Andolana originals

ಮೂಗನಕೊಪ್ಪಲಿನಲ್ಲಿ ಮಾದರಿ ಚಾಕಿ ಸಾಕಾಣಿಕಾ ಕೇಂದ್ರ

ಮಾಮರಶಿ

ರೇಷ್ಮೆ ಕೃಷಿಯಿಂದಲೇ ಉದ್ಯಮ ಕಟ್ಟಿದ ರೇಷ್ಮೆ ತ್ಯಾಗರಾಜು

೨೦೦ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ ರೈತನ ಮಗ

ಮಳವಳ್ಳಿ: ರೇಷ್ಮೆ ಬೆಳೆಯಿಂದ ರೈತನ ಜೀವನ ಹಸನಾಗಲಿದೆ ಎಂಬುದನ್ನು ಸಾಬೀತುಪಡಿಸಿ, ಹಲವರಿಗೆ ಉದ್ಯೋಗ ಕಲ್ಪಿಸಿ, ದೇಶ-ವಿದೇಶಗಳಲ್ಲಿ ಅಧ್ಯಯನ ನಡೆಸಿ ‘ರೇಷ್ಮೆ ರಾಜ’ ಎಂಬ ಖ್ಯಾತಿ ಪಡೆದಿರುವ ಯುವ ರೈತ ರೇಷ್ಮೆ ಬೆಳೆಗಾರ ತ್ಯಾಗರಾಜು ಅವರ ಸಾಧನೆ ರೈತರಿಗೆ ಮಾದರಿಯಾಗಿದೆ.

ರಾಮನಗರ ಜಿಲ್ಲೆ, ಬಿಡದಿ ಹೋಬಳಿಯ ಕುಗ್ರಾಮ ಕಾಕರಾಮರನಹಳ್ಳಿಯವೆಂಕಟರಾಮಯ್ಯ-ವನ ಜಾಕ್ಷಮ್ಮ ಅವರ ಪುತ್ರ ತ್ಯಾಗರಾಜ ಅವರು ಬಿ.ಎ. ಪದವೀಧರ. ರೇಷ್ಮೆ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದ ಇವರು, ಕೀರನಗೆರೆ ಜಗದೀಶ್ ಅವರ ಚಾಕಿ ಕೇಂದ್ರದಲ್ಲಿ ೧೨ ವರ್ಷ ರೇಷ್ಮೆ ಬೆಳೆ, ಅಭಿವೃದ್ಧಿ ಬಗ್ಗೆ ಕಲಿತು, ೨೦೧೬ರಲ್ಲಿ ಮಳವಳ್ಳಿ ತಾಲ್ಲೂಕಿನ ಮೂಗನಕೊಪ್ಪಲು ಬಳಿ ‘ಮೂಗನಕೊಪ್ಪಲು ಚಾಕಿ ಸಾಕಾಣಿಕಾ ಕೇಂದ್ರ’ವನ್ನು ಆರಂಭಿಸಿ ೨೦೦ ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. ತಮ್ಮ ನೌಕರರಿಗೆ ಪಿಎಫ್, ಇಎಸ್‌ಐ, ವಿಮೆ ಸೌಲಭ್ಯ ನೀಡಿ ಅವರ ಕುಟುಂಬಕ್ಕೆ ಆಧಾರವಾಗಿದ್ದಾರೆ.

೧೦ ಸಾವಿರ ರೈತರಿಗೆ ಮರಿ ಸರಬರಾಜು ಗುರಿ: ಆರಂಭದಲ್ಲಿ ೫೦ ಲಕ್ಷ ರೂ. ಬಂಡವಾಳ ಹೂಡಿ ಇದೀಗ ಒಂದೂವರೆ ಕೋಟಿ ರೂ. ಬಂಡವಾಳದೊಂದಿಗೆ ತಿಂಗಳಿಗೆ ಒಂದು ಲಕ್ಷಕ್ಕೂ ಅಧಿಕ ಚಾಕಿ ಮರಿಗಳನ್ನು ಉತ್ಪಾದಿಸಿ, ರಾಜ್ಯದ ೬ ಸಾವಿರ ರೈತರಿಗೆ ಸರಬರಾಜು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ೧೦ ಸಾವಿರ ರೈತರಿಗೆ ಸರಬರಾಜು ಮಾಡುವ ಗುರಿ ಇಟ್ಟುಕೊಂಡಿದ್ದಾರೆ.

೫ ಸಾವಿರ ರೇಷ್ಮೆ ಗೂಡು ಉತ್ಪಾದಿಸುವ ಗುರಿ: ೩೯ನೇ ವಯಸ್ಸಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು, ರೇಷ್ಮೆ ಕಾಯಕ ಮಾಡುತ್ತಾ ತಿಂಗಳಿಗೆ ೨ ಸಾವಿರ ಕೆ.ಜಿ. ರೇಷ್ಮೆಗೂಡು ಉತ್ಪಾದಿಸುತ್ತಿದ್ದಾರೆ. ರೈತರಿಗೆ ಉಚಿತ ತರಬೇತಿ: ಸರ್ಕಾರದ ಯಾವುದೇ ಸವಲತ್ತು ಪಡೆಯದೇ ರೈತರಿಗೆ ಉಚಿತವಾಗಿ ತರಬೇತಿ, ಶೇ.೯೫ಕ್ಕೂ ಹೆಚ್ಚು ಇಳುವರಿ ಉತ್ಪಾದಿಸಲು ತಾಂತ್ರಿಕತೆ ಮತ್ತು ಸಲಹೆಯೊಂದಿಗೆ ಪ್ರತಿ ವರ್ಷ ರಾಜ್ಯದ ಸಾವಿರಾರು ಯುವ ರೈತರಿಗೆ ತರಬೇತಿ ನೀಡಿದ್ದಾರೆ.

