ಜಿಲ್ಲೆಗಳು

ಕಂದೇಗಾಲದಲ್ಲಿ ಸಿದ್ದಪ್ಪಾಜಿ ಕಂಡಾಯೋತ್ಸವ

ಗುಂಡ್ಲುಪೇಟೆ: ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಸಿದ್ದಪ್ಪಾಜಿ ಕಂಡಾಯೋತ್ಸವ ನಡೆಯಿತು.

ಸುಮಾರು ಹತ್ತಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಈ ಒಂದು ಉತ್ಸವದಲ್ಲಿ ಸುತ್ತಲಿನ ಕೊಡಹಳ್ಳಿ, ಶಿವಪುರ, ಕೆಬ್ಬೇಪುರ, ಅಂಕಹಳ್ಳಿ, ಬಾಚಹಳ್ಳಿ, ಯಲಚಟ್ಟಿ ಗ್ರಾಮಗಳಿಂದ ನೂರಾರು ಜನರು ಆಗಮಿಸಿ ಸಿದ್ದಪ್ಪಾಜಿಗೆ ಪೂಜೆ, ಪುನಸ್ಕಾರ ಸಲ್ಲಿಸಿ ಭಕ್ತಿ ಭಾವ ಮೆರೆದರು‌.
ವಿವಿಧ ಹೂವು, ಹೊಂಬಾಳೆಯೊಂದಿನ ಅಲಂಕೃತಗೊಂಡಿದ್ದ ಕಂಡಾಯ, ಸತ್ತಿಗೆ ಸೂರಿಪಾನಿಯನ್ನು ತಮಟೆ ಸದ್ದಿನೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಂಡಾಯೋತ್ಸವ ಸಾಗುತ್ತಿದ್ದ ವೇಳೆ ಮಹಿಳೆಯರು ಕಜ್ಜಾಯದ ಪೂಜೆಯನ್ನು ಸಲ್ಲಿಸಿ ಭಕ್ತಿಭಾವ ಮೆರೆದರು.
ಉತ್ಸವದ ಹಿನ್ನೆಯಲ್ಲಿ ಬೀದಿಗಳನ್ನು ಸ್ವಚ್ಛಗೊಳಿಸಿ, ಮನೆಗಳ ಮುಂದೆ ಬಿಡಿಸಿದ ರಂಗೋಲಿ, ಪುನೀತ್ ಚಿತ್ರಗಳು ಗಮನಸೆಳೆದವು. ಕುಂದಕೆರೆ, ಮಲ್ಲಮನಹುಂಡಿ, ಬರಟಹಳ್ಳಿ ಗ್ರಾಮಗಳಿಂದ ಕರೆತಂದಿದ್ದ ಕಂಡಾಯಗಳನ್ನು ಸಿದ್ದಪ್ಪಾಜಿ ಗುಂಡಂದಿರು, ದಾಸರ ಒಕ್ಕಲಿಗರು ಹೊತ್ತು ಸಾಗಿದರು. ಈ ವೇಳೆ ಹರಗ ಕುಣಿತ, ಮಹಿಳಾ ಸಂಘದವರ ಜಾನಪದ ಗೀತೆಗಳನ್ನು ಹಾಡಿದರು.
ಯಜಮಾನರಾದ ರಾಚಯ್ಯ,
ಚಿಕ್ಕಬಸವಯ್ಯ, ಚಿಕ್ಕಂಡಯ್ಯ, ದಾಸಯ್ಯ, ಬಸವಯ್ಯ, ಕೊಂತಯ್ಯ ಸಿದ್ದಯ್ಯ, ಪುಟ್ಟರಾಚಯ್ಯ, ಮೊತ್ತಗಯ್ಯ ಸಿದ್ದಯ್ಯ, ಕಣ್ಣಯ್ಯ, ಬಸವಯ್ಯ, ಪುಟ್ಟನಿಂಗಯ್ಯ, ಕುಳ್ಳಪತ್ತಯ್ಯ ಸಿದ್ದಯ್ಯ, ಚಿಕ್ಕರಾಚಯ್ಯ, ಸಿದ್ದಣ್ಣ ಬಸವಯ್ಯ, ಸಿದ್ದರಾಜು, ಕೆ.ಬಿ.ಶಿವರಾಜು, ದೊರೆಸ್ವಾಮಿ, ಕೃಷ್ಣ, ಪಾಪಣ್ಣ, ರಾಜು, ವೆಂಕಟೇಶ್, ಮಹೇಶ್, ಅಪ್ಪು ಅಭಿಮಾನಿ ಬಳಗದ ಯುವಕರು, ಮುಖಂಡರು ಹಾಜರಿದ್ದರು..

