ಎಡಿಟೋರಿಯಲ್

ಓದುಗರ ಪತ್ರ : 07 ಬುಧವಾರ 2022

ಬುದ್ಧ ಧಮ್ಮ ಕೇಂದ್ರ ಮುಂಭಾಗದ ಬಾರ್‌ನಿಂದ ಸಮಸ್ಯೆ

ಯಳಂದೂರು ತಾಲ್ಲೂಕು ಕೇಂದ್ರದ ಹೃದುಂ ಭಾಗದಲ್ಲಿರುವ ಬುದ್ಧ ಧಮ್ಮ ಧ್ಯಾನ ಕೇಂದ್ರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆ ಮತ್ತು ಭವನವಿರುವ ಸ್ಥಳದ ಮುಂಭಾಗದಲ್ಲಿ ಎಸ್‌ಜಿಆರ್ ಬಾರ್ ಅಂಡ್ ರೆಸ್ಟೋರೆಂಟ್‌ನಿಂದಾಗಿ ಅಂಬೇಡ್ಕರ್ ಭವನ ಹಾಗೂ ಅವರ ಪ್ರತಿಮೆಯ ಅಕ್ಕ-ಪಕ್ಕದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಮದ್ಯಸನಿಗಳು ಮದ್ಯದ ಬಾಟಲಿ, ಸೇವಿಸಿದ ಮಾಂಸಹಾರದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀಸಾಡಿ ಪರಿಸರವನ್ನು ಹಾಳುವಾಡುತ್ತಿದ್ದಾರೆ. ಈ ಮದ್ಯ ವ್ಯಸನಿಗಳಿಂದಾಗಿ ವಿದ್ಯಾರ್ಥಿಗಳಿಗೆ, ಮಹಿಳೆುಂರಿಗೆ, ಆಟೋ ಚಾಲಕರು ಸೇರದಂತೆ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಧ್ಯಾನ ಕೇಂದ್ರಕ್ಕೆ ಬರುವ ಬುದ್ಧನ ಅನುಾಂಯಿಗಳಿಗೆ ಹಾಗೂ ಅಂಬೇಡ್ಕರ್ ಅಭಿವಾನಿಗಳಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಎಸ್‌ಜಿಆರ್ ಬಾರ್ ಅನ್ನು ತೆರವುಗೊಳಿಸಿ ಇಲ್ಲಿನ ಪರಿಸರವನ್ನು ಕಾಪಾಡಬೇಕಾಗಿದೆ.

-ಎಸ್.ಸುಂದರ ಕಲಿವೀರ್, ಸಂಚಾಲಕ, ವಾನವ ಬಂಧುತ್ವ ವೇದಿಕೆ, ುಂಳಂದೂರು.


‘ಜಾನಪದ ನಾಡು ಚಾಮರಾಜನಗರಕ್ಕೆ ಸುಸ್ವಾಗತ’ ಎಂಬುದು ಸೂಕ್ತ

ಚಾಮರಾಜನಗರದ ಎಲ್ಲಾ ಕಮಾನು ಗೇಟ್‌ಗಳಲ್ಲಿ ನಗರಸಭೆಯವರು ‘ಜಾನಪದ ಕಲೆಗಳ ತವರೂರು’ ಎಂದು ಬರೆಸಿ ಹಾಕುತ್ತಿರುವುದು ಸಂತೋಷದ ಸಂಗತಿ. ಆದರೆ ಶೀರ್ಷಿಕೆುಂಲ್ಲಿ ಸ್ವಲ್ಪ ಬದಲಾವಣೆ ಮಾಡಿ ‘ಜಾನಪದ ನಾಡು ಚಾಮರಾಜನಗರಕ್ಕೆ ಸುಸ್ವಾಗತ’ ಎಂದೋ ಅಥವಾ ‘ಜಾನಪದ ತವರು ಚಾಮರಾಜನಗರಕ್ಕೆ ಸುಸ್ವಾಗತ’ ಎಂದು ಬರೆಸಿದರೆ ಶೀರ್ಷಿಕೆ ಅರ್ಥ ಪೂರ್ಣವಾಗುತ್ತದೆ.

