ಜಿಲ್ಲೆಗಳು

ಮಳೆ, ಮೋಡದ ಹೊಡೆತಕ್ಕೆ ಸೊರಗಿದ ಬಹುರೂಪಿ

ಇನ್ನು ಮೂರು ದಿನಗಳು ಬಾಕಿಯಿರುವಾಗಲೇ ಕರಕುಶಲ ಮೇಳದ ಮಳಿಗೆಗಳು ಖಾಲಿ

ಮೈಸೂರು: ರಂಗಾಯಣದ ಮಹತ್ವಾಕಾಂಕ್ಷಿ ಉತ್ಸವ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಈ ಬಾರಿ ಮಳೆ ಆರಂಭಿಕ ಹೊಡತೆ ಕೊಟ್ಟಿದೆ. ಚೆನ್ನೈನಲ್ಲಿ ಎದ್ದಿರುವ ಸೈಕ್ಲೋನ್ ಕಾರಣ ನಗರದಲ್ಲಿ ಮೂರು ದಿನಗಳಿಂದಲೂ ಜಿಟಿಜಿಟಿ ಮಳೆ, ಮೋಡ ಕವಿದ ವಾತಾವರಣ ಇದೆ. ಇದರಿಂದ ಹೆಚ್ಚಿನ ಕಲಾಸಕ್ತರು ರಂಗಾಯಣದ ಕಡೆಗೆ ಮುಖ ಮಾಡುತ್ತಿಲ್ಲ. ಇದರ ಜೊತೆಗೆ ಆಯೋಜಕರ ಅಸಹಕಾರದಿಂದ ಕರಕುಶಲ ಮೇಳದಲ್ಲಿ ಮಳಿಗೆಗಳನ್ನು ಹಾಕಿದ್ದವರು ಮಳಿಗೆಯನ್ನು ಖಾಲಿ ಮಾಡಿ ಹೊರಟಿರುವುದರಿಂದ ರಂಗಾಯಣದ ಅಂಗಳ ಭಣಗುಡುತ್ತಿದೆ.

ಡಿ.೯ರಂದು ಸಂಜೆ ಬಹುರೂಪಿ ಕರಕುಶಲ ಮೇಳಕ್ಕೆ ಚಾಲನೆ ದೊರೆಯಿತು. ಹೀಗೆ ಆಂಭಗೊಂಡ ಕೆಲವೇ ಸಮಯದಲ್ಲಿ ಬಂದ ಮಳೆಯಿಂದಾಗಿ, ಅಂದೇ ಕೆಲವು ವ್ಯಾಪಾರಿಗಳು ಆಯೋಜಕರ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಮಳಿಗೆಗಳಿಗಾಗಿ ತಾವು ಕಟ್ಟಿದ್ದ ಡಿಡಿ ಹಣವನ್ನು ಹಿಂಪಡೆದು ತಮ್ಮ ವಸ್ತುಗಳನ್ನು ತೆಗೆದುಕೊಂಡು ವಾಪಸ್ಸಾದರು.

ಈ ವೇಳೆ ಆಯೋಜಕರು ನಾಳೆಗೆ ಈ ರೀತಿ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ನಾಲ್ಕು ದಿನಗಳು ಕಳೆದರೂ ಇನ್ನೂ ಸಮರ್ಪಕ ವ್ಯವಸ್ಥೆ ಕಲ್ಪಿಸದ ಕಾರಣ ಭಾನುವಾರವೂ ಹಲವು ಮಳಿಗೆಗಳವರು ತಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ರಂಗಾಯಣದ ಆವರಣದಲ್ಲಿ ಕಂಡು ಬಂದವು.

ವ್ಯಾಪಾರಿಗಳ ಅಳಲು

‘ಡಿಡಿ ಹಣವನ್ನು ಕಟ್ಟಿಸಿಕೊಳ್ಳುವಾಗ ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಹೇಳಿದಂತೆ ಏನೂ ಮಾಡಿಲ್ಲ. ನಾಲ್ಕು ದಿನಗಳಾಯ್ತು ಏನೂ ವ್ಯವಸ್ಥೆ ಮಾಡಲಿಲ್ಲ. ಬಟ್ಟೆ, ಪುಸ್ತಕಗಳು ಎಲ್ಲವೂ ಒದ್ದೆಯಾಗುತ್ತಿವೆ. ಮಳೆಯಿಂದ ಜನರೂ ಬಾರದೇ ವ್ಯಾಪಾರವಿಲ್ಲ. ಹಾಗಾಗಿ, ವಾಪಸ್ಸು ಹೋಗುತ್ತಿದ್ದೇವೆ. ಡಿಡಿ ಹಣವನ್ನು ಕೇಳಿದರೆ, ಎರಡು ದಿನಗಳ ಬಾಡಿಗೆ ಮುರಿದುಕೊಂಡು ಕೊಡುತ್ತೇವೆ ಎಂದು ಹೇಳುತ್ತಾರೆ. ನಮ್ಮ ವಸ್ತುಗಳನ್ನು ತರಲು ನೀಡಿರುವ ಟ್ರಾನ್ಸ್‌ಪೋರ್ಟ್ ಹಣವೂ ಇಲ್ಲಿ ಸಂಪಾದನೆಯಾಗಿಲ್ಲ ಎಂದು ಕರಕುಶಲ ಮೇಳದಲ್ಲಿನ ವ್ಯಾಪಾರಿಗಳು ಅಳಲು ತೋಡಿಕೊಂಡರು.


