ಜಿಲ್ಲೆಗಳು

ಕಂದೇಗಾಲದಲ್ಲಿ ಸಿದ್ದಪ್ಪಾಜಿ ಕಂಡಾಯೋತ್ಸವ

ಗುಂಡ್ಲುಪೇಟೆ: ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಸಿದ್ದಪ್ಪಾಜಿ ಕಂಡಾಯೋತ್ಸವ ನಡೆಯಿತು.

ಸುಮಾರು ಹತ್ತಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಈ ಒಂದು ಉತ್ಸವದಲ್ಲಿ ಸುತ್ತಲಿನ ಕೊಡಹಳ್ಳಿ, ಶಿವಪುರ, ಕೆಬ್ಬೇಪುರ, ಅಂಕಹಳ್ಳಿ, ಬಾಚಹಳ್ಳಿ, ಯಲಚಟ್ಟಿ ಗ್ರಾಮಗಳಿಂದ ನೂರಾರು ಜನರು ಆಗಮಿಸಿ ಸಿದ್ದಪ್ಪಾಜಿಗೆ ಪೂಜೆ, ಪುನಸ್ಕಾರ ಸಲ್ಲಿಸಿ ಭಕ್ತಿ ಭಾವ ಮೆರೆದರು‌.
ವಿವಿಧ ಹೂವು, ಹೊಂಬಾಳೆಯೊಂದಿನ ಅಲಂಕೃತಗೊಂಡಿದ್ದ ಕಂಡಾಯ, ಸತ್ತಿಗೆ ಸೂರಿಪಾನಿಯನ್ನು ತಮಟೆ ಸದ್ದಿನೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಂಡಾಯೋತ್ಸವ ಸಾಗುತ್ತಿದ್ದ ವೇಳೆ ಮಹಿಳೆಯರು ಕಜ್ಜಾಯದ ಪೂಜೆಯನ್ನು ಸಲ್ಲಿಸಿ ಭಕ್ತಿಭಾವ ಮೆರೆದರು.
ಉತ್ಸವದ ಹಿನ್ನೆಯಲ್ಲಿ ಬೀದಿಗಳನ್ನು ಸ್ವಚ್ಛಗೊಳಿಸಿ, ಮನೆಗಳ ಮುಂದೆ ಬಿಡಿಸಿದ ರಂಗೋಲಿ, ಪುನೀತ್ ಚಿತ್ರಗಳು ಗಮನಸೆಳೆದವು. ಕುಂದಕೆರೆ, ಮಲ್ಲಮನಹುಂಡಿ, ಬರಟಹಳ್ಳಿ ಗ್ರಾಮಗಳಿಂದ ಕರೆತಂದಿದ್ದ ಕಂಡಾಯಗಳನ್ನು ಸಿದ್ದಪ್ಪಾಜಿ ಗುಂಡಂದಿರು, ದಾಸರ ಒಕ್ಕಲಿಗರು ಹೊತ್ತು ಸಾಗಿದರು. ಈ ವೇಳೆ ಹರಗ ಕುಣಿತ, ಮಹಿಳಾ ಸಂಘದವರ ಜಾನಪದ ಗೀತೆಗಳನ್ನು ಹಾಡಿದರು.
ಯಜಮಾನರಾದ ರಾಚಯ್ಯ,
ಚಿಕ್ಕಬಸವಯ್ಯ, ಚಿಕ್ಕಂಡಯ್ಯ, ದಾಸಯ್ಯ, ಬಸವಯ್ಯ, ಕೊಂತಯ್ಯ ಸಿದ್ದಯ್ಯ, ಪುಟ್ಟರಾಚಯ್ಯ, ಮೊತ್ತಗಯ್ಯ ಸಿದ್ದಯ್ಯ, ಕಣ್ಣಯ್ಯ, ಬಸವಯ್ಯ, ಪುಟ್ಟನಿಂಗಯ್ಯ, ಕುಳ್ಳಪತ್ತಯ್ಯ ಸಿದ್ದಯ್ಯ, ಚಿಕ್ಕರಾಚಯ್ಯ, ಸಿದ್ದಣ್ಣ ಬಸವಯ್ಯ, ಸಿದ್ದರಾಜು, ಕೆ.ಬಿ.ಶಿವರಾಜು, ದೊರೆಸ್ವಾಮಿ, ಕೃಷ್ಣ, ಪಾಪಣ್ಣ, ರಾಜು, ವೆಂಕಟೇಶ್, ಮಹೇಶ್, ಅಪ್ಪು ಅಭಿಮಾನಿ ಬಳಗದ ಯುವಕರು, ಮುಖಂಡರು ಹಾಜರಿದ್ದರು..

andolanait

Recent Posts

ಓದುಗರ ಪತ್ರ: ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಪ್ರಶ್ನಾರ್ಹ

ಇತ್ತೀಚೆಗೆ ರಾಜ್ಯಸಭಾ ಸದಸ್ಯ, ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಉತ್ತರಾಖಂಡ್ ರಾಜ್ಯದ ಹಲ್ ದ್ವಾನಿಯ ರಾಮಲೀಲಾ…

2 hours ago

ಓದುಗರ ಪತ್ರ: ಎನ್‌ಕೌಂಟರ್ ನಿಗೂಢತೆ?

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಮೃತಪಟ್ಟಿರುವ ಪ್ರಕರಣ ಹಲವಾರು…

2 hours ago

ಓದುಗರ ಪತ್ರ: ಜಂಬೂಸವಾರಿಯ ಹೊಸ ಸಾರಥಿ ಯಾರು?

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ೭೫೦ ಕೆಜಿ ತೂಕದ ಅಂಬಾರಿ ಹೊತ್ತು ಸಾಗುತ್ತಿದ್ದ ಅಭಿಮನ್ಯು ಆನೆ ಇನ್ನುಮುಂದೆ ಬರುವುದಿಲ್ಲ…

2 hours ago

ಧ್ವನಿಹೀನರಿಗೆ ಧ್ವನಿಯಾಗಿದ್ದ ದೇವರಾಜ ಅರಸು

ಎಚ್.ಹಾಲಪ್ಪ ಇಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿ ದೇಶದಲ್ಲಿ ಜನಪ್ರತಿನಿಧಿಗಳ ಸಂಖ್ಯೆ ಸಾವಿರಾರು. ಆದರೆ, ಕಾಲದ ಪರೀಕ್ಷೆಯಲ್ಲಿ ಮುತ್ಸದ್ದಿ…

2 hours ago

ನೀರಿಲ್ಲದಿದ್ದರೂ ಭರ್ತಿಯಾಗುತ್ತಿದೆ ಕಸುವಿನಹಳ್ಳಿ ಕೆರೆ!

ಎಸ್.ಎಸ್.ಭಟ್ ಸುತ್ತಲಿನ ಕ್ರಷರ್‌ನಿಂದ ತಂದು ಹಾಕುತ್ತಿರುವ ರಾಶಿ ದೂಳಿನಿಂದ ತುಂಬುತ್ತಿದೆ ಕೆರೆ; ಗ್ರಾಮಸ್ಥರ ಆಕ್ರೋಶ ನಂಜನಗೂಡು: ಮಳೆ ಬಂದರೆ ನೀರಿನಿಂದ…

2 hours ago