ಜನಪದ ಎಂದರೆ ಒಂದು ಸಮುದಾಯ, ಜನರ ಗುಂಪು ಎಂದು ಅರ್ಥ ನೀಡುತ್ತದೆ ಅದೇ, ಜಾನಪದ ಎಂಬುದು ಇಡೀ ಸಮುದಾಯ ಒಳಗೊಂಡಿರುವ ಕಲೆ, ಸಾಹಿತ್ಯ, ಮಹಾಕಾವ್ಯ, ನಂಬಿಕೆ, ಸಂಪ್ರದಾಯ, ಆಚಾರ, ಪರಂಪರೆ, ಸಂಸ್ಕೃತಿ, ಜೀವನ ಕ್ರಮ, ಬುಡಕಟ್ಟು ಜೀವನ ಮತ್ತು ಎಲ್ಲಾ ರೀತಿಯ ಜನರ ಜೀವನ ವ್ಯವಸ್ಥೆಯನ್ನು ಒಳಗೊಳ್ಳುತ್ತದೆ. ಹಾಗಾಗಿ ಜಾನಪದ ತವರು, ಜಾನಪದ ನಾಡು ಎಂಬ ಶೀರ್ಷಿಕೆ ಸೂಕ್ತವಾಗಿರುತ್ತದೆ.

– ಡಾ.ಶಿವರಾಮ್ ಅಂಶಿ, ಚಾಮರಾಜನಗರ.


‘ಚಿರತೆ ಹಾವಳಿ; ಇರಲಿ ಜಾಗೃತಿ’

ಇತ್ತೀಚಿನ ದಿನಗಳಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಸಾರ್ವಜನಿಕರು ಭಯಭೀತರಾಗಿ, ಆತಂಕದಲ್ಲಿ ಓಡಾಡುವ ಪರಿಸ್ಥಿತಿ ಉಂಟಾಗಿದೆ. ಗ್ರಾಮೀಣ ಭಾಗದ ಹೊರವಲಯದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ, ರೈತರು ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕೂಲಿ ಕಾರ್ಮಿಕರು ಇದರ ಹಾವಳಿಯಿಂದ ಹೆದರಿ ಕೂಲಿಗೆ ತೆರಳದೆ ಪರದಾಡುತ್ತಿದ್ದಾರೆ.

ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈ ಸಮಯದಲ್ಲಿ ಸಾರ್ವಜನಿಕರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ನಾಯಿ, ಕೋಳಿ, ಹಸು, ಮನುಷ್ಯನ ಮಾಂಸದ ರುಚಿಯನ್ನು ಸವಿದಿರುವ ಚಿರತೆಯ ಹಾವಳಿ ವಿಪರೀತವಾಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಕೂಡ ಅತ್ಯಂತ ಜಾಗರೂಕತೆಯಿಂದ ಇರಬೇಕು. ಮತ್ತೆ ಮನುಷ್ಯರ ಪ್ರಾಣಕ್ಕೆ ತೊಂದರೆಯಾಗುವ ಮೊದಲೇ ಅಧಿಕಾರಿ ವರ್ಗದವರು ಚಿರತೆಯನ್ನು ಸೆರೆ ಹಿಡಿಯಲು ಕ್ರಮಕೈಗೊಳ್ಳಬೇಕು.

-ಎನ್.ಪಿ.ಪರಶಿವಮೂರ್ತಿ, ನಂಜೀಪುರ, ಸರಗೂರು ತಾ.


ಮತದಾರರ ಪಟ್ಟಿ ಹೆಸರು ನಾಪತ್ತೆ ಆತಂಕಕಾರಿ

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭವಾದ ಮತದಾರರ ಹೆಸರು ಕಾಣೆಾಂದ ವಾದರಿುಂಂತೆ ಇದೀಗ ಮೈಸೂರು ಜಿಲ್ಲೆುಂಲ್ಲೂ ಅದೇ ರೀತಿಯ ಹಗರಣ ಬೆಳಕಿಗೆ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ೧,೪೫,೯೦೮ ಮತದಾರರ ಹೆಸರು ಚುನಾವಣೆ ಪಟ್ಟಿಯಿಂದ ಕಾಣೆಯಾಗಿರುವುದು ಆತಂಕವನ್ನುಂಟು ಮಾಡಿದೆ.