ಭಣಗುಡುತ್ತಿದೆ ರಂಗಾಯಣ

ತನ್ನದೇ ಆದ ಇತಿಹಾಸ ಮತ್ತು ಮಹತ್ವವನ್ನು ಹೊಂದಿರುವ ಬಹುರೂಪಿ ನಾಟಕೋತ್ಸವಕ್ಕೆ ಪ್ರತಿವರ್ಷವೂ ಅಸಂಖ್ಯಾತ ಕಲಾಸಕ್ತರು ಮತ್ತು ಪ್ರೇಕ್ಷಕ ವರ್ಗ, ಕಲಾವಿದರು ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬರುತ್ತಿದ್ದರು. ಆದರೆ, ಈ ಬಾರಿ ಸಾಕಷ್ಟು ಜನರು ಕಾಣದೆ ರಂಗಾಯಣದ ಅಂಗಳ ಭಣಗುಡುತ್ತಿದೆ. ಇದಕ್ಕೆ, ಮಳೆ ಮುಖ್ಯ ಕಾರಣ. ಇದರ ಜೊತೆಗೆ ಅಸಮರ್ಪಕ ಆಯೋಜನೆಯೂ ಕಾರಣ ಎನ್ನಬಹುದು. ಅಲ್ಲದೇ, ಬಹುರೂಪಿ ಆರಂಭವಾಗಿ ನಾಲ್ಕು ದಿನಗಳಾದರೂ, ಇನ್ನು ಸಿದ್ಧತೆ ಪೂರ್ಣಗೊಳ್ಳದೆ ಸಣ್ಣಪುಟ್ಟ ಕೆಲಸಗಳು ನಡೆಯುತ್ತಲೇ ಇವೆ.

ಕೆಲವೊಂದು ನಾಟಕಗಳಿಗಷ್ಟೆ ಜನರು: ಕನ್ನಡ ಮತ್ತು ಕೆಲವು ಭಾಷೆಯ ನಾಟಕಗಳಲ್ಲಷ್ಟೇ ಜನರು ಕಂಡು ಬರುತ್ತಿದ್ದು, ಚಲನಚಿತ್ರೋತ್ಸವ ಮತ್ತು ಜನಪದೋತ್ಸವದಲ್ಲಿ ಹೆಚ್ಚಿನ ಪ್ರೇಕ್ಷಕರು ಕಂಡು ಬರುತ್ತಿಲ್ಲ.


‘ಎರಡು ದಿನಗಳ ಬಾಡಿಗೆ ಮುರಿದುಕೊಂಡು ಡಿಡಿ ಹಣವನ್ನು ನೀಡುವ ಕುರಿತು ರಂಗಾಯಣದ ನಿರ್ದೇಶಕರೊಂದಿಗೆ ಮಾತನಾಡುತ್ತೇನೆ’

-ನಿರ್ಮಲ ಮಠಪತಿ, ಉಪ ನಿರ್ದೇಶಕರು, ರಂಗಾಯಣ

andolanait

Recent Posts

ಇಸ್ರೇಲ್-ಲೆಬನಾನ್‌ ನಡುವೆ 10 ದಿನಗಳ ಕದನ ವಿರಾಮ ಘೋಷಿಸಿದ ಟ್ರಂಪ್‌

ಇಸ್ರೇಲ್‌ : ಇಸ್ರೇಲ್-ಲೆಬನಾನ್ ಉದ್ವಿಗ್ನತೆಗೆ 10 ದಿನಗಳ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.…

57 mins ago

ರಾಜ್ಯಗಳ ನಡುವೆ ಯಾವುದೇ ತಾರತಮ್ಯ ಇಲ್ಲ : ಪ್ರಧಾನಿ ಮೋದಿ ಅಭಯ

ನವದೆಹಲಿ : ಉತ್ತರ, ದಕ್ಷಿಣ, ದೊಡ್ಡ ಅಥವಾ ಸಣ್ಣ ರಾಜ್ಯಗಳಾವುದೇ ಇರಲಿ ಕ್ಷೇತ್ರ ಪುನರ್ ವಿಂಗಡಣೆಯ ವಿಷಯಕ್ಕೆ ಬಂದಾಗ ರಾಜ್ಯಗಳ…

1 hour ago

KSOU | ಯುಜಿಸಿ ನೆಟ್, ಕೆ-ಸೆಟ್‌ ಪರೀಕ್ಷೆಗೆ ಉಚಿತ ತರಬೇತಿ

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಿಗೆ…

2 hours ago

ನಿಂತಿದ್ದ ವಿಮಾನಕ್ಕೆ ತಗುಲಿದ ಸ್ಪೈಸ್‌ಜೆಟ್‌ ವಿಮಾನ ; ತಪ್ಪಿದ ಭಾರಿ ಅನಾಹುತ

ನವದೆಹಲಿ : ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಸಣ್ಣ ಘರ್ಷಣೆಯಾಗಿದ್ದು, ಭಾರೀ ಅನಾಹುತ ತಪ್ಪಿದೆ.…

2 hours ago

ಮಂತ್ರಾಲಯ ಬಳಿ ಭೀಕರ ಅಪಘಾತ : ಐವರು ಮಹಿಳೆಯರು ಸೇರಿ 8 ಮಂದಿ ಸಾವು

ರಾಯಚೂರು : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿಲಕಣಡೋಣ ಗ್ರಾಮದ ಸಮೀಪ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ…

3 hours ago

ಈ ಬಾರಿ ಕರ್ನಾಟಕಕ್ಕೆ ಮುಂಗಾರು ಕೊರತೆ ; ಮುಂಜಾಗ್ರತ ಕ್ರಮಕ್ಕೆ ಸಿಎಂ ಸೂಚನೆ

ಬೆಂಗಳೂರು : ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆಯಾಗುವ ಸಾಧ್ಯತೆಯಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ…

4 hours ago