ಮೈಸೂರಿನ ಕೆಆರ್ಎಸ್ ರಸ್ತೆ ಅಥವಾ ಪ್ರಿನ್ಸೆಸ್ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ರಸ್ತೆ‘ ಎಂದು ನಾಮಕರಣ ಮಾಡಲು ಮುಂದಾಗಿರುವುದು ಸೂಕ್ತವಲ್ಲ ಅನಿಸುತ್ತದೆ.
ಮೊದಲನೆಯದಾಗಿ ಜೀವಂತವಿರುವ ವ್ಯಕ್ತಿಗಳ ಹೆಸರನ್ನು ರಸ್ತೆಗಳಿಗೆ ಇಡುವುದು ಸ್ವಲ್ಪವೂ ಸರಿ ಇಲ್ಲ. ಈ ಬಲವಂತದ ನಾಮಕರಣದ ಬಗ್ಗೆ ಜನ ಏನೇ ಹೇಳಿದರೂ ಇದು ಅರಸೊತ್ತಿಗೆಯ ಬಗ್ಗೆ ಅದಮ್ಯ ಪ್ರೀತಿ, ಗೌರವವಿರುವ ಮೈಸೂರಿಗರಿಗೆ ಬಗೆಯುವ ದ್ರೋಹ ಎಂದೇ ಹೇಳಬೇಕಾಗುತ್ತದೆ. ಡಿವಿಜಿಯವರ ಕುರಿತಾದ ಪ್ರಸಂಗವೊಂದು ನೆನಪಿಗೆ ಬರುತ್ತದೆ. ಒಮ್ಮೆ ಡಿವಿಜಿಯವರಿಗೆ ಸರ್ಕಾರ ದೊಡ್ಡ ಪ್ರಶಸ್ತಿಯೊಂದನ್ನು ನೀಡಿರುತ್ತದೆ. ಈ ಸಮಯದಲ್ಲಿ ಡಿವಿಜಿಯವರ ಅಭಿಮಾನಿಗಳು, ಅವರ ಮನೆಗೆ ತೆರಳಿ ‘ನಿಮ್ಮ ಮನೆಯ ಮುಂದಿನ ರಸ್ತೆಗೆ ನಿಮ್ಮ ಹೆಸರಿಡಬೇಕೆಂದಿದ್ದೇವೆ‘ ಎನ್ನುವ ಪ್ರಸ್ತಾಪವನ್ನು ಮುಂದಿಡುತ್ತಾರೆ. ಆಗ ಬಹಳ ಸಂಕೋಚದಿಂದ ಡಿವಿಜಿಯವರು, ‘ಅಯ್ಯಾ. . . ನನ್ನ ಪಾಡಿಗೆ ನಾನು ಹೇಗೋ ಮರ್ಯಾದೆಯಿಂದ ಮನೆಯೊಳಗೆ ಜೀವಿಸುತ್ತಿದ್ದೇನೆ. ದಯಮಾಡಿ ಬೀದಿಗೆ ನನ್ನ ಹೆಸರಿಟ್ಟು, ನನ್ನನ್ನು ಎಲ್ಲರೂ ತುಳಿಯುವಂತೆ ಮತ್ತು ಎಳೆದಾಡುವಂತೆ ಮಾಡಬೇಡಿರಿ’ ಎಂದು ವಿನಂತಿಸಿದರಂತೆ. ಆ ಮೂಲಕ ಅವರ ಅಭಿಮಾನಿಗಳ ಪ್ರೀತಿಯ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದರಂತೆ. ಈ ಬಗೆಯ ನಿರ್ಲಿಪ್ತ ಮನಃಸ್ಥಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಪ್ರದರ್ಶಿಸಬಲ್ಲರೆ? ಕಾದು ನೋಡೋಣ.
-ನಾಗಮಂಗಲ ನರಸಿಂಹ ಮೂರ್ತಿ, ಮೈಸೂರು.
ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…
ಮೇಘನ ಕೆ.ಆರ್ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…
ಡಾ. ಶಿಲಿನಾ ಕೋಟೆ ಎನ್. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…
ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…
ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…
ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…