ವಿಧಾನಸಭೆ ಚುನಾವಣೆ ಹತ್ತಿರವಿರುವುದರಿಂದ ಇಂತಹ ಪ್ರಕರಣಗಳು ರಾಜ್ಯವ್ಯಾಪಿ ಹರಡುವ ಮುನ್ನ ಕಾಣೆಯಾಗಿರುವ ಹೆಸರುಗಳನ್ನು ಪರಿಶೀಲನೆ ಕೂಡಲೇ ಮರುಸೇರ್ಪಡೆಗೊಳಿಸಬೇಕು. ಜೊತೆಗೆ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಚುನಾವಣಾ ಆಯುಕ್ತರು ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

-ನಾಗೇಶ್, ಮಾನಸಗಂಗೋತ್ರಿ, ಮೈಸೂರು.
————————–

andolana

Recent Posts

ಎಸ್‌ಐಆರ್‌ | ಬಿಜೆಪಿಯಿಂದ ಅನಗತ್ಯ ಆರೋಪ ; ಎಂ.ಲಕ್ಷ್ಮಣ್‌ ಕಿಡಿ

ಮೈಸೂರು : ಎಸ್‌ಐಆರ್ ಪ್ರಕ್ರಿಯೆ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಕದಿಯುತ್ತಿರುವ ಬಿಜೆಪಿ, ಕೆಲವು ದಿನಗಳಿಂದ ಅನಗತ್ಯ…

6 hours ago

ಆರು ತಿಂಗಳ ಬಳಿಕ ಕೆಆರ್‌ಎಸ್‌ ಡ್ಯಾಂಗೆ 1000 ಕ್ಯೂಸೆಕ್ಸ್‌ ನೀರು ಒಳಹರಿವು

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ…

9 hours ago

ಓದುಗರ ಪತ್ರ: ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ

ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ ಮೈಸೂರಿನ ಮುಖ್ಯ ರೈಲು ನಿಲ್ದಾಣದಿಂದ ಬೆಳಿಗ್ಗೆ ೮.೩೫ ಕ್ಕೆ ಹೊರಡುವ ಮಾಲ್ಗುಡಿ ಎಕ್ಸ್‌ಪ್ರೆಸ್…

12 hours ago

ಶಂಕರ್ ಎಂಬ ನೆಲದ ಹೂ

ತಾನೊಬ್ಬ ಪ್ರಗತಿಪರ, ಜಾತ್ಯತೀತ, ಬಂಡಾಯಗಾರ ಅಂತ ತನ್ನ ನಗಾರಿಯನ್ನು ತಾನೇ ಬಾರಿಸುವಷ್ಟು ಅಸೂಕ್ಷ್ಮತೆ ಅವರಿಗಿರಲಿಲ್ಲ. ಅದನ್ನೆಲ್ಲಾ ಬದುಕಿ ತೋರಿಸಿದ್ದರು ಎಸ್.ಗಂಗಾಧರಯ್ಯ…

12 hours ago

ಊರೊಳಗೆ ಬೆರೆತು ಜನರ ಬಣ್ಣವೇ ಆದ ಕೆ.ಟಿ.ಶಿವಪ್ರಸಾದ್

ಬರಹ ಮತ್ತು ರೇಖಾಚಿತ್ರ: ಎಂ ಎಸ್ ಪ್ರಕಾಶ್ ಬಾಬು ಮೇಲ್ವರ್ಗದಿಂದಲೇ ಬಂದ ಶಿವಪ್ರಸಾದರು ವಿಶೇಷವಾಗಿ ಉಳಿಯುವುದು ಅವರ ರಾಜಕೀಯ ಸಾಮಾಜಿಕ…

12 hours ago

ಅಮೆರಿಕ ಎಂಬ ಪ್ರಯೋಗಕ್ಕೆ ಇನ್ನೂರೈವತ್ತು ವಸಂತಗಳು

ಶೇಷಾದ್ರಿ ಗಂಜೂರು ಸರಿಯಾಗಿ ಇನ್ನೂರೈವತ್ತು ವರ್ಷಗಳ ಹಿಂದೆ, ೧೭೭೬ರ ಜುಲೈ ೪ರಂದು, ಅಮೆರಿಕದ ಫಿಲಡೆಲ್ಛಿಯಾ ನಗರದಲ್ಲಿ ಒಗ್ಗೂಡಿದ್ದ ೫೬ ಜನ…

12 hours ago