆಗೆದುಕೊಳ್ಳದವನು ಜೇನುಪುಟ್ಟಅವನದು ಮಾಸಿದ ಬಟ್ಟೆ ತೊಟ್ಟ ಕುಡಿದು ಲಡ್ಡಾದ ದೇಹಜೇನ್ನೊಣ ಕಚ್ಚಿಕಚ್ಚಿ ಗೋಣಿತಟ್ಟಾದ ತೊಗಲುಮುಖದ ತೊಗಲನ್ನು ಸೀಳಿ ಗೋಲಿ ಸಿಕ್ಕಿಸಿದಂತಿರುವ ಬೆಳ್ಳನೆಯ ಕಣ್ಣುಗಳನ್ನು ಪಟಪಟ ಮಿಟುಕಿಸುತ್ತಿದ್ದನುಅವನಿಗೆ ನೊಣಗಳ ಮುಳ್ಳು ಚುಚ್ಚಿದರೂ ಪರಿಣಾಮ ಬೀರುತ್ತಿರಲಿಲ್ಲಲಡಾಸು ಸೈಕಲ್ಲುಜೇನಿಳಿಸಲು ಹಗ್ಗಕತ್ತಿಬೆಂಕಿಪೊಟ್ಟಣ ಮತ್ತು ಟಿನ್‌ಡಬ್ಬ– ಅವನ ಬಂಡವಾಳಪುಟ್ಟದೊಡ್ಡದೊಡ್ಡ ಅರಳಿಮರದ ತುದಿಗಳನ್ನು ಕೋತಿಯಂತೆ ಏರುತ್ತಿದ್ದನುಹೆಜ್ಜೇನನ್ನು ಇಳಿಸಿತುಪ್ಪವನ್ನು ಸಂತೆಯಲ್ಲಿ ಮಾರುತ್ತಿದ್ದನುಜೇನು ಕೀಳಲು ಹೋಗದ ದಿನಬಣ್ಣಬಣ್ಣದ ದೊಗಲೆ ಬಟ್ಟೆಯನ್ನು ಧರಿಸಿತಲೆಯ ಮೇಲೆ ಖಾಲಿಬಾಟಲಿ ಇಟ್ಟುಕೊಂಡುಮಡ್‌ಗಾರ್ಡಿಲ್ಲದ ಸೈಕಲ್ಲೇರಿಹ್ಯಾಂಡಲನ್ನು ಕೈಬಿಟ್ಟು ಒಂದು ಸುತ್ತು ಬರುತ್ತಿದ್ದನುನಾವೆಲ್ಲ ಹೋ ಎಂದು ಅವನ ಹಿಂದೆ ದೌಡುತ್ತಿದ್ದೆವು.

ಜಗಳಗಂಟಿ ರಂಗಮ್ಮನ ನೆನಪಾಗುತ್ತಿದೆಬೀದಿಯಲ್ಲಿ ಹೋಗುವಾಗಏನಾದರೂ ಕಂಡರೆ ನಿಂತು ಟೀಕೆಟಿಪ್ಪಣಿ ಮಾಡುವುದು ಆಕೆಯ ಹವ್ಯಾಸದನ ನಿಂತಿದ್ದರೆ, ‘ಯಾಕೆ ನಿನ್ನೆಯಿಂದಲೂ ಇಲ್ಲೇ ನಿಂತಿದ್ದೀಯಾಮನಿಗೆ ಹೋಗದಲ್ಲವೇ?’ ಎನ್ನುವಳುನಾಯಿ ಕಂಡರೆ ‘ಯಾಕ್ಹಂಗೆ ಓಡಾಡ್ತೀಯೊ ಅತ್ಲಿಂದಿತ್ತಬ್ಯಾರೆ ಕೆಲಸವಿಲ್ಲವೇ?’ ಎಂದು ಬೈಯುವಳುಆಕೆಯ ಬಾಯಿಗೆ ಸಿಕ್ಕಲು ಎಲ್ಲರೂ ಹೆದರುತ್ತಿದ್ದರುಪೊಲೀಸ್ ಇಲಾಖೆಯಲ್ಲಿದ್ದ ಆಕೆಯ ಗಂಡ ಕುಡಿತ ಹೆಚ್ಚಾಗಿ ತೀರಿಕೊಂಡಆಕೆ ಅಳಲಿಲ್ಲಸಂಬಂಧಿಕರೆಲ್ಲ ಅಳುವಾಗ ‘ಏ ಅಂಥ ರಾಜೀವ ಗಾಂಧಿನೇ ಹೋದನಂತೆಇವನ್ಯಾವ ಪುಕಳಿ ಅಂತ ಅಳ್ತೀರೇ?’ ಎಂದು ಹೇಳಿ ನೆರೆದವರನ್ನು ಬೆಚ್ಚಿಬೀಳಿಸಿದ್ದಳುಅವಳಿಗೆ ಏನಮ್ಮ ಸಾರು ಎಂದರೆ ‘ಅದೇ ಉಗಿಯೋ ಸಾರು ಕಣೇ’ ಎನ್ನುವಳುಮೀನು ತಿನ್ನುವಾಗ ಮುಳ್ಳನ್ನು ಬಾಯಿಂದ ಉಗಿಯುವುದರಿಂದ ಈ ಹೆಸರು.

