ಮಾಮರಶಿ
ರೇಷ್ಮೆ ಕೃಷಿಯಿಂದಲೇ ಉದ್ಯಮ ಕಟ್ಟಿದ ರೇಷ್ಮೆ ತ್ಯಾಗರಾಜು
೨೦೦ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ ರೈತನ ಮಗ
ಮಳವಳ್ಳಿ: ರೇಷ್ಮೆ ಬೆಳೆಯಿಂದ ರೈತನ ಜೀವನ ಹಸನಾಗಲಿದೆ ಎಂಬುದನ್ನು ಸಾಬೀತುಪಡಿಸಿ, ಹಲವರಿಗೆ ಉದ್ಯೋಗ ಕಲ್ಪಿಸಿ, ದೇಶ-ವಿದೇಶಗಳಲ್ಲಿ ಅಧ್ಯಯನ ನಡೆಸಿ ‘ರೇಷ್ಮೆ ರಾಜ’ ಎಂಬ ಖ್ಯಾತಿ ಪಡೆದಿರುವ ಯುವ ರೈತ ರೇಷ್ಮೆ ಬೆಳೆಗಾರ ತ್ಯಾಗರಾಜು ಅವರ ಸಾಧನೆ ರೈತರಿಗೆ ಮಾದರಿಯಾಗಿದೆ.
ರಾಮನಗರ ಜಿಲ್ಲೆ, ಬಿಡದಿ ಹೋಬಳಿಯ ಕುಗ್ರಾಮ ಕಾಕರಾಮರನಹಳ್ಳಿಯವೆಂಕಟರಾಮಯ್ಯ-ವನ ಜಾಕ್ಷಮ್ಮ ಅವರ ಪುತ್ರ ತ್ಯಾಗರಾಜ ಅವರು ಬಿ.ಎ. ಪದವೀಧರ. ರೇಷ್ಮೆ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದ ಇವರು, ಕೀರನಗೆರೆ ಜಗದೀಶ್ ಅವರ ಚಾಕಿ ಕೇಂದ್ರದಲ್ಲಿ ೧೨ ವರ್ಷ ರೇಷ್ಮೆ ಬೆಳೆ, ಅಭಿವೃದ್ಧಿ ಬಗ್ಗೆ ಕಲಿತು, ೨೦೧೬ರಲ್ಲಿ ಮಳವಳ್ಳಿ ತಾಲ್ಲೂಕಿನ ಮೂಗನಕೊಪ್ಪಲು ಬಳಿ ‘ಮೂಗನಕೊಪ್ಪಲು ಚಾಕಿ ಸಾಕಾಣಿಕಾ ಕೇಂದ್ರ’ವನ್ನು ಆರಂಭಿಸಿ ೨೦೦ ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. ತಮ್ಮ ನೌಕರರಿಗೆ ಪಿಎಫ್, ಇಎಸ್ಐ, ವಿಮೆ ಸೌಲಭ್ಯ ನೀಡಿ ಅವರ ಕುಟುಂಬಕ್ಕೆ ಆಧಾರವಾಗಿದ್ದಾರೆ.
೧೦ ಸಾವಿರ ರೈತರಿಗೆ ಮರಿ ಸರಬರಾಜು ಗುರಿ: ಆರಂಭದಲ್ಲಿ ೫೦ ಲಕ್ಷ ರೂ. ಬಂಡವಾಳ ಹೂಡಿ ಇದೀಗ ಒಂದೂವರೆ ಕೋಟಿ ರೂ. ಬಂಡವಾಳದೊಂದಿಗೆ ತಿಂಗಳಿಗೆ ಒಂದು ಲಕ್ಷಕ್ಕೂ ಅಧಿಕ ಚಾಕಿ ಮರಿಗಳನ್ನು ಉತ್ಪಾದಿಸಿ, ರಾಜ್ಯದ ೬ ಸಾವಿರ ರೈತರಿಗೆ ಸರಬರಾಜು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ೧೦ ಸಾವಿರ ರೈತರಿಗೆ ಸರಬರಾಜು ಮಾಡುವ ಗುರಿ ಇಟ್ಟುಕೊಂಡಿದ್ದಾರೆ.