೧೮ ದೇಶಗಳಿಗೆ ಅಧ್ಯಯನ ಪ್ರವಾಸ: ಚೀನಾ, ಬ್ರೆಜಿಲ್, ಜಪಾನ್, ಥೈಲ್ಯಾಂಡ್, ಇಸ್ರೇಲ್ ದೇಶಗಳು ಸೇರಿದಂತೆ ೧೮ಕ್ಕೂ ಹೆಚ್ಚು ದೇಶಗಳಿಗೆ ಪ್ರವಾಸ ತೆರಳಿ ರೇಷ್ಮೆ ಕೃಷಿ ಕುರಿತು ಅಧ್ಯಯನ ಮಾಡಿದ್ದಾರೆ.

ಸಮಾಜ ಸೇವೆಯಲ್ಲೂ ಮುಂದು: ಉತ್ತಮ ದ್ವಿತಳಿ ರೇಷ್ಮೆ ಬೆಳೆಗಾರರನ್ನು ಸನ್ಮಾನಿಸುತ್ತಾ, ರೇಷ್ಮೆ ಬೆಳೆಗಾರರಿಗೆ ಮಾರ್ಗದರ್ಶಕರಾಗಿರುವುದಲ್ಲದೆ, ಸರ್ಕಾರಿ ಶಾಲೆಗಳಿಗೆ ವಾಟರ್ ಫಿಲ್ಟರ್, ಕಪ್ಪು ಹಲಗೆಗಳು, ಮಕ್ಕಳ ಮನೆ ನಿರ್ಮಾಣ, ಪುಟಾಣಿ ಮಕ್ಕಳಿಗೆ ಚೇರ್ ಮತ್ತು ಟೇಬಲ್‌ಗಳನ್ನು ನೀಡುತ್ತಾ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.

” ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ರೇಷ್ಮೆ ಬೆಳೆ ಯುವ ಜಿಲ್ಲೆಯಾಗಿದೆ. ಗುಣಮಟ್ಟದಲ್ಲಿ ರೇಷ್ಮೆ ಬೆಳೆ ಬೆಳೆದರೆ ರೈತರಿಗೆ ವರದಾನ. ಎಲ್ಲ ಬೆಳೆಗಿಂತಲೂ ರೇಷ್ಮೆ ಬೆಳೆ ಲಾಭದಾಯಕ. ಸರ್ಕಾರಗಳೂ ರೇಷ್ಮೆ ಬೆಳೆಗೆ ಬಹಳಷ್ಟು ಉತ್ತೇಜನ ನೀಡುತ್ತಿವೆ.”

– ತ್ಯಾಗರಾಜು, ರೇಷ್ಮೆ ಬೆಳೆಗಾರ 

 

 

ಆಂದೋಲನ ಡೆಸ್ಕ್

Recent Posts

ಮುತ್ತತ್ತಿಯಲ್ಲಿ ಘೋರ ದುರಂತ: ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸೇರಿ ಐವರು ನೀರುಪಾಲು

ಹಲಗೂರು: ಸಮೀಪದ ಪ್ರವಾಸಿ ತಾಣವಾದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನೀರಿನ ಪ್ರಬಲ ಸೆಳೆತಕ್ಕೆ…

2 hours ago

ಚಾಮರಾಜನಗರ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ

ಚಾಮರಾಜನಗರ: ನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಪೊಲೀಸರು,…

4 hours ago

ಬಿಆರ್‌ಟಿ ವ್ಯಾಪ್ತಿಯಲ್ಲಿ ಕಾಡಾನೆ ಕಳೇಬರ ಪತ್ತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವನ್ಯಜೀವಿ ವಲಯ ವ್ಯಾಪ್ತಿಯ ಕಾರೆಪಾಳ್ಯ ಗಸ್ತಿನ ಸಮೀಪ ಅರಣ್ಯ ಪ್ರದೇಶದಿಂದ ಸುಮಾರು…

5 hours ago

ತೊಟ್ಟಿಲುಶಾಸ್ತ್ರ, ಸಿದ್ದಪ್ಪಾಜಿ ಕಂಡಾಯೋತ್ಸವದಲ್ಲಿ ತಾರಾ, ಶಶಿಕುಮಾರ್ ಭಾಗಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ದೊಡ್ಡಾಲತ್ತೂರು ಗ್ರಾಮದ ಶ್ರೀ ಮಕ್ಕಳೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ…

5 hours ago

ಬೆಳೆಗೆ ಸಿಗದ ಬೆಲೆ: ಯುವ ರೈತ ಆತ್ಮಹತ್ಯೆ

ಕೆ.ಆರ್.ನಗರ: ತಂಬಾಕು ಬೆಳೆಗೆ ಸರಿಯಾಗಿ ಬೆಲೆ ಸಿಗದೇ ನಷ್ಟವಾದ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ರೈತರೊಬ್ಬರು ತಮ್ಮ ಜಮೀನಿನಲ್ಲಿ…

6 hours ago

ಮುಂದಿನ ಒಂದು ವಾರಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ,…

7 hours ago