 

ಯಾವುದೇ ಊರಿನ ಸೊಗಸು ಜನರ ಮಾತುಕತೆ ಊಟ ದುಡಿಮೆಗಳಲ್ಲಿರುತ್ತದೆಅವರು ಯಾರನ್ನೊ ಮೆಚ್ಚಿಸಲು ಮಾತಾಡುವುದಿಲ್ಲಬದುಕುವುದಿಲ್ಲಅವರ ಸಹಜ ವರ್ತನೆ ಲೋಕಕ್ಕೆ ವಿಚಿತ್ರವಾಗಿ ಕಾಣುತ್ತದೆಲೋಕರಂಜನೆ ಮಾಡಿದ ಅವರ ಬದುಕಿನ ತೆರೆ ಸರಿಸಿದರೆ ದುಃಖದ ಕಡಲು ಕಾಣಬಹುದುಕೆಲವೊಮ್ಮೆ ಸಂತಾನವಿರುವುದಿಲ್ಲಹೆಂಡತಿ ಬಿಟ್ಟಿರುತ್ತಾಳೆಕುಡುಕ ಗಂಡನಿಂದ ಸಾಕಾಗಿರುತ್ತಾರೆಈ ನೋವನ್ನು ವಿನೋದದಿಂದ ಚದುರಿಸಿ ಜೀವಿಸಲು ಬೇಕಾದ ನೆಮ್ಮದಿ ಸೃಷ್ಟಿಸಿಕೊಳ್ಳುತ್ತಾರೆಇಂತಹ ಎಷ್ಟೊ ಬೇಲಿಹೂಗಳು ಕಾಲನ ಕರೆಗೆ ಕಣ್ಮುಂದೆಯೇ ಉದುರಿದವುಅವುಗಳ ಕಂಪು ನೆನಹಿನ ಹವೆಯಲ್ಲಿ ಉಳಿದಿದೆ.

andolanait

Recent Posts

ಓದುಗರ ಪತ್ರ: ಕೊಲ್ಲಿ ರಾಷ್ಟ್ರಗಳಲ್ಲಿ ಮುಂದುವರಿದ ಆತಂಕ

ಮಧ್ಯ ಪ್ರಾಚ್ಯದಲ್ಲಿ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದಿಂದ ನಡೆಯುತ್ತಿರುವ ದಾಳಿ ಹಾಗೂ ಯುಎಇ, ಬಹರೇನ್, ಕುವೈತ್ ಮೊದಲಾದ ರಾಷ್ಟ್ರಗಳಲ್ಲಿರುವ…

23 mins ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಸಫುರಾ ಖಾನ್ ಎಂಬ ಆಟೋ ಓಡಿಸುವ ಕನಸುಗಾರ್ತಿ

೩೦ ವರ್ಷ ಪ್ರಾಯದ ಸಫುರಾ ಖಾನ್‌ರ ತಂದೆ ತಾಯಿ ಚೆನ್ನೆ ಯಿಂದ ಕರ್ನಾಟಕಕ್ಕೆ ವಲಸೆ ಬಂದಾಗ ಆಕೆ ಇನ್ನೂ ಮಗುವಾಗಿದ್ದರು.…

26 mins ago

ರಾಷ್ಟ್ರಿಯ ಹೆದ್ದಾರಿ ಅಗಲೀಕರಣ ವಿಳಂಬ: ಆರೋಪ

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ಗುಂಡ್ಲುಪೇಟೆಯಿಂದ ನಂಜನಗೂಡು ತನಕ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ರಸ್ತೆಯ ಎರಡೂ ಬದಿಗಳನ್ನು ಅಗೆದು…

32 mins ago

ಮೂಗನಕೊಪ್ಪಲಿನಲ್ಲಿ ಮಾದರಿ ಚಾಕಿ ಸಾಕಾಣಿಕಾ ಕೇಂದ್ರ

ಮಾಮರಶಿ ರೇಷ್ಮೆ ಕೃಷಿಯಿಂದಲೇ ಉದ್ಯಮ ಕಟ್ಟಿದ ರೇಷ್ಮೆ ತ್ಯಾಗರಾಜು ೨೦೦ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ ರೈತನ ಮಗ ಮಳವಳ್ಳಿ:…

35 mins ago

ಆದಾಯದ ಹಳಿಗೆ ಮರಳಿದ ಮೃಗಾಲಯ

ಕೆ.ಬಿ.ರಮೇಶನಾಯಕ ಮೈಸೂರು: ದಕ್ಷಿಣ ಭಾರತದಲ್ಲೇ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಶ್ರೀ ಚಾಮರಾಜೇಂದ್ರ ಮೃಗಾಲಯವು ಕೋವಿಡ್ ಸಮಯದಲ್ಲಿ ಆದಾಯ ಕುಸಿತದಿಂದ ಕಂಗೆಟ್ಟರೂ…

39 mins ago

ಲೆಬನಾನಿನ ನಾಶಕ್ಕೆ ಕಾರಣವಾಗುತ್ತಿರುವ ಹೆಜ್ಬುಲ್ಲಾ ಎಂಬ ದೇವರ ಪಕ್ಷ!

ಶೇಷಾದ್ರಿ ಗಂಜೂರು ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ನಾಲ್ಕನೇ ದಿನ ಪೂರ್ಣಗೊಳಿಸಿದೆ. ಯುದ್ಧದ ಬೀಸಿಗೆ ಸಿಲುಕಿ ಮುಖ್ಯವಾಗಿ ೧೨…

42 mins ago