ಜಿಟಿಜಿಟಿ ಮಳೆ, ಚಳಿಯ ನಡುವೆ ಮಿರ್ಚಿ, ಮಂಡಕ್ಕಿ ತಿಂದು ನಾಟಕ ವೀಕ್ಷಣೆ
ಬಿ.ಎನ್.ಧನಂಜಯಗೌಡ
ಮೈಸೂರು: ಹೊರಗೆ ಜಿಟಿ ಜಿಟಿ ಮಳೆ, ಚಳಿಯ ನಡುವೆ ತಲೆಗೆ ಟೋಪಿ ಹಾಕಿ, ಬೆಚ್ಚಗೆ ಸ್ವೆಟರ್ ಧರಿಸಿ, ಮಿರ್ಚಿ, ಮಂಡಕ್ಕಿ, ಬಜ್ಜಿಯನ್ನು ತಿನ್ನುತ್ತಾ ನಾಟಕ ವೀಕ್ಷಣೆ ಮಾಡುವಲ್ಲಿ ಪ್ರೇಕ್ಷಕರು ನಿರತರಾಗಿದ್ದ ದೃಶ್ಯಗಳು ಭಾನುವಾರ ರಂಗಮಂದಿರಗಳಲ್ಲಿ ಕಂಡುಬಂದವು. ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಭಾನುವಾರ ಪ್ರದರ್ಶನಗೊಂಡ ‘ಚಂದ್ರಹಾಸ’ ಮತ್ತು ‘ಲೀಲಾವತಿ’ ನಾಟಕಗಳು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದವು.
‘ಚಂದ್ರಹಾಸ’ ಅತ್ಯುತ್ತಮ ಸ್ಪಂದನೆ: ಮಂತ್ರಿಯೊಬ್ಬ ಮೌಢ್ಯದ ದಾಸ್ಯಕ್ಕೆ ಒಳಗಾಗಿ ಮತ್ತು ರಾಜಪುರೋಹಿತರು ಹೇಳುವ ಭವಿಷ್ಯವನ್ನು ನಂಬಿ, ಹೇಗೆ ತನ್ನ ಮಗನನ್ನೇ ಬಲಿಕೊಡುತ್ತಾನೆ ಎಂಬ ಸಾರವನ್ನು ಒಳಗೊಂಡ ಕುವೆಂಪು ರಚನೆಯ ಪ್ರಮೋದ್ ಶಿಗ್ಗಾಂವ್ ನಿರ್ದೇಶನದ ನಾಟಕ ‘ಚಂದ್ರಹಾಸ’ ನಾಟಕ ಸಂಪತ್ ರಂಗಮಂದಿರದಲ್ಲಿ ಸಾಣೇಹಳ್ಳಿ ಶಿವಕುಮಾರ ಕಲಾಸಂಘದ ತಂಡದಿಂದ ಪ್ರದರ್ಶನಗೊಂಡಿತು. ಈ ನಾಟಕಕ್ಕೆ ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು.
ಮನಗೆದ್ದ ಲೀಲಾವತಿ: ಭಾರತದ ಶ್ರೇಷ್ಠ ಗಣಿತಶಾಸ್ತ್ರಜ್ಞ ಭಾಸ್ಕರಾಚಾರ್ಯ ಅವರು ಬರೆದಿರುವ ‘ಲೀಲಾವತಿ’ ಗ್ರಂಥ ಸಿದ್ಧಾಂತವನ್ನು ಆಧರಿಸಿದ ಲೀಲಾವತಿ ನಾಟಕ ಭೂಮಿಗೀತ ವೇದಿಕೆಯಲ್ಲಿ ಪ್ರದರ್ಶನಗೊಂಡಿತು. ಶಶಿಧರ ಡೋಂಗ್ರೆ ಅವರ ರಚನೆಯ, ಪ್ರೊ.ಎಚ್.ಎಸ್.ಉಮೇಶ್ ನಿರ್ದೇಶಿಸಿರುವ ಕನ್ನಡದ ಈ ನಾಟಕವನ್ನು ಕಲಾಸುರುಚಿ ತಂಡ ಅದ್ಬುತವಾಗಿ ಪ್ರದರ್ಶಿಸಿತು. ಭೂಮಿಗೀತ ವೇದಿಕೆ ಶೇ.೮೦ರಷ್ಟು ಭರ್ತಿಯಾಗುವ ಮೂಲಕ ರಂಗಾಸ್ತಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.
ನೀರಸ ಪ್ರತಿಕ್ರಿಯೆ: ಸಿಯಾಮ್ ಡೆತ್ ರೈಲ್ವೇ ನಿರ್ಮಾಣದಲ್ಲಿ ನಾಶವಾದ ಲಕ್ಷಾಂತರ ಆಗ್ನೇಯ ಏಷ್ಯಾದ ಮತ್ತು ಮಲೇಷಿಯಾದ ತಮಿಳು ನಿರಾಶ್ರಿತರ ಕಥೆಗಳನ್ನು ಆಧರಿಸಿದ ‘ಇಡಕಿಣಿ ಕಥಾಯರಥಂ’ ಎಂಬ ತಮಿಳು ನಾಟಕಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ೪೦೦ ಟಿಕೆಟ್ಗಳ ಪೈಕಿ ಕೇವಲ ೩೬ ಟಿಕೆಟ್ಗಳಷ್ಟೆ ಸೇಲ್ ಆಗಿದ್ದವು.
ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಾಯುಕ್ತರು ಆಗಾಗ್ಗೆ ದಾಳಿ ನಡೆಸುವುದು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಈಗಿನ ಪತ್ರಿಕಾ ವರದಿಗಳ ಪ್ರಕಾರ, ಮೂರೂವರೆ ವರ್ಷಗಳಲ್ಲಿ…
ನಂದಿನಿ ಉತ್ಪನ್ನಗಳಾದ, ತುಪ್ಪ ಕೆ.ಜಿಗೆ ರೂ.೧೫ ಮತ್ತು ಬೆಣ್ಣೆ ಕೆ.ಜಿಗೆ ರೂ.೫೦ ಅನ್ನು ಇದೇ ತಿಂಗಳ ೨೪ ರಿಂದಲೇ ಗ್ರಾಹಕರಿಗೆ…
ಬರ...ಅಬ್ಬರ ! ಬರ ಬರ ಬರ್ಬರ ಮಳೆ ಇಲ್ಲ; ಬೆಳೆ ಇಲ್ಲ ಬರಡಾಯಿತಲ್ಲ ಬದುಕೆಲ್ಲ ಜನ-ಜನುವಾರುಗಳ ಬದುಕೀಗ ಅಕ್ಷರಶಃ ಬರ್ಬರ…
ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಉನ್ನತ ಅಧಿಕಾರ ಕಾರ್ಯಪಡೆ ರಚಿಸಿರುವುದು ಅತ್ಯಂತ ಸಮಯೋಚಿತ ಕ್ರಮವಾಗಿದೆ. ಪ್ರತಿವರ್ಷ…
ಶಾಂತರಾಜು ಬಸ್ತೀಪುರ ಬಜೆಟ್ ಘೋಷಣೆಯಂತೆ ಪ್ರೌಢಶಾಲೆಗೂ ವಿಸ್ತರಣೆಯಾಗಲಿ ಬಡತನ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ…
ನವೀನ್ ಡಿಸೋಜ ಮಡಿಕೇರಿ: ಕೋವಿಡ್-೧೯ ಸೋಂಕಿನ ಪ್ರಕರಣಗಳು ಮತ್ತೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಅಗತ್ಯ…