ಚಾಮರಾಜನಗರ

ಹನೂರು| ಭಿಕ್ಷೆ ಬೇಡುತ್ತಿದ್ದ ಬಾಲಕನ ರಕ್ಷಣೆ: ಮಕ್ಕಳ ರಕ್ಷಣಾ ಘಟಕದವರಿಂದ ಬಾಲಮಂದಿರಕ್ಕೆ ಸೇರ್ಪಡೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಪಟ್ಟಣ ವ್ಯಾಪ್ತಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕನನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಣೆ ಮಾಡಿ ಚಾಮರಾಜನಗರದ ಬಾಲ ಮಂದಿರಕ್ಕೆ ಬಿಟ್ಟು ತಮ್ಮ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ನರಸೀಪುರ ತಾಲೂಕಿನ ಯಳವರಹುಂಡಿ ಗ್ರಾಮದ ಮಹದೇವ್ ಎಂಬುವವರ ಪುತ್ರ ಅಪ್ಪು (6) ರಕ್ಷಿಸಲ್ಪಟ್ಟ ಬಾಲಕನಾಗಿದ್ದಾನೆ.

ಘಟನೆ ವಿವರ : ಆರು ವರ್ಷದ ಬಾಲಕ ಅಪ್ಪು ಎಂಬಾತ ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಹಾಗೂ ಇನ್ನಿತರ ಕಡೆ ಭಿಕ್ಷೆ ಬೇಡಿ ತಂದೆಗೆ ಹಣ ನೀಡುತ್ತಿದ್ದ. ಬಂದಂತಹ ಹಣವನ್ನು ತಂದೆ ಕುಡಿದು ಮೈ ಮೇಲೆ ಪ್ರಜ್ಞೆ ಇಲ್ಲದೆ ಎಲ್ಲೆಂದರಲ್ಲಿ ಮಲಗುತ್ತಿದ್ದ. ಈ ವೇಳೆ ಬಾಲಕ ವಿಧಿ ಇಲ್ಲದೆ ಮಳೆ ಚಳಿ ಬೇಸಿಗೆ ಎನ್ನದೆ ಅಪ್ಪ ಮಲಗುತ್ತಿದ್ದ ಸ್ಥಳದಲ್ಲಿಯೇ ಮಲಗಿಕೊಳ್ಳುತ್ತಿದ್ದ. ಈ ವಿಚಾರವನ್ನು ಸ್ಥಳೀಯರು ಮಾಧ್ಯಮದವರ ಗಮನಕ್ಕೆ ತಂದಿದ್ದಾರೆ.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಮಹಾದೇಶ್, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಅಂಬಿಕಾರವರ ಗಮನಕ್ಕೆ ತಂದಿದ್ದಾರೆ. ತಕ್ಷಣ ಮಹಿಳಾ ರಕ್ಷಣಾ ಘಟಕದ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿ, ಸೋಮವಾರ ಮಧ್ಯಾಹ್ನ ಹನೂರು ಪಟ್ಟಣಕ್ಕೆ ಬಂದು ಬಾಲಕನನ್ನು ಹುಡುಕಾಡಿದ್ದಾರೆ. ಆದರೆ ಬಾಲಕ ಸಿಕ್ಕಿರಲಿಲ್ಲ, ಈ ವೇಳೆ ಹನೂರು ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಹಾಸ್ಟೆಲ್ ವಾರ್ಡನ್ ರಮೇಶ್ ರವರಿಗೆ ಬಾಲಕನ ಮೇಲೆ ನಿಗಾ ವಹಿಸಿ ಕರೆತರುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಸೂಚನೆ ನೀಡಿದ್ದರು.

ಬುಧವಾರ ರಾತ್ರಿ ಬಾಲಕ ಭಿಕ್ಷೆ ಬೇಡುತ್ತಿದ್ದ ವೇಳೆ ವಾರ್ಡನ್ ರಮೇಶ್ ರವರು ನೋಡಿ ಬಾಲಕ ಹಾಗೂ ಆತನ ತಂದೆಯನ್ನು ಮನವೊಲಿಸಿ, ಪೊಲೀಸ್ ಠಾಣೆಗೆ ಕರೆತಂದು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಸಂಯೋಜಕ ಸಿದ್ದರಾಜು ಹಾಗೂ ಮಹೇಶ್ ರವರ ಸಮ್ಮುಖದಲ್ಲಿ ಬಾಲಕನನ್ನು ಒಪ್ಪಿಸಿದ್ದಾರೆ.

ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಚಾಮರಾಜನಗರದ ಬಾಲಮಂದಿರಕ್ಕೆ ಕರೆದುಕೊಂಡು ಬಂದು ಬಿಟ್ಟಿದ್ದಾರೆ.

ಇದೇ ವೇಳೆ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಸಂಯೋಜಕ ಸಿದ್ದರಾಜು, ವಿಷಯ ಕಾರ್ಯಕರ್ತ ಮಹೇಶ್ , ವಾರ್ಡನ್ ರಮೇಶ್ ಪೊಲೀಸ್ ಪೇದೆ ಸತೀಶ್ ಹಾಜರಿದ್ದರು.

 

ಆಂದೋಲನ ಡೆಸ್ಕ್

Recent Posts

ಮಾರ್ಟಳ್ಳಿಯಲ್ಲಿ ಮರೀಚಿಕೆಯಾದ ಸ್ವಚ್ಛತೆ: ಗ್ರಾಮಸ್ಥರ ಆಕ್ರೋಶ

ಹನೂರು: ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಹೊಂದಿರುವ ಮಾರ್ಟಳ್ಳಿಯಲ್ಲಿ ಸದ್ಯ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಗ್ರಾಮದ…

1 min ago

ಕಿಡ್ನಿ ಮರು ಜೋಡಣೆಗೆ ಸಹಾಯ ಹಸ್ತ ಕೋರಿದ ಬಡ ಕುಟುಂಬ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಸ್ವಂತ ಮಗನಿಗೆ ತಾಯಿ ಕಿಡ್ನಿ ಜೋಡಣೆಗೆ…

10 mins ago

16 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಆದೇಶ

ನವದೆಹಲಿ: ಭಾರತ ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ…

1 hour ago

ಹನೂರು: ಮಹದೇಶ್ವರ ಸ್ವಾಮಿಗೆ ನೆರವೇರಿದ ಮಹಾರುದ್ರಾಭಿಷೇಕ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ಸ್ವಾಮಿಗೆ ಗುರುವಾರ…

1 hour ago

ಭೂಗತ ಕೇಬಲ್‌ ಕಾಮಗಾರಿ ; ಯೋಜನೆಯ ಪ್ರಗತಿ ಕುರಿತು ಮಾಹಿತಿ ಪಡೆದ ಸಿಎಂ

ಸೆಸ್ಕ್‌ ವತಿಯಿದ ಮೈಸೂರು ನಗರದಲ್ಲಿ ಕೈಗೊಂಡಿರುವ ಯೋಜನೆ ಮೈಸೂರು : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದಿಂದ ಮೈಸೂರು…

3 hours ago

ಕೇರಳಂ | ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್ ಆಯ್ಕೆ

ಕೇರಳಂ : ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಆಯ್ಕೆಯಾಗಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ…

3 hours ago