೫ ಸಾವಿರ ರೇಷ್ಮೆ ಗೂಡು ಉತ್ಪಾದಿಸುವ ಗುರಿ: ೩೯ನೇ ವಯಸ್ಸಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು, ರೇಷ್ಮೆ ಕಾಯಕ ಮಾಡುತ್ತಾ ತಿಂಗಳಿಗೆ ೨ ಸಾವಿರ ಕೆ.ಜಿ. ರೇಷ್ಮೆಗೂಡು ಉತ್ಪಾದಿಸುತ್ತಿದ್ದಾರೆ. ರೈತರಿಗೆ ಉಚಿತ ತರಬೇತಿ: ಸರ್ಕಾರದ ಯಾವುದೇ ಸವಲತ್ತು ಪಡೆಯದೇ ರೈತರಿಗೆ ಉಚಿತವಾಗಿ ತರಬೇತಿ, ಶೇ.೯೫ಕ್ಕೂ ಹೆಚ್ಚು ಇಳುವರಿ ಉತ್ಪಾದಿಸಲು ತಾಂತ್ರಿಕತೆ ಮತ್ತು ಸಲಹೆಯೊಂದಿಗೆ ಪ್ರತಿ ವರ್ಷ ರಾಜ್ಯದ ಸಾವಿರಾರು ಯುವ ರೈತರಿಗೆ ತರಬೇತಿ ನೀಡಿದ್ದಾರೆ.
೧೮ ದೇಶಗಳಿಗೆ ಅಧ್ಯಯನ ಪ್ರವಾಸ: ಚೀನಾ, ಬ್ರೆಜಿಲ್, ಜಪಾನ್, ಥೈಲ್ಯಾಂಡ್, ಇಸ್ರೇಲ್ ದೇಶಗಳು ಸೇರಿದಂತೆ ೧೮ಕ್ಕೂ ಹೆಚ್ಚು ದೇಶಗಳಿಗೆ ಪ್ರವಾಸ ತೆರಳಿ ರೇಷ್ಮೆ ಕೃಷಿ ಕುರಿತು ಅಧ್ಯಯನ ಮಾಡಿದ್ದಾರೆ.
ಸಮಾಜ ಸೇವೆಯಲ್ಲೂ ಮುಂದು: ಉತ್ತಮ ದ್ವಿತಳಿ ರೇಷ್ಮೆ ಬೆಳೆಗಾರರನ್ನು ಸನ್ಮಾನಿಸುತ್ತಾ, ರೇಷ್ಮೆ ಬೆಳೆಗಾರರಿಗೆ ಮಾರ್ಗದರ್ಶಕರಾಗಿರುವುದಲ್ಲದೆ, ಸರ್ಕಾರಿ ಶಾಲೆಗಳಿಗೆ ವಾಟರ್ ಫಿಲ್ಟರ್, ಕಪ್ಪು ಹಲಗೆಗಳು, ಮಕ್ಕಳ ಮನೆ ನಿರ್ಮಾಣ, ಪುಟಾಣಿ ಮಕ್ಕಳಿಗೆ ಚೇರ್ ಮತ್ತು ಟೇಬಲ್ಗಳನ್ನು ನೀಡುತ್ತಾ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.
” ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ರೇಷ್ಮೆ ಬೆಳೆ ಯುವ ಜಿಲ್ಲೆಯಾಗಿದೆ. ಗುಣಮಟ್ಟದಲ್ಲಿ ರೇಷ್ಮೆ ಬೆಳೆ ಬೆಳೆದರೆ ರೈತರಿಗೆ ವರದಾನ. ಎಲ್ಲ ಬೆಳೆಗಿಂತಲೂ ರೇಷ್ಮೆ ಬೆಳೆ ಲಾಭದಾಯಕ. ಸರ್ಕಾರಗಳೂ ರೇಷ್ಮೆ ಬೆಳೆಗೆ ಬಹಳಷ್ಟು ಉತ್ತೇಜನ ನೀಡುತ್ತಿವೆ.”
– ತ್ಯಾಗರಾಜು, ರೇಷ್ಮೆ ಬೆಳೆಗಾರ
ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್ಕೌಂಟರ್ ಘಟನೆಯ…
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…
ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ರಾಜ್ಯ ಕಾಂಗ್ರೆಸ್ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುತ್ತದೆಯೇ? ಇಂತಹದೊಂದು ಪ್ರಶ್ನೆಗೆ ತಕ್ಷಣ ಉತ್ತರ…