ಮೈಸೂರಿನ ಕೆಆರ್ಎಸ್ ರಸ್ತೆ ಅಥವಾ ಪ್ರಿನ್ಸೆಸ್ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ರಸ್ತೆ‘ ಎಂದು ನಾಮಕರಣ ಮಾಡಲು ಮುಂದಾಗಿರುವುದು ಸೂಕ್ತವಲ್ಲ ಅನಿಸುತ್ತದೆ.
ಮೊದಲನೆಯದಾಗಿ ಜೀವಂತವಿರುವ ವ್ಯಕ್ತಿಗಳ ಹೆಸರನ್ನು ರಸ್ತೆಗಳಿಗೆ ಇಡುವುದು ಸ್ವಲ್ಪವೂ ಸರಿ ಇಲ್ಲ. ಈ ಬಲವಂತದ ನಾಮಕರಣದ ಬಗ್ಗೆ ಜನ ಏನೇ ಹೇಳಿದರೂ ಇದು ಅರಸೊತ್ತಿಗೆಯ ಬಗ್ಗೆ ಅದಮ್ಯ ಪ್ರೀತಿ, ಗೌರವವಿರುವ ಮೈಸೂರಿಗರಿಗೆ ಬಗೆಯುವ ದ್ರೋಹ ಎಂದೇ ಹೇಳಬೇಕಾಗುತ್ತದೆ. ಡಿವಿಜಿಯವರ ಕುರಿತಾದ ಪ್ರಸಂಗವೊಂದು ನೆನಪಿಗೆ ಬರುತ್ತದೆ. ಒಮ್ಮೆ ಡಿವಿಜಿಯವರಿಗೆ ಸರ್ಕಾರ ದೊಡ್ಡ ಪ್ರಶಸ್ತಿಯೊಂದನ್ನು ನೀಡಿರುತ್ತದೆ. ಈ ಸಮಯದಲ್ಲಿ ಡಿವಿಜಿಯವರ ಅಭಿಮಾನಿಗಳು, ಅವರ ಮನೆಗೆ ತೆರಳಿ ‘ನಿಮ್ಮ ಮನೆಯ ಮುಂದಿನ ರಸ್ತೆಗೆ ನಿಮ್ಮ ಹೆಸರಿಡಬೇಕೆಂದಿದ್ದೇವೆ‘ ಎನ್ನುವ ಪ್ರಸ್ತಾಪವನ್ನು ಮುಂದಿಡುತ್ತಾರೆ. ಆಗ ಬಹಳ ಸಂಕೋಚದಿಂದ ಡಿವಿಜಿಯವರು, ‘ಅಯ್ಯಾ. . . ನನ್ನ ಪಾಡಿಗೆ ನಾನು ಹೇಗೋ ಮರ್ಯಾದೆಯಿಂದ ಮನೆಯೊಳಗೆ ಜೀವಿಸುತ್ತಿದ್ದೇನೆ. ದಯಮಾಡಿ ಬೀದಿಗೆ ನನ್ನ ಹೆಸರಿಟ್ಟು, ನನ್ನನ್ನು ಎಲ್ಲರೂ ತುಳಿಯುವಂತೆ ಮತ್ತು ಎಳೆದಾಡುವಂತೆ ಮಾಡಬೇಡಿರಿ’ ಎಂದು ವಿನಂತಿಸಿದರಂತೆ. ಆ ಮೂಲಕ ಅವರ ಅಭಿಮಾನಿಗಳ ಪ್ರೀತಿಯ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದರಂತೆ. ಈ ಬಗೆಯ ನಿರ್ಲಿಪ್ತ ಮನಃಸ್ಥಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಪ್ರದರ್ಶಿಸಬಲ್ಲರೆ? ಕಾದು ನೋಡೋಣ.
-ನಾಗಮಂಗಲ ನರಸಿಂಹ ಮೂರ್ತಿ, ಮೈಸೂರು.
ಮೈಸೂರು: ಮೈಸೂರು ದಸರಾ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ 17 ಉಪಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ…
ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…
ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…
ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್ಎನ್ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್ಎನ್ಎಲ್ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…