andolanait

Recent Posts

ಎಸ್‌ಐಆರ್‌ | ಬಿಜೆಪಿಯಿಂದ ಅನಗತ್ಯ ಆರೋಪ ; ಎಂ.ಲಕ್ಷ್ಮಣ್‌ ಕಿಡಿ

ಮೈಸೂರು : ಎಸ್‌ಐಆರ್ ಪ್ರಕ್ರಿಯೆ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಕದಿಯುತ್ತಿರುವ ಬಿಜೆಪಿ, ಕೆಲವು ದಿನಗಳಿಂದ ಅನಗತ್ಯ…

7 hours ago

ಆರು ತಿಂಗಳ ಬಳಿಕ ಕೆಆರ್‌ಎಸ್‌ ಡ್ಯಾಂಗೆ 1000 ಕ್ಯೂಸೆಕ್ಸ್‌ ನೀರು ಒಳಹರಿವು

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ…

10 hours ago

ಓದುಗರ ಪತ್ರ: ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ

ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ ಮೈಸೂರಿನ ಮುಖ್ಯ ರೈಲು ನಿಲ್ದಾಣದಿಂದ ಬೆಳಿಗ್ಗೆ ೮.೩೫ ಕ್ಕೆ ಹೊರಡುವ ಮಾಲ್ಗುಡಿ ಎಕ್ಸ್‌ಪ್ರೆಸ್…

13 hours ago

ಶಂಕರ್ ಎಂಬ ನೆಲದ ಹೂ

ತಾನೊಬ್ಬ ಪ್ರಗತಿಪರ, ಜಾತ್ಯತೀತ, ಬಂಡಾಯಗಾರ ಅಂತ ತನ್ನ ನಗಾರಿಯನ್ನು ತಾನೇ ಬಾರಿಸುವಷ್ಟು ಅಸೂಕ್ಷ್ಮತೆ ಅವರಿಗಿರಲಿಲ್ಲ. ಅದನ್ನೆಲ್ಲಾ ಬದುಕಿ ತೋರಿಸಿದ್ದರು ಎಸ್.ಗಂಗಾಧರಯ್ಯ…

13 hours ago

ಊರೊಳಗೆ ಬೆರೆತು ಜನರ ಬಣ್ಣವೇ ಆದ ಕೆ.ಟಿ.ಶಿವಪ್ರಸಾದ್

ಬರಹ ಮತ್ತು ರೇಖಾಚಿತ್ರ: ಎಂ ಎಸ್ ಪ್ರಕಾಶ್ ಬಾಬು ಮೇಲ್ವರ್ಗದಿಂದಲೇ ಬಂದ ಶಿವಪ್ರಸಾದರು ವಿಶೇಷವಾಗಿ ಉಳಿಯುವುದು ಅವರ ರಾಜಕೀಯ ಸಾಮಾಜಿಕ…

13 hours ago

ಅಮೆರಿಕ ಎಂಬ ಪ್ರಯೋಗಕ್ಕೆ ಇನ್ನೂರೈವತ್ತು ವಸಂತಗಳು

ಶೇಷಾದ್ರಿ ಗಂಜೂರು ಸರಿಯಾಗಿ ಇನ್ನೂರೈವತ್ತು ವರ್ಷಗಳ ಹಿಂದೆ, ೧೭೭೬ರ ಜುಲೈ ೪ರಂದು, ಅಮೆರಿಕದ ಫಿಲಡೆಲ್ಛಿಯಾ ನಗರದಲ್ಲಿ ಒಗ್ಗೂಡಿದ್ದ ೫೬ ಜನ…

13